Tuesday, 21 August 2012

Panjina Meravanige Puttur


ಪುತ್ತೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 66 ವರ್ಷಗಳಾದರೂ ಕೂಡಾ ಸ್ವಾಭಿಮಾನದ ಕಿಚ್ಚು ಇನ್ನೂ ಭಾರತೀಯರಲ್ಲಿ ಮೊಳಗಲೇ ಇಲ್ಲ. ಈ ಕಿಚ್ಚು ಮೊಳಗಬೇಕಾಗಿದೆ , ದೇಶವನ್ನು ಭಾರತೀಯರೇ ಆಳುವಂತಾಗಬೇಕು ಎಂದು  ಜಾಗೋ ಭಾರತ್ ಸಂಚಾಲಕ ಅಶ್ವತ್ಥ ಹೆಗಡೆ ಹೇಳಿದರು.
ಅವರು  ಪುತ್ತೂರಿನಲ್ಲಿ  ಮಂಗಳವಾರದಂದು  ರಾತ್ರಿ ಕಿಲ್ಲೆ, ಮೈದಾನದಲ್ಲಿ  ನಡೆದ ಅಖಿಲ ಭಾರತ ಸಂಕಲ್ಪ ದಿನಾಚರಣೆಯ ಕಾರ್ಯಕ್ರಮದಲ್ಲಿ  ದಿಕ್ಸೂಚಿ ಭಾಷಣ ಮಾಡಿದರು. ಈ ದೇಶವು ಅಖಂಡ ಭಾರತವಾದ ಸ್ವಾತಂತ್ರ್ಯ ದಿನವನ್ನು  ಆಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ  ಇಂದಿಗೂ ನಮ್ಮ ಹೋರಾಟ ನಡೆಯುತ್ತಲೇ ಇದೆ. ಆದರೆ ಸ್ವಾತಂತ್ರ್ಯದ ದಿನವೇ ಈ ದೇಶ ತುಂಡಾದದ್ದು «¥ÀAiÀiÁð¸À  ಎಂದ ಅವರು  ಈ ದೇಶವು ಎಲ್ಲಾ ರೀತಿಯಿಂದಲೂ ಸಂಮೃದ್ಧವಾಗಿದೆ ಹೀಗಾಗಿ ತಾಯಿ ಭಾರತಿಗೆ ನಾವು ಯಾವತ್ತೂ ಋಣಿಯಾಗಿರಬೇಕು ಅಲ್ಲದೆ ಅವಳ ಸೇವೆಗೆ ಕಟಿಬದ್ದರಾಗಬೇಕು ಎಂದು  ಹೇಳಿದರು.
ಸಭಾಧ್ಯಕ್ಷತೆಯನ್ನು ಪುತ್ತೂರು ಜಿಲ್ಲಾ ವಿಹಿಂಪ ಮಾಜಿ ಅಧ್ಯಕ್ಷ ಪೂವಪ್ಪ ವಹಿಸಿದರು, 
ವೇದಿಕೆಯಲ್ಲಿ ಪ್ರಮುಖರಾದ ಯಾದವ ಕುಮಾರ್ , ಡೀಕಯ್ಯ ಪೆರುವೋಡಿ  ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಮುನ್ನ ಬೊಳುವಾರಿನಿಂದ ಬೃಹತ್ ಸಂಖ್ಯೆಯ ಕಾರ್ಯಕರ್ತರು  ದೊಂದಿ ಮೆರವಣಿಗೆಯಲ್ಲಿ  ಭಾಗವಹಿಸಿದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...