ಗುರುವಾರ ವಿಜಯ ಮಲ್ಯರು ಮಂಗಳೂರು ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ಮಲ್ಯರೊಂದಿಗೆ ಪಿಂಕಿ ಲಾಲ್ವಾಣಿ,ನಪೀಸಾ ಮತ್ತು ಮೇಜರ್ ರಾಜೇಶ್ ಮಿತ್ರ ಇದ್ದರು. ಶ್ರೀ ಕ್ಷೇತ್ರದಲ್ಲಿ ಆನೆ, ಮಂಗಳವಾದ್ಯದೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಆರಂಭದಲ್ಲಿ ಸ್ವರ್ಣದ್ವಾರದ ಕೆತ್ತನೆಯನ್ನು ವೀಕ್ಷಿಸಿದ ವಿಜಯ ಮಲ್ಯ ಶ್ರೀ ದೇವಳದ ಗರ್ಭಗುಡಿಯ ಎದುರು ¸ÀªÀĦðಸಿದರು. ದೇವಳದ ಪ್ರಧಾನ ಅರ್ಚಕ ವೆ.ಮೂ.ಬಿ.ಕೇಶವ ಜೋಗಿತ್ತಾಯರು zsÁ«Äð ಕ ವಿಧಿವಿಧಾನಗಳನ್ನು ನೆರವೇರಿಸಿದರು.ಪುರೋಹಿತರಾದ ಮಧುಸೂದನ ಕಲ್ಲೂರಾಯರು ಸಂಕಲ್ಪ ವಿಧಿಯನ್ನು ನೆರವೇರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣಪ್ರಸಾದ್ ಮಡ್ತಿಲ, ಸಮಿತಿ ಸದಸ್ಯರಾದ ಚಂದ್ರಶೇಖರ ತಳೂರು, ಸುಬ್ರಹ್ಮಣ್ಯ ಭಟ್, ಮೋಹನ್ ರಾಮ್ ಸುಳ್ಳಿ, ಕಿಶೋರ್ ಶೀರಾಡಿ, ಮೋನಪ್ಪ ಮಾನಾಡು, ವನಜಾ ವಿ. ಭಟ್, ಯಮುನಾ ರೈ, ಕಾರ್ಯನಿರ್ವಹಣಾಧಿಕಾರಿಗಳಾದ ಎಚ್.ಎಂ.ಕಾಳಿ ಮತ್ತು ರವೀಂದ್ರ ಉಪಸ್ಥಿತರಿದ್ದರು.
ಸ್ವರ್ಣದ್ವಾರ:
2.400ಕೆಜಿ ಚಿನ್ನದಲ್ಲಿ ¤«Äðತವಾದ ಈ ಸುವರ್ಣ ದ್ವಾರದಲ್ಲಿ ಶಿಲ್ಪಿ ಸುಧಾಕರ ಡೋಂಗ್ರೆಯವರು ನಾಗಾಭರಣ, ಹೆಡೆ, ಬಳ್ಳಿ, ಗಜಪಡಿಗಳನ್ನು ನಾಜೂಕಾಗಿ ರಚಿಸಿರುತ್ತಾರೆ. ಶ್ರೀ ದೇವರಿಗೆ ಸಮರ್ಪಣೆ ಮಾಡಿದ ವೇಳೆ ವಿಜಯ ಮಲ್ಯ ತನ್ನ ಇಷ್ಟಾರ್ಥ ನೆರವೇರಿದಲ್ಲಿ ಗರ್ಭಗುಡಿಯ ಮಹಾದ್ವಾರಕ್ಕೆ ಚಿನ್ನದ ಬಾಗಿಲನ್ನು ಶೀಘ್ರವೇ C¦ðಸುವುದಾಗಿ ಸಂಕಲ್ಪ ಮಾಡಿದರು.
ವಿಜಯಮಲ್ಯ ಹಾಗೂ ಪರಿವಾರದವರನ್ನು ಕೇಶವ ಜೋಗಿತ್ತಾಯರು ಶಾಲು ಹೊದಿಸಿ, ಗಂಧಪ್ರಸಾದ ಹಾಗೂ ಮಹಾಪ್ರಸಾದ ನೀಡಿ ಹರಸಿದರು.
No comments:
Post a Comment