Tuesday, 25 September 2018

NAMMAPUTTUR

ವಿವೇಕಾನಂದರ ಪ್ರಭಾವಕ್ಕೆ ಬಂದ ಪಾಶ್ಚಿಮಾತ್ಯ ಮಹಿಳೆ ಮಾರ್ಗರೇಟ್ ನಂತರ ಸೋದರಿ ನಿವೇದಿತಳಾಗಿ ಭಾರತಕ್ಕೆ ಬಂದು ಇಡೀ ಭಾರತಕ್ಕೆ ತಮ್ಮನ್ನು ಸಮಪರ್ಿಸಿಕೊಂಡರು. ಅಕ್ಕ ಮಾಡಿದ ಸೇವೆ ಅಗಣಿತ. ಆದರೂ ಇಂದು ನಾವು ಅವರನ್ನು ಮರೆತಿರುವುದು ದುರಂತ ಎಂದು ಸೂಲಿಬೆಲೆ ನುಡಿದರು.

 ಸ್ವಾಮಿ ವಿವೇಕಾನಂದರ ಚಿಕಾಗೋ ಧರ್ಮ ಸಮ್ಮೇಳನ ಭಾಷಣದ 125ನೇ ವಷರ್ಾಚರಣೆ ಪ್ರಯುಕ್ತ ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಇವುಗಳ ಜಂಟಿ ಆಶ್ರಯದಲ್ಲಿ ನಾಡಿನಾದ್ಯಂತ ಸಂಚರಿಸುತ್ತಿರುವ ಮತ್ತೊಮ್ಮೆ ದಿಗ್ವಿಜಯ ಎಂಬ ಹೆಸರಿನ ರಥ ಯಾತ್ರೆಯು ಸೋಮವಾರ ಸಂಜೆ ಪುತ್ತೂರಿಗೆ ಆಗಮಿಸಿದ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವಳದ ಎದುರು ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಸತ್ತು ಹೋಗಿದ್ದ ದೇಶದ ಆತ್ಮಶಕ್ತಿಯನ್ನು ಮತ್ತೆ ಬಡಿದೆಬ್ಬಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ಹಿಂದೂ ಧರ್ಮ ಚಲಾವಣೆಯಲ್ಲಿ ಇಲ್ಲದ ನಾಣ್ಯ ಎಂದು ಇಡೀ ಜಗತ್ತು ನಂಬಿದ್ದ ಸಂದರ್ಭದಲ್ಲಿ ಹಿಂದೂ ಧರ್ಮವೇ ಜಗತ್ತಿನ ಎಲ್ಲ ಮತಗಳ ಆತ್ಮ ಎಂದು ಸಾಧಿಸಿ ತೋರಿಸಿ ಕೊಟ್ಟವರು ಸ್ವಾಮಿ ವಿವೇಕಾನಂದರು ಎಂದು ಯುವಾ ಬ್ರಿಗೇಡ್ನ ಮಾರ್ಗದರ್ಶಕ ಚಕ್ರವತರ್ಿ ಸೂಲಿಬೆಲೆ ಹೇಳಿದರು.
ಕೇವಲ ಮೂರೂವರೆ ನಿಮಿಷಗಳ ಭಾಷಣದ ಬಳಿಕ ವಿಶ್ವ ವಿಖ್ಯಾತನಾದ ವಿವೇಕಾನಂದರು ಅದೇ ಭಾಷಣಕ್ಕೆ ಮುನ್ನ ಒಂದು ಲೋಟ ನೀರಿಗೂ ಬವಣೆ ಪಟ್ಟಿದ್ದರು. ಧಾಮರ್ಿಕ ಕಟ್ಟುಪಾಡು ಮುಂದಿಟ್ಟುಕೊಂಡು ಹಿಂದೂ ಧರ್ಮದ ಯಾವ ಸ್ವಾಮೀಜಿಗಳು ಚಿಕಾಗೋ ಸಮ್ಮೇಳನಕ್ಕೆ ಹೋಗಿರಲಿಲ್ಲ. ಅಂಥ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯನಾದ ನರೇಂದ್ರರು ಖೇತ್ರಿ ಮಹಾರಾಜರ ಪ್ರತಿನಿಧಿಯಾಗಿ ಅಮೆರಿಕಾಕ್ಕೆ ಹೋಗಿದ್ದರು. ಸಮ್ಮೇಳನದಲ್ಲಿ ಭಾಗವಹಿಸಲು ಸಾಕಷ್ಟು ಪರದಾಡಿದ್ದ ನರೇಂದ್ರ, ಕೊನೆಗೂ ಹಲವರ ಸಹಕಾರದಿಂದ ವೇದಿಕೆ ಹತ್ತುವ ಅವಕಾಶ ಪಡೆದರು. ಕೇವಲ ಮೂರೂವರೆ ನಿಮಿಷಗಳ ಭಾಷಣದಲ್ಲಿ ಹಿಂದೂ ಧರ್ಮ ಜಗತ್ತಿನ ಎಲ್ಲ ಧರ್ಮಗಳ ತಾಯಿ ಎಂಬುದನ್ನು ನಿರೂಪಿಸಿದರು. ಅಲ್ಲಿ ಆರು ಭಾಷಣ ಮಾಡಿದ ಅವರು, ಹಿಂದೂ ಧರ್ಮವನ್ನು ವೈಜ್ಞಾನಿಕವಾಗಿ ವಿವರಿಸಿ ಪಾಶ್ಚಿಮಾತ್ಯ ಜಗತ್ತಿನ ಮೆಚ್ಚುಗೆಗೆ ಪಾತ್ರರಾದರು ಎಂದರು.
ಒಬ್ಬ ವ್ಯಕ್ತಿಯ ಭಾಷಣ ಐದು ನಿಮಿಷವೂ ನೆನಪಿನಲ್ಲಿ ಉಳಿಯುವುದು ಕಷ್ಟವಿರುವಾಗ ವಿವೇಕಾನಂದರ ಭಾಷಣ 125 ವರ್ಷ ಕಳೆದರೂ ಇನ್ನೂ ಉಳಿದಿದೆ ಎಂದರೆ ಅವರ ವ್ಯಕ್ತಿತ್ವ ಎಂಥದ್ದು ಎಂಬುದು ಮನವರಿಕೆಯಾಗುತ್ತದೆ. ಜಗತ್ತಿನ ಮುಂದೆ ಹಿಂದೂ ಧರ್ಮವನ್ನು ಮತ್ತೊಮ್ಮೆ ಸ್ಥಾಪನೆ ಮಾಡಿದ ಕಾರಣಕ್ಕೆ ಇಂದು ನಾವು ಮತ್ತೊಮ್ಮೆ ದಿಗ್ವಿಜಯ ಹೆಸರಿನಲ್ಲಿ ರಥಯಾತ್ರೆ ಮಾಡುತ್ತಿದ್ದೇವೆ ಎಂದರು.
ಡಾ.ಸುರೇಶ್ ಪುತ್ತೂರಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನರೇಂದ್ರ ಕಾಲೇಜಿನ ಪ್ರಿನ್ಸಿಪಾಲ್ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರ್ವಹಿಸಿದರು. ರಥಯಾತ್ರೆಯಲ್ಲಿ ಸಾಗುತ್ತಿರುವ ಯುವಾ ಬ್ರಿಗೇಡ್ನ ಐವರು ಕಾರ್ಯಕರ್ತರನ್ನು ಈ ಸಂದರ್ಭ ಗೌರವಿಸಲಾಯಿತು.
ಸಭಾ ಕಾರ್ಯಕ್ರಮಕ್ಕೆ, ಮುನ್ನ ರಥಯಾತ್ರೆಯು ಸುಳ್ಯದಿಂದ ಪುತ್ತೂರಿಗೆ ಬಂದಾಗ ದಬರ್ೆಯಲ್ಲಿ ಸ್ವಾಗತಿಸಲಾಯಿತು. ಅಲ್ಲಿಂದ ಆರಂಭಗೊಂಡ
ಶೋಭಾಯಾತ್ರೆಯನ್ನು ಡಾ.ಪಿ. ಗೌರಿ ಪೈ ಮತ್ತು ಮುಳಿಯ ಕಾವೇರಮ್ಮ ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರು, ಹಿಂದೂ ಸಂಘಟನೆಗಳ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ, ಅರುಣ್ ಕುಮಾರ್ ಪುತ್ತಿಲ ಉಪಸ್ಥಿತರಿದ್ದರು. ಮೆರವಣಿಗೆಯು ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಹಾದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಸಮಾವೇಶಗೊಂಡು ಸಭಾ ಕಾರ್ಯಕ್ರಮ ನಡೆಯಿತು.


 

chakravarthi soolibele_5.mp4

chakravarthi soolibele_4.mp4

Tuesday, 2 January 2018

HinduJanajagrthi_5.mp4

HinduJanajagrthi_4.mp4

HinduJanajagrthi_3.mp4

ಲವ್ ಜಿಹಾದ್ ಮೂಲಕ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಿಂದೂ ಹೆಣ್ಣು ಮಕ್ಕಳನ್ನು ವಿದೇಶಗಳಲ್ಲಿರುವ ಭಯೋತ್ಪಾದಕರ ಕಾಮತೃಷೆ ತೀರಿಸಲು ಬಳಸುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿದರು.

    ಹಿಂದೂ ಮುಖಂಡರ ಹಾಗೂ ಸಂಘಟನೆಗಳ ಮೇಲೆ ಪುತ್ತೂರು ಸಂಪ್ಯ ಪೋಲೀಸರು ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪುತ್ತೂರಿನಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಮುಸ್ಲಿಂ ಸಮಾಜದಿಂದ, ಕ್ರೈಸ್ತ ಮಿಷನರಿಗಳಿಂದ, ಪೋಲೀಸ್ ಅಧಿಕಾರಿಗಳಿಂದ ಹೀಗೆ ಎಲ್ಲಾ ಕಡೆಯಿಂದಲೂ ಹಿಂದೂ ಸಮಾಜದ ಮೇಲೆ ದೌರ್ಜನ್ಯಗಳಾಗುತ್ತಿದೆ. ದೇಶದ್ರೋಹಿ ಮುಸ್ಲಿಂ ಸಂಘಟನೆಯಾದ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಡೆಸುವ ದೇಶದ್ರೋಹಿ ಕೆಲಸಗಳನ್ನು ಹುರಿದುಂಬಿಸುವ ಕೆಲಸವನ್ನು ಕರ್ನಾಟಕದ ಸಿದ್ಧರಾಮಯ್ಯ ಸರಕಾರ ಮಾಡುತ್ತಿದ್ದು, ಇದಕ್ಕೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕೂಡಾ ಸಾಥ್ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಹಿಂದೂಗಳ ಸಹನೆಗೂ ಒಂದು ಮಿತಿ ಇದ್ದು, ಇದೇ ರೀತಿಯ ದೌರ್ಜನ್ಯ ಮುಂದುವರಿದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಸರಕಾರವೇ ನೇರ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದರು. ಲವ್ ಜಿಹಾದ್ ಹೆಸರಿನಲ್ಲಿ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಹಿಂದೂ ಹೆಣ್ಣು ಮಕ್ಕಳನ್ನು ತನ್ನ ಬಲೆಗೆ ಬೀಳಿಸುತ್ತಿದೆ. ಅವರನ್ನು ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡು ಬಳಿಕ ಅವರನ್ನು ಮಾನವ ಬಾಂಬ್ ಆಗಿ, ಕಳ್ಳ ಸಾಗಾಟಗಾರರಾಗಿ ಹಾಗೂ ಉಗ್ರರ ಕಾಮತೃಷ್ಣ ತೀರಿಸುವವರಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.


ಇದೇ ಸಂದರ್ಭದಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ನ ಮಂಗಳೂರು ಜಿಲ್ಲಾಧ್ಯಕ್ಷ ಜಗದೀಶ್ ಸೇಣವ ಜನವರಿ 5 ರ ಒಳಗೆ ಹಿಂದೂ ಮುಖಂಡರ ಮೇಲೆ ಹಲ್ಲೆ ನಡೆಸಿದ ಸಂಪ್ಯ ಎಸೈ ಅಬ್ದುಲ್ ಖಾದರ್ ಹಾಗೂ ಮೂವರು ಕಾನ್ ಸ್ಟೇಬಲ್ ಗಳ ಸಸ್ಪಂಡ್ ಮಾಡದೇ ಹೋದಲ್ಲಿ ಜನವರಿ 7 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ದಕ್ಷಿಣಕನ್ನಡ ಜಿಲ್ಲಾ ಭೇಟಿ ನೀಡುವ ದಿನವೇ ಜಿಲ್ಲಾ ಬಂದ್ ಗೆ ಕರೆ ನೀಡಲು ಚಿಂತನೆ ನಡೆಸುವುದಾಗಿ ಎಚ್ಚರಿಸಿದರು.

HinduJanajagrthi_2.mp4

Hindu jagrtha Samavesa_1.mp4

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...