Tuesday, 21 August 2012

Fr.George Press


ಸ್ವಾತಂತ್ರ್ಯದಿನದಂದು  ರಾಷ್ಟ್ರಧ್ವಜಕ್ಕೆ ಉದ್ದೇಶಪೂರ್ವಕವಾಗಿ  ಅಪಮಾನ ಮಾಡಿಲ್ಲ , ಅದೊಂದು ಅಚಾತುರ್ಯ ಘಟನೆ, ಹೀಗಾಗಿ  ಸಮಸ್ತ ದೇಶಾಭಿಮಾನಿಗಳಲ್ಲಿ  ಕ್ಷಮೆ ಕೋರುತ್ತೇವೆ ಎಂದು  ಪುತ್ತೂರು ವಲಯದ ಮಲಕರ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಪರವಾಗಿ ಕುಂತೂರು ZÀZïð ಧರ್ಮಗುರು  eÁeïð ಹೇಳಿದ್ದಾರೆ.ಇದೇ ವೇಳೆ ಹಿಂದೂ ಸಂಘಟನೆಗಳು ಘಟನೆಯನ್ನು  ಖಂಡಿಸಿದ್ದಲ್ಲದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು  ಒತ್ತಾಯಿಸಿದ್ದಾರೆ.
 ದೇಶಾಭಿಮಾನದಿಂದ ಕಳೆದ 2 ವರ್ಷಗಳಿಂದ ಸ್ವಾತಂತ್ರ್ಯ ದಿನದ ಪ್ರಯುಕ್ತ ಧ್ವಜಾರೋಹಣ ಮಾಡುತ್ತಿದ್ದೇವೆ.ಈ ಬಾರಿ  ಕಬ್ಬಿಣದ ಕಂಬದಲ್ಲಿ  ರಾಷ್ಟ್ರಧ್ವಜ ಅರಳಿಸುವ ಮೂಲಕ ಆಚರಿಸಿದ್ದೇವೆ. ಆದರೆ ಅಚಾತುರ್ಯದಿಂದಾಗಿ , ಅಲ್ಲಿನ ಸಿಬ್ಬಂದಿಗಳಿಗೆ ಅರಿವಿಲ್ಲದೆ ಈ ರೀತಿ ಶಿಲುಬೆಯ ಕೆಳಗೆ ರಾಷ್ಟ್ರಧ್ವಜ ಅರಳಿಸುವ ಕೆಲಸ ಆಗಿದೆ. ಇದು ನಮ್ಮಿಂದಾದ ತಪ್ಪು. ಹೀಗಾಗಿ ಸಮಸ್ತ ದೇಶಾಭಿಮಾನಿಗಳಲ್ಲಿ  ಕ್ಷಮೆ ಕೇಳುವುದಾಗಿ eÁeïð ಹೇಳಿದರು. ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ eÁeïð, ಇದು  ಇಡೀ ಸಮಾಜಕ್ಕೆ ಪಾಠವಾಗಿದೆ , ಸ್ವಾತಂತ್ರ್ಯದ ಸಂದರ್ಭದಲ್ಲಿ  ಅನೇಕ ಕಡೆಗಳಲ್ಲಿ  ರಾಷ್ಟ್ರಧ್ವಜವನ್ನು  ಸರಿಯಾದ ರೀತಿಯಲ್ಲಿ  ಅರಳಿಸಲಿಲ್ಲ. ಹಾಗಾಗಿ ಈ ಮೂಲಕ ಇಡೀ ಸಮಾಜಕ್ಕೆ ಪಾಠವಾಗಿದೆ ಎಂದು ಹೇಳಿದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...