ಅಧುನೀಕತೆಯ ಸೆಳೆತಕ್ಕೆ ಸಿಲುಕಿ ಇಂದು ತುಳುನಾಡ ಸಂಸ್ಕೃತಿಯು ಮರೆಯಾಗುತ್ತಿರುವ ಈ ದಿನಗಳಲ್ಲಿ ಇವುಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕೆಂಬ ಸದುದ್ಧೇಶದಿಂದ ಹಲವು ಸಂಘಸಂಸ್ಥೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದೆ. ಈ ಸಂಘಸಂಸ್ಥೆಗಳ ಪಟ್ಟಿಗೆ ಪುತ್ತೂರು ತಾಲೂಕಿನ ಬಿಲ್ಲವ ಮಹಿಳಾ ಸಂಘವೂ ಸೇರುತ್ತಿದ್ದು, ಪ್ರತೀ ವರ್ಷವೂ ತುಳುನಾಡಿನ ಜನರ ಪ್ರಮುಖ ಆಚರಣೆಯಾದ ಆಟಿಯ ಸಂಭ್ರಮವನ್ನು ಸಾರ್ವಜನಿಕರ ಜೊತೆ ಸೇರಿ ಆಚರಿಸಿಕೊಂಡು ಬರುತ್ತಿದೆ. ಮರೆಯಾಗುತ್ತಿರುವ ಆಟಿ ಕಳಂಜ,ಆಟಿಯ ವಿಶೇಷ ಖಾದ್ಯಗಳು ಸೇರಿದಂತೆ ಭೂತಾರಾಧನೆಯ ಮಹತ್ವವನ್ನು ಸಾರುವ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಎಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವಂತೆ ಮಾಡುತ್ತಿದೆ.
ಊರೂರು ತಿರುಗಿ ಮಾರಿಯನ್ನು ಕಳೆಯುವ ಕಳಂಜ ಅಲ್ಲಿತ್ತು, ತುಳುನಾಡಿನ ಜನರ ಪ್ರಮುಖ ಆರಾಧನೆಯಾದ ದೈವಗಳ ನೇಮೋತ್ಸವವೂ ಅಲ್ಲಿತ್ತು. ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಿಲ್ಲವ ಮಹಿಳಾ ವೇದಿಕೆಯ ವತಿಯಿಂದ ನಡೆದ ಆಟಿಡೊಂಜಿ ದಿನದ ಕೆಲವು ಪ್ರಮುಖ ದೃಶ್ಯಗಳಿವು. ಪಾಶ್ಚಾತ್ಯ ಸಂಸ್ಕೃತಿಯ ಸೆಳೆತಕ್ಕೆ ಮರುಳಾಗಿ ಇಂದು ತಮ್ಮ ಸಂಸ್ಲೃತಿ, ಸಂಪ್ರಾದಾಯಗಳನ್ನು ಮರೆಯುತ್ತಿರುವ ಯುವ ಜನತೆಗೆ ತಮ್ಮ ನಿಜವಾದ ಸಂಪ್ರದಾಯ, ಆಚಾರ ವಿಚಾರಗಳನ್ನು ತಿಳಿಯಪಡಿಸುವ ಪ್ರಮುಖ ಉದ್ಧೇಶವನ್ನಿಟ್ಟುಕೊಂಡು ಕಳೆದ ಹಲವು ವರ್ಷಗಳಿಂದ ಈ ವೇದಿಕೆಯು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು, ಈ ಕಾರ್ಯಕ್ರಮವನ್ನು ಹಿಂದಿನಕಾಲದಲಿ ಹಿರಿಯರು ಈ ದಿನಗಳಲ್ಲಿ ಯಾವ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದರು, ಯಾವ ರೀತಿಯ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಿದ್ದರು ಎನ್ನುವುದರ ಜೊತೆಗೆ ಮನೆಗೆ ಬಂದ ಅತಿಥಿಗಳನ್ನು ಬೆಲ್ಲ,ನೀರು ನೀಡಿ ಹೇಗೆ ಸತ್ಕರಿಸುತ್ತಿದ್ದರು ಎನ್ನುವುದರ ಪರಿಚಯವನ್ನು ಇಲ್ಲಿ ಮಾಡಲಾಗಿತ್ತು
ಬೈಟ್: ಉಷಾ ಅಂಚನ್,
ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ.
ಯುವ ಪೀಳಿಗೆಯು ಇಂದು ಇಂಥಹ ಎಲ್ಲಾ ಸಂಸ್ಕಾರಗಳನ್ನು ಮರೆತಿದ್ದು, ಇವರಲ್ಲಿ ಇದನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ತಿಳಿಯಪಡಿಸುವುದು ಇದರ ಉದ್ಧೇಶವಾಗಿದೆ. ಅಲ್ಲದೆ ಆಟಿ ತಿಂಗಳಿನಲ್ಲಿ ಹಿಂದಿನ ಕಾಲದ ಜನತೆ ಬಾರೀ ಕಷ್ಟದಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದು, ಪರಿಸರದಲ್ಲೇ ದೊರಕುವ ಗಿಡ ಮರಗಳ ಬಳ್ಳಿ,ಸಸ್ಯಗಳ ಎಲೆಗಳನ್ನೇ ಆಹಾರ ಪದಾರ್ಥವಾಗಿ ಹೇಗೆ ಬಳಸಿಕೊಳ್ಳುತ್ತಿದ್ದರೂ ಎನ್ನುವುದರ ಪ್ರತ್ಯಕ್ಷದರ್ಶನವನ್ನು ಇಲ್ಲಿ ತೆರೆದಿಡಲಾಗಿತ್ತು.
ಬೈಟ್: ಶ್ರೀದೇವಿ,
ಕಾರ್ಯಕ್ರಮದ ಸಂಯೋಜಕಿ.
ಸಂಸ್ಕೃತಿ ಸಂಪ್ರದಾಯಗಳ ಪರಿಚಯದ ಜೊತೆಗೆ ಹಿರಿಯರು ಕಷ್ಟದ ಸಂದರ್ಭದಲ್ಲಿ ಆಹಾರವನ್ನಾಗಿ ಬಳಸುತ್ತಿದ್ದ ಖಾದ್ಯಗಳ ಪರಿಚಯದ ಜೊತೆಗೆ ಸ್ವಾದವನ್ನೂ ಇಲ್ಲಿಗೆ ಆಗಮಿಸಿದ ಜನರು ಆಸ್ವಾದಿಸುವ ಮೂಲಕ ಸಂತಸಪಟ್ಟರು.
No comments:
Post a Comment