Friday, 13 October 2017

PUTTUR POLICE

ವಗರ್ಾವಣೆ ಗೊಂಡ ಎಸ್ ಐ ಮತ್ತು ಸಿಬ್ಬಂದಿಗಳ ಹಾಗೂ ಪ್ರೊಬೇಷನರಿ ಎಸ್ ಐ ಗಳಿಗೆ ಬೀಳ್ಕೋಡುಗೆ ಹಾಗೂ ಪುತ್ತೂರಿಗೆ ವಗರ್ಾವಣೆ ಗೊಂಡು ಕತ್ರ್ತವ್ಯಕ್ಕೆ ಹಾಜರಾದ ಎಸ್ಐ ಮತ್ತು ಸಿಬ್ಬಂದಿಗಳನ್ನು ಸ್ವಾಗತಿಸಿ ಅಭಿನಂದಿಸುವ ಸಮಾರಂಭ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಭಾಭವನದಲ್ಲಿ  ನಡೆಯಿತು.

ಪುತ್ತೂರು ನಗರ ಪೋಲೀಸ್ ಠಾಣೆ ಯ ವೃತ್ತ ನಿರೀಕ್ಷಕ ಮಹೇಶ್ ಪ್ರಾಸಾದ್ರವರು ಅದ್ಯಕ್ಷತೆ ವಹಿಸಿ ಮಾತನಾಡಿ ಪೋಲೀಸ್ ಸಿಬ್ಬಂದಿಗಳ ಕಷ್ಟಸುಖದ ಕುರಿತು ತಿಳಿದಿದೆ ಸಾರ್ವಜನಿಕ ಸ್ಥಳದಲ್ಲಿ ಸಿಬ್ಬಂದಿಗಳಿಗೆ ಅವಮಾನ ಆಗಬಾರದು ಹಾಗೆ ಒಂದು ವೇಳೆ ಆದರೆ ಸುಮ್ಮನಿರುವುದಿಲ್ಲ ಒಳ ಅವಮಾನಕ್ಕೆ ಒಳಗಾಗಬೇಡಿ ಅಪರಾಧನಿಯಂತ್ರಣ ಮಾಡಲು ನಮ್ಮ ಜೊತೆ ಹೆಗಲು ಕೊಡಿ ಎಂದು ಹೇಳಿದರು. ಪುತ್ತೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಮೇಲೆ ನಾವು ಪುತ್ತೂರಿನ ಜನತೆ ನೆಮ್ಮದಿಯಿಂದ ಇರಲಿ ಎಂದು ಕೆಲಸ ನಿರ್ವಹಿಸುತ್ತೇವೆ. ಹೊಸದಾಗಿ ಬಂದಿರುವ ಸಿಬಂದಿಗಳು ಡಿ ಮೋರಲೈಸ್ಡ್ ಆಗುವ ಅವಶ್ಯಕತೆ ಇಲ್ಲ. ನಾವು ಪ್ರಾಣಿಗಳನ್ನು ಕಂಟ್ರೋಲ್ ಮಾಡುವುದಿಲ್ಲ ಮನುಷ್ಯರನ್ನು ಕಂಟ್ರೋಲ್ ಮಾಡುವವರು ಎಂದು ತಿಳಿದಿರಲಿ ಎಂದು ಸಿಬಂದಿಗಳು ಎಚ್ಚರಿಸಿದರು.


ಪುತ್ತೂರು ನಗರ ಸಂಚಾರ ಠಾಣೆಯ ಎಸ್ ಐ ಜಗದೀಶ ರೆಡ್ಡಿ ಯವರು ಮಾತನಾಡಿ ನಮ್ಮ ಪಾಲಿಗೆ ವಗರ್ಾವಣೆ ಸಂದರ್ಭವೇ ಸಮಾರಂಭ. ಪುತ್ತೂರಿಗೆ ವಗರ್ಾವಣೆ ಆದ ಮೇಲೆ ನೆಮ್ಮದಿ ಸಿಕ್ಕಿದೆ ಎಂದರು.ಪುತ್ತೂರು ಕ್ಷೇತ್ರ ಪವಿತ್ರ ಕ್ಷೇತ್ರ ಇಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು.



ಇದೇ ಸಂದರ್ಭದಲ್ಲಿ ವಗರ್ಾವಣೆ ಗೊಳಗಾದವರು ಮತ್ತು ಹೊಸದಾಗಿ ಪುತ್ತೂರು ಠಾಣೆಗೆ ಆಗಮಿಸಿದ ಸಿಬಂದಿಗಳು ಅವರ  ಅನಿಸಿಕೆ ವ್ಯಕ್ತ ಪಡಿಸಿದರು.ಎಸ್ ಐ ಓಮನ ಕೆ ಹಾಗೂ ಎ ಎಸ್ ಐಗಳಾದ ಲೋಕನಾಥ್ ರುಕ್ಮಯ್ಯ ಗೌಡ , ಜಯರಾಮ  ,ಉಮೇಶ್ ಮತ್ತಿರರು  ವೇದಿಕೆಯಲ್ಲಿ ಉಪಸ್ಥಿತರಿದ್ದರು
 

Thursday, 12 October 2017

BJP PADAYATHRE SAMAROPA

ಪುರಾಣಪ್ರಸಿದ್ದ ಅವಳಿವೀರರಾದ ಕೋಟಿಚೆನ್ನಯರ ತಾಯಿ ದೇಯಿ ಬೈದೇತಿಯ ಪರಮ ಪವಿತ್ರ ಕ್ಷೇತ್ರ ಪಡುಮಲೆಯಲ್ಲಿ ತಾಯಿ ದೇಯಿ ಬೈದೇತಿಯ ಮೂತರ್ಿಯ ಜತೆ ಅಶ್ಲೀಲ ಭಂಗಿಯಲ್ಲಿ ಪೊಟೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಮತಾಂಧನ ವಿರುದ್ದ ಹಾಗೂ ಹಿಂದೂಗಳ ಭಾವನೆ, ಶ್ರದ್ಧಾಕೇಂದ್ರಗಳ ರಕ್ಷಣೆಗಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲೆಯ ಬಿಜೆಪಿ ಶಾಸಕೆ ನೇತೃತ್ವದಲ್ಲಿ ಪಡುಮಲೆಯಲ್ಲಿರುವ ದೇಯಿಬೈದೆದಿ ಔಷಧವನಕ್ಕೆ ಪಾದಯಾತ್ರೆ ಮಂಗಳವಾರ ನಡೆಯಿತು.
ಇತಿಹಾಸ ಪ್ರಸಿದ್ಧ ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಹಿಂದೂ ಮಾತೆಗೆ ಆದ ಅವಮಾನ ಹಾಗೂ ಶ್ರದ್ಧಾ ಕೇಂದ್ರಗಳ ರಕ್ಷಣೆಗೆ ಆಗ್ರಹಿಸಿ ನಡೆದ ಜಗೃತಿ ಪಾದಯಾತ್ರೆಯಲ್ಲಿ ದ.ಕ. ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಮಂದಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪುತ್ತೂರು ಕೇಂದ್ರದಿಂದ ಮುಡುಪಿನಡ್ಕ ದೇಯಿ ಬೈದ್ಯೆತಿ ಔಷಧ ವನದ ತನಕ ಸುಮಾರು 19 ಕಿ.ಮೀ. ದೂರದ ತನಕ ಕ್ರಮಿಸಿದರು.
ಮೆರವಣಿಗೆಯಲ್ಲಿ ಕೇರಳದ ಚೆಂಡೆ ಮೇಳ, ಸಾಸಿಕ್ ಬ್ಯಾಂಡ್, ಹುಲಿ ವೇಷ ವಿಶೇಷ ಮೆರುಗನ್ನು ನೀಡಿತು. ಮೆರವಣಿಗೆಯಲ್ಲಿ ಸಾಗಿದ ಕಾರ್ಯಕರ್ತರಿಗೆ ಅಲ್ಲಲ್ಲಿ ಪಾನೀಯದ ವ್ಯವಸ್ಥೆ, ಕುಂಬ್ರದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕ ಎಸ್. ಅಂಗಾರ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾಣರ್ಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಹಿಳಾ ಮೋಚರ್ಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಜಿಲ್ಲಾಧ್ಯಕ್ಷೆ ಪೂಜಾ ಪೈ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ಮುಖಂಡರಾದ ಉಮಾನಾಥ ಕೋಟ್ಯಾನ್, ಉಡುಪಿ ಜಿಲ್ಲಾ ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ, ರಾಜೇಶ್ ನಾಕ್ ಉಳಿಪಾಡಿಗುತ್ತು, ಹಿಂದೂ ಸಂಘಟನೆಗಳ ಪ್ರಮುಖ ಸತ್ಯಜಿತ್ ಸುರತ್ಕಲ್, ಅರುಣ್ ಕುಮಾರ್ ಪುತ್ತಿಲ, ಮುರಳೀಕೃಷ್ಣ ಹಸಂತಡ್ಕ, ಮುಖಂಡರಾದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಡಾ. ಎಂ.ಕೆ. ಪ್ರಸಾದ್, ಪುಲಸ್ತ್ಯಾ ರೈ, ಶಿವರಂಜನ್ ಸೇರಿದಂತೆ ತಾ.ಪಂ. ಪಾಲ್ಗೊಂಡರು.
-----------------
ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರಾರ್ಥನೆ
ಪಾದಯಾತ್ರೆ ಆರಂಭಕ್ಕೆ ಮೊದಲು ಪುತ್ತೂರಿನ ಉಳ್ಳಾಯ ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದಲ್ಲಿ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯದ ಬಳಿಯಿಂದ ಆರಂಭಗೊಂಡು ಪುತ್ತೂರು ನಗರ, ಸಂಪ್ಯ, ಕುಂಬ್ರ, ಕೌಡಿಚ್ಚಾರು ಮಾರ್ಗವಾಗಿ ಸಾಗಿದ ಮೆರವಣಿಗೆಗೆ ಅಲ್ಲಲ್ಲಿ ಕಾರ್ಯಕರ್ತರು ಸೇರ್ಪಡೆಗೊಂಡರು. ಅಲ್ಲಲ್ಲಿ ಬ್ಯಾನರ್, ಕಟೌಟ್ಗಳ ಸ್ವಾಗತ ನೀಡಲಾಯಿತು. ಪೆರಿಗೇರಿ ಶ್ರೀ ಅಯ್ಯಪ್ಪ ಭಜನ ಮಂದಿರದಲ್ಲಿ ಸಂಜೆ ಸಭಾ ಕಾರ್ಯಕ್ರಮ ನಡೆಯಿತು.
---------------
ದುಷ್ಟ ಶಕ್ತಿಗಳಿಗೆ ಕಠಿನ ಶಿಕ್ಷೆಯನ್ನು ನೀಡುವಂತೆ ಪ್ರಾರ್ಥನೆ
ಮೆರವಣಿಗೆಯಲ್ಲಿ ಸಾಗಿದ ಕಾರ್ಯಕರ್ತರು ಹಾಗೂ ಮುಯಖಂಡರು ಪೆರಿಗೇರಿ ಭಜನ ಮಂದಿರದಲ್ಲಿ ಸಮಾವೇಶಗೊಂಡರು. ಅಲ್ಲಿಂದ ಪ್ರಮುಖರು ಮಾತ್ರ ತೆರಳಿ ಮುಡುಪಿನಡ್ಕ ದೇಯಿ ಬೈದ್ಯೇತಿ ಔಷ ವನದ ಪ್ರಮುಖ ದ್ವಾರದ ಬಳಿ ಪ್ರಾರ್ಥನೆ ಸಲ್ಲಿಸಿ ಸಮಾಜದಲ್ಲಿ ಕಳಂಕ ತರುವವರ, ದುಷ್ಟ ಶಕ್ತಿಗಳ ವಿರುದ್ಧ, ದೇಯಿ ಬೈದ್ಯೆತಿಗೆ ಅವಮಾನ ಮಾಡಿದ ಆರೋಪಿ ಹಾಗೂ ಪ್ರಕರಣದ ಹಿಂದಿರುವ ದುಷ್ಟ ಶಕ್ತಿಗಳಿಗೆ ಕಠಿನ ಶಿಕ್ಷೆಯನ್ನು ನೀಡುವಂತೆ ಪಡುಮಲೆ ಕ್ಷೇತ್ರದ ದೈವಗಳಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
-----------
 ರಾಜ್ಯ ಸಕರ್ಾರವು ಮತಾಂದ ಶಕ್ತಿಗಳ ವಿರುದ್ದ ಹೋರಾಡುವ ಬದಲು ಹಿಂದೂಗಳ ಧಾಮರ್ಿಕ ಭಾವನೆಗೆ ಧಕ್ಕೆ ತರುವ ಕಾರ್ಯ ವೆಸಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕಾಡು ನಾಶಗೈದು ಹುಲಿ ಕುಣಿತ ನಡೆಸುತ್ತಿದ್ದಾರೆ. ಹೀಗೆ ಮುಂದುವರಿದರೆ ಹಿಂದೂ ಸಮಾಜ ಉಸ್ತುವಾರಿ ಸಚಿವರನ್ನು ಶಾಶ್ವತವಾಗಿ ಹುಲಿ ಕುಣಿಯುವಂತೆ ಮಾಡುತ್ತಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ದೇಯಿ ಬೈದೇತಿಯಯ ಚಿತ್ರವನ್ನು ಆಶಲೀಲವಾಗಿ ಚಿತ್ರಿಸಿದ ಮತಾಂಧನ ವಿರುದ್ದ ಹಾಗೂ ಹಿಂದೂಗಳ ಭಾವನೆ, ಶ್ರದ್ಧಾಕೇಂದ್ರಗಳ ರಕ್ಷಣೆಗಾಗಿ ಬಿಜೆಪಿ ನೇತೃತ್ವದಲ್ಲಿ ನಡೆದ ಪಡುಮಲೆಯಲ್ಲಿರುವ ದೇಯಿಬೈದೆದಿ ಔಷಧವನಕ್ಕೆ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾಂಗ್ರೆಸ್ ಸಕರ್ಾರ ಹಿಂದುಗಳ ನಂಬಿಕೆಗೆ ಪೆಟ್ಟು ನೀಡುತ್ತಿದೆ ಎಂಬುದಕ್ಕೆ ಈಗ ಜಾರಿಗೆ ಉದ್ದೇಶಿಸಿರುವ ಮೂಡನಂಬಿಕೆ ವಿರೋಧಿ ಕಾನೂನು, ಹಿಂದೂ ದೇವ, ದೈವಗಳಿಗೆ ಅಪಮಾನ, ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರ ತಾಯಿ ಮಹಾಮಾತೆ ದೇಯಿ ಬೈದೇತಿಗೆ ಅವಮಾನ ಮತ್ತಿತರ ಕೆಲಸಗಳ ಮೂಲಕ ಹಿಂದೂ ನಂಬಿಕೆಗೆ ಪೆಟ್ಟು ನೀಡುತ್ತದೆ. ಹಿಂದೂ ಧರ್ಮದ ಮೇಲೆ ಸವಾರಿ ಮಾಡುತ್ತದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ರಾಜ್ಯವನ್ನು ಸಿದ್ಧರಾವಣ ಆಡಳಿತ ಆಳಿದರೆ ಜಿಲ್ಲೆಯನ್ನು ನಾಥ ರಾವಣ ಆಳುವ ಮೂಲಕ ಇಲ್ಲಿನ ಮತೀಯ ಶಕ್ತಿಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಹಿಂದೂ ಆರಾಧನಾ ಕೇಂದ್ರಗಳ ಮೇಲೆ ಆಕ್ರಮಣ, ಹಿಂದುಗಳ ಭಾವನೆಗಳ ಮೇಲೆ ಆಕ್ರಮಣ ಮಾಡಿದವರನ್ನು ಈ ಇಬ್ಬರು ರಾವಣರು ರಕ್ಷಿಸುತ್ತಿದ್ದಾರೆ. ಈ ರಾವಣರನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೋಗೆಯಲೇ ಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ವಿಧಾನಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಪುತ್ತೂರು ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದಶರ್ಿಗಳಾದ ಕ್ಯಾ. ಬ್ರಿಜೇಶ್ ಚೌಟ, ಉಮಾನಾಥ ಕೋಟ್ಯಾನ್, ಸುದರ್ಶನ್ ಮೂಡಬಿದ್ರೆ, ವಿವಿಧ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರಾದ ಈಶ್ವರ ಕಟೀಲ್, ಡಿ. ವೇದವ್ಯಾಸ ಕಾಮತ್, ವೆಂಕಟ್ ವಳಲಂಬೆ, ಡಾ. ಭರತ್ ಶೆಟ್ಟಿ, ರಂಜನ್ ಗೌಡ, ದೇವದಾಸ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ರಾಜ್ಯ ಬಿಜೆಪಿ ಯುವಮೋರ್ಚ ಉಪಾಧ್ಯಕ್ಷ ಶಿವರಂಜನ್, ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಗೌಡ ಉಪಸ್ಥಿತರಿದ್ದರು.
ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ಪುತ್ತೂರು ನಗರ ಮಂಡಲ ಅಧ್ಯಕ್ಷ ಕೆ. ಜೀವಂಧರ ಜೈನ್ ವಂದಿಸಿದರು. ಪುತ್ತೂರು ನಗರಸಭಾ ಸದಸ್ಯ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
-------------
ಸಾಮೂಹಿಕ ಪ್ರಾರ್ಥನೆ
ಸಭಾಕಾರ್ಯಕ್ರಮದ ಬಳಿಕ ಮುಡಿಪಿನಡ್ಕದಲ್ಲಿರುವ ದೇಯಿ ಬೈದೇತಿ ಔಷಧಿ ವನದ ಮುಂದೆ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಧಾಮರ್ಿಕ ಅಪಮಾನಗೊಳಿಸಿದ ಆರೋಪಿಗಳಿಗೆ ಶಿಕ್ಷೆಯಾಗಬೇಕು, ರಾಜ್ಯ ಸಕರ್ಾರಕ್ಕೆ ಉತ್ತಮ ಬುದ್ಧಿಕೊಡಬೇಕು ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

Tuesday, 12 September 2017

janajagrthi Samavesh_Akshaya Gokale

 ಕೇರಳದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಲವ್ ಜಿಹಾದ್ ಕರಾವಳಿ ಕನರ್ಾಟಕವನ್ನು ದಾಟಿ ದೇಶದೆಲ್ಲೆಡೆ ವ್ಯಾಪಿಸಿದೆ. ಇದರ ವಿರುದ್ಧ ಜಾಗೃತ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಸಾಮಾಜಿಕ ಚಿಂತಕ ಶ್ರೀಕಾಂತ ಶೆಟ್ಟಿ ಉಡುಪಿ ಹೇಳಿದರು.
ಅವರು ಪಾಲ್ತಾಡಿ ಹಿಂದೂ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಅಂಕತ್ತಡ್ಕ ಮೈದಾನದಲ್ಲಿ ರವಿವಾರ ನಡೆದ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಕೋಟಿ ಚೆನ್ನಯರ ತಾಯಿ ದೇಯಿಬೈದೇತಿಯನ್ನು ಅವಮಾನಕಾರವಾಗಿ ಚಿತ್ರಿಸಿದ ಮತಾಂಧರು, ಹಿಂದೂ ಸಮಾಜವನ್ನು ನಾನಾ ರೀತಿಯಲ್ಲಿ ಘಾಸಿಗೊಳಿಸುತ್ತಿದ್ದಾರೆ. ಇಂತಹ ಜಾಲದ ವಿರುದ್ಧ ಪೊಲೀಸ್ ಇಲಾಖೆ ಮೌನವಾಗಿದ್ದು, ಇದನ್ನು ಹಿಂದೂ ಸಮಾಜವೇ ಎದುರಿಸಿ ತಕ್ಕ ಉತ್ತರ ನೀಡಬೇಕು ಎಂದರು
ಧರ್ಮರಕ್ಷಣೆಗಾಗಿ ಪ್ರತಿ ಮನೆ-ಮನೆಯಲ್ಲೂ ಜಾಗೃತಿ ಮೂಡಬೇಕಿದೆ. ಮತಾಂಧ ಇಸ್ಲಾಮಿಕ್ ಭಯೋತ್ಪಾದಕರು ಹಿಂದೂ ಸಮಾಜದ ಯುವತಿಯರನ್ನು ಮತಾಂತರಗೊಳಿಸಿ, ಭಯೋತ್ಪಾದನೆಗೆ ಬಳಸುವ ಹುನ್ನಾರ ನಡೆಸಿದ್ದಾರೆ. ಗೌರಿ ಲಂಕೇಶ್ ಅವರ ಹತ್ಯೆಯನ್ನು ಹಿಂದೂ ಸಂಘಟನೆಯ ತಲೆ ಕಟ್ಟುವ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಅವರ ಆಪಾದಿಸಿದರು.
ಉಪನ್ಯಾಸಕಿ ಅಕ್ಷಯ ಗೋಖಲೆ ಮಾತನಾಡಿ, ಶ್ರೇಷ್ಠ ವಿಚಾರಧಾರೆಗಳನ್ನು ಜಗತ್ತಿಗೆ ಸಾರಿದ ದೇಶ ನಮ್ಮದು. ಮಾತೃಪ್ರಧಾನ ವ್ಯವಸ್ಥೆಯ ಈ ನೆಲದಲ್ಲಿ ಮತಾಂಧ ದುರುಳರು ಹೆಣ್ಮಕ್ಕಳನ್ನು ಬಲೆ ಬೀಳಿಸುವ ಸಂಚು ನಡೆದಿದೆ. ಸಾಮಾಜಿಕ ಜಾಲ ತಾಣ ಬಳಸಿ, ಹಿಂದೂ ಯುವತಿಯರನ್ನು ಬಲೆಗೆ ಬೀಳಿಸುವ ಟಾಗರ್ೇಟ್ ಮಾಡಿರುವ ಮತಾಂಧ ಶಕ್ತಿಗಳ ವಿರುದ್ಧ ಪ್ರತಿ ಹಿಂದೂ ಮನೆಯವರು ಎಚ್ಚೆತ್ತುಕೊಳ್ಳಬೇಕು . ನಡು ರಾತ್ರಿಯಲ್ಲಿ ಮೊಬೈಲ್ ಬಳಸುವ ಹೆಣ್ಮಕ್ಕಳ ಬಗ್ಗೆ ಮನೆ ಮಂದಿ ಎಚ್ಚರದಿಂದಿರಬೇಕು ಎಂದು ಅವರು ಹೇಳಿದರು.
ಸಿನಿಮಾ ನಟ ಶಾರುಖ್ಖಾನ್, ಗೌರಿಖಾನ್ಗೆ ಮರುಳಾಗಿ ಹಿಂದೂ ಮನೆಯ ಲಕ್ಷ್ಮೀ ಕೊನೆಗೆ ಲಕ್ಷ್ಮೀ ಖಾನ್ ಆಗುವುದು ಬೇಡ. ಅದಕ್ಕಾಗಿ ಮನೆಯೊಳಗೆ ಸಂಸ್ಕಾರ, ಸಂಸ್ಕೃತಿ ಪಾಠ ಆಗಬೇಕು. ಇದಕ್ಕೆ ಸಂಕಲ್ಷ ಸಮಾವೇಶ ಪ್ರೇರಣೆಯಾಗಲಿ ಎಂದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಸ್ವಾ ಶ್ರೀ ಮಾತಾನಂದಮಯಿ,  ಹಿಂದೂ ಸಮಾಜದ ವಿರುದ್ಧ ದುಷ್ಟ ಶಕ್ತಿಗಳು ಆಕ್ರಮಣ ಮಾಡುವಾಗ ಅದನ್ನು ಎದುರಿಸಿ ಸಂರಕ್ಷಿಸಬೇಕಾದ ಶಕ್ತಿ ಈ ಧರ್ಮಕ್ಕೆ ಇದೆ. ಅದಕ್ಕಾಗಿ ಯುವ ಶಕ್ತಿ ಜಾಗೃತಿಗೊಳ್ಳಬೇಕಿದ್ದು, ಇಡೀ ಹಿಂದೂ ಸಮಾಜ ಸಂಘಟಿತಗೊಳ್ಳಬೇಕು ಎಂದು ಅವರು ಹೇಳಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪಾಲ್ತಾಡಿನಲ್ಲಿ ಹಕೀಂ ಎನ್ನುವ ಯುವಕ ಹಿಂದೂ ಯುವತಿಯನ್ನು ಲವ್ ಜಿಹಾದ್ ಮೂಲಕ ಮತಾಂತರಗೊಳಿಸುವ ಹುನ್ನಾರ ಮಾಡಿದ್ದು ಆತನನ್ನು 24 ತಾಸಿನೊಳಗೆ ಬಂಸಬೇಕು. ಆರೋಪಿಗೆ ರಕ್ಷಣೆ ನೀಡಿರುವ ಫಿಎಫ್ಐ ಮುಖಂಡ ಶಾಫಿ ಬೆಳ್ಳಾರೆಯನ್ನು ತತ್ಕ್ಷಣ ಬಂಸಬೇಕು. ಇಲ್ಲದಿದ್ದರೆ ಬೆಳ್ಳಾರೆ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದರು.
ಮತಾಂಧರ ಅಂಗಡಿಗಳಲ್ಲಿ ಆಥರ್ಿಕ ವ್ಯವಹಾರ ಮಾಡಬಾರದು. ಹಿಂದೂಗಳು ಹಿಂದೂಗಳೊಂದಿಗೆ ವ್ಯವಹಾರ ಮಾಡಬೇಕು ಎಂದು ಅವರು ಹೇಳಿದರು.
ಬೆಳ್ಳಾರೆ ಲಕ್ಷ್ಮೀವೆಂಕಟರಮಣ ದೇವಾಲಯದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಶಾನ್ಭೋಗ್ ಮಣಿಕ್ಕರ ಸಭಾಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಲೋಕೇಶ್ ಕುಮಾರ್ ಪಾಲ್ತಾಡಿ ಉಪಸ್ಥಿತರಿದ್ದರು.
ತ್ಯಾಂಪಣ್ಣ ರೈ ದಂಪತಿಗಳು ಸ್ವಾ ಮಾತಾನಂದಮಯಿ ಅವರಿಗೆ ಗೌರವ ಸಲ್ಲಿಸಿದರು. ಹಿಂದೂ ಹಿತರಕ್ಷಣಾ ಸಮಿತಿ ಗೌರವಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಸ್ವಾಗತಿಸಿ, ಸುಬ್ರಾಯ ಗೌಡ ವಂದಿಸಿದರು. ಹಿಂದೂ ಮುಖಂಡ ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು. ಶೀನಪ್ಪ ಶೆಟ್ಟಿ ನೆಕ್ರಾಜೆ ವಂದೇ ಮಾತರಂ ಹಾಡಿದರು. ಅತಿಥಿಗಳನ್ನು ಕಂಪ ತಾರಾನಾಥ ಬಂಗೇರ, ಸಂತೋಷ್ ಕೆಯ್ಯೂರು, ಇಂದಿರಾ ಬಿ.ಕೆ ಗೌರವಿಸಿದರು.

    ಮುಕರ್ೇತಿಯಿಂದ ಪಾಲ್ತಾಡು ಮಾರ್ಗವಾಗಿ ಅಂಕತಡ್ಕಕ್ಕೆ ಬೃಹತ್ ಮೆರವಣಿಗೆ ನಡೆಯಿತು. ಈ ಸಂದರ್ಭ ಐದು ಸಾವಿರಕ್ಕೂ ಮಿಕ್ಕಿ ಜನರು ಪಾಲ್ಗೊಂಡಿದ್ದರು.
    ಮೆರವಣಿಗೆಗೆ ಸುಳ್ಯ ಶಾಸಕ ಎಸ್.ಅಂಗಾರ ,ಸ್ಥಳೀಯ ಮುಂದಾಳು ಕುಂಙ ಚಾಲನೆ ನೀಡಿದರು.
    ಸಮಾವೇಶದಲ್ಲಿ ಕೇಸರಿ ಧ್ವಜ, ದೇಶಭಕ್ತಿಯ ಘೋಷಣೆಗಳು ಮೊಳಗಿತ್ತು.
    ಅಸೌಖ್ಯದಲ್ಲಿರುವ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ನೆರವಾಗುವ ಉದ್ದೇಶದಿಂದ ನಿ ಸಂಗ್ರಹ ಮಾಡಲಾಯಿತು.
 

janajagrthi Samavesh_Arun kumar Puthila


janajagrthi Samavesh Srikanth Shetty_1


Krishnamurthi kedila


Deviprasd&vidyashree


Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...