Tuesday, 6 November 2012

ದ.ಕ ಜಿಲ್ಲೆ ಹೆಸರಾಂತ ದೇವಾಲಯಗಳಲ್ಲಿ ಒಂದಾದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಜೀಣರ್ೋದದ್ದಾರ ಕಾರ್ಯ ಭರದಿಂದ ನಡೆಯುತ್ತಿದ್ದು ನಿಣರ್ಾಯಕ ಹಂತ  ತಲುಪಿದ್ದ ದೇವಳದ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು .ದೇವಳದ ಗರ್ಭಗುಡಿಯ ದೀಪದಳಿಯ ಅಧಿಷ್ಟಾನದಲ್ಲಿ 'ಪಾದುಕನ್ಯಾಸ' ಮತ್ತು ಗರ್ಭಗುಡಿಯಲ್ಲಿ 'ಸ್ವರ್ಣನಿಧಿ' ಸ್ಥಾಪನೆ ಮಾಡಲಾಯಿತು.
ಮಾಜಿಮುಖ್ಯ ಮಂತ್ರಿ ಹಾಗೂ ದೇವಳದ ಜೀಣರ್ೋದ್ದಾರ ಸಮಿತಿ ಗೌರಾವಾದ್ಯಕ್ಷರು ಆಗಿರುವ ಡಿ ವಿ.ಸದಾನಂಧ ಗೌಡ ಇನ್ನೋರ್ವ ಗೌರಾವಾದ್ಯಕ್ಷ  ಸಂಕಪ್ಪ ರೈ ಅಧ್ಯಕ್ಷರೂ ಆಗಿರುವ ಸಂಸದನಳಿನ್ ಕುಮಾರ್ ಕಟೀಲ್ ,ಶಾಸಕಿ ಮಲ್ಲಿಕಾಪ್ರಸಾದ್ ದೇವಳದ ಶಿಲ್ಪಿ ಪ್ರಸಾದ್ ಮುನಿಯಂಗಳ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿರುವ  ಜೀಣರ್ೋದ್ದಾರ ಸಮಿತಿ  ಅಧ್ಯಕ್ಷರೂ ಆಗಿರುವ ನನ್ಯ ಅಚ್ಚುತ ಮುಡೆತ್ತಾಯ ,ವ್ಯವಸ್ಥಾಪನಾ ಸಮಿತಿ ಜೀಣರ್ೋದ್ದಾರ ಸಮಿತಿ    ಸದಸ್ಯರುಗಳು  ಪಾದುಕನ್ಯಾಸ ನೆರವೇರಿಸಿದರು.ಗರ್ಭಗುಡಿಯ ನೈರುತ್ಯ ದಿಕ್ಕಿನಲ್ಲಿ ಸಿಕ್ಕಿದ ಸುಮಾರು 7.5 ಲಕ್ಷ ರೂ ಮೌಲ್ಯದ ಸ್ವರ್ಣ ಸಂಚಯದೊಂದಿಗೆ ಹೆಚ್ಚುವರಿ ಸ್ವರ್ಣವನ್ನು ದೇವಳದ ವತಿಯಿಂದ 'ಸ್ವರ್ಣ ನಿಧಿ' ಸ್ಥಾಪನೆಗೆ ಅಪರ್ಿಸಲಾಯಿತು.ಜೊತೆಗೆ ಅನೇಕ ಭಕ್ತಾಧಿಗಳು ಸ್ವರ್ಣ ಬೆಳ್ಳಿ ಮತ್ತು ನವರತ್ನವನ್ನು ಅಪರ್ಿಸಿದರು.

 

Saturday, 3 November 2012

ಸಂಸದ ನಳಿನ್ ಕುಮಾರ್ ಮಾತನಾಡಿ ಕೃಷಿಕ ಯುವಕರು ಕೆಲಸ ಅರಸಿ ವಲಸೆ ಹೋಗುತ್ತಿರುವುದರಿಂದ ಗ್ರಾಮೀಣ ಪ್ರದೇಶ ವೃದ್ಧಾಶ್ರಮವಾಗುತ್ತಿದೆ. ಉದ್ದಿಮೆ, ಆಥರ್ಿಕ ವಲಯ ,ಕಾರಿಡಾರ್,ಇನ್ನಿತರ ಯೋಜನೆಗಳಿಂದ ಕೃಷಿ ಭೂಮಿ ನಾಶವಾಗಿದೆ. ಅಲ್ಲದೆ ನಗರ ಪ್ರದೇಶದ ಕೃಷಿ ಭೂಮಿಯಲ್ಲಿ ಮಳಿಗೆಗಳು ನಿಮರ್ಾಣವಾಗುತ್ತಿದೆ. ಇವೆಲ್ಲದರ ನಡುವೆ ಕ್ಯಾಂಪ್ಕೋ ಸಂಸ್ಥೆಯ ಸಹಕಾರ ಮತ್ತು ರಾಜ್ಯ ಸರಕಾರದ ಅನುದಾನದಿಂದಾಗಿ ಕೃಷಿ ಭೂಮಿ ಬೆಳೆಯುತ್ತಿದೆ ಎಂದರು. ಕಾಲೇಜು ವಿದ್ಯಾಥರ್ಿಗಳು ಕೃಷಿ ಯಂತ್ರ ನಿಮರ್ಾಣದ ಕುರಿತು ಹೆಚ್ಚಿನ ಸಂಶೋಧನೆ ನಡೆಸಬೇಕು. ಹಾಗೂ ರೈತರು ನಡೆಸುವ ಕೃಷಿ ಸಂಶೋಧನೆಗಳಿಗೆ ಸರಕಾರದಿಂದ ಇನ್ನಷ್ಟು ಬೆಂಬಲ ಸಿಗಬೇಕು ಎಂದು ಅವರು ಹೇಳಿದರು.
ವಿಧಾನ ಸಭೆಯ ಉಪಾಧ್ಯಕ್ಷ ಎನ್ ಯೋಗೀಶ್ ಭಟ್ ಮಾತನಾಡಿ ರಾಜ್ಯ ಸರಕಾರವು ರೈತರಿಗಾಗಿ ರೂ.19600 ಕೋಟಿ ಬಜೆಟ್ನಲ್ಲಿ ಮೀಸಲಿರಿಸಿದ್ದು, ಈ ಪೈಕಿ ರೂ.5200ಕೋಟಿ ರೈತರಿಗಾಗಿ ಉಚಿತ ವಿದ್ಯುತ್ ,ರೂ.900ಕೋಟಿ ತೋಟಗಾರಿಕೆ, ರೂ862ಕೋಟಿ ಪಶುಸಂಗೋಪನೆ ,ರೂ.50 ಕೋಟಿ ರೈತರ ಸಹಾಯ ಕೇಂದ್ರಕ್ಕೆ ಮೀಸಲಿರಿಸಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ ಏಕೈಕ ರಾಜ್ಯ ಸರಕಾರ ಕನರ್ಾಟಕವಾಗಿದ್ದು, ರೈತರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದರು.

Friday, 2 November 2012


ಕೃಷಿಕರಿಗೆ  ಆದಾಯಕ್ಕಿಂತ ಹೆಚ್ಚಿನ ವೆಚ್ಚಗಳಾಗುತ್ತಿರುವುದರಿಂದ ಸಮಸ್ಯೆಯಾಗಿದ್ದು, ಇದ್ದ ಭೂಮಿಯಲ್ಲಿ ಹೆಚ್ಚಿನ ಫಸಲು ಮತ್ತು ಉತ್ಪಾದನೆ ಪಡೆಯುವ
ನಿಟ್ಟಿನಲ್ಲಿ ಪ್ರಯತ್ನಿಸುವುದೇ  ಈ ಸಮಸ್ಯೆಗೆ ಪರಿಹಾರ ಮಾರ್ಗ ಎಂದು ಧರ್ಮಸ್ಥಳದ ಧಮರ್ಾಧಿಕಾರಿ ಡಾ| ಡಿ ವಿರೇಂದ್ರ ಹೆಗ್ಗಡೆ ತಿಳಿಸಿದರು.
ಅವರು ಕ್ಯಾಂಪ್ಕೋ ನಿಯಮಿತ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಇದರ ಆಶ್ರಯದಲ್ಲಿ

ಪುತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ "ಕೃಷಿ ಯಂತ್ರ ಮೇಳ-2012" ಶುಕ್ರವಾರ
ಉದ್ಘಾಟಿಸಿ ಮಾತನಾಡಿದರು.
ಕೃಷಿಕರ ಸಾಂಸಾರಿಕ ವೆಚ್ಚ ಮತ್ತು  ನಗರ ಮಾದರಿಯ ವೈಭವೀಕರಣದಿಂದಾಗಿ ಕೃಷಿಕರ ಖಚರ್ು ವೆಚ್ಚಗಳು  ಜಾಸ್ತಿಯಾಗುತ್ತಿದ್ದು, ಈ ಹಿನ್ನಲೆಯಲ್ಲಿ

ಸಮಸ್ಯೆಯಿಂದ ಬಳಲುತ್ತಿದ್ದ ಕೃಷಿಕರು ತಮ್ಮ ಕೃಷಿಕಾರ್ಯದಲ್ಲಿ ಆಧುನೀಕರಣ , ಯಂತ್ರೋಪಕರಣ ಮತ್ತು ತಂತ್ರಜ್ಙಾನವನ್ನು ಬಳಕೆ ಮಾಡಿಕೊಳ್ಳುವ ಮೂಲಕ
ಕೃಷಿ ಆಧಾಯವನ್ನು ಹೆಚ್ಚಿಸುವ ಮುತುವಜರ್ಿ ನಡೆಯಬೇಕು ಎಂದರು.
ಪ್ರಸ್ತುತ ಕೃಷಿಕರಲ್ಲಿ ಆಸೆ ನಿರಾಸೆಗಳೊಂದಿಗೆ ಸಾಕಷ್ಟು ಬದಲಾವಣೆಗಳಾಗಿದೆ ಎಂದ ಅವರು ಕೃಷಿಕರಾದರೆ ಭವಿಷ್ಯವಿಲ್ಲವೆಂದು ಕೃಷಿಕರು  ನಗರದ ಕಡೆ

ಸಾಗುತ್ತಿದ್ದಾರೆ. ಇದರಿಂದಾಗಿ ಕೃಷಿ ಮೂಲ ನಾಶವಾಗುತ್ತಿದ್ದು, ಕೃಷಿಕರನ್ನು ಹುಡುಕುವ ಸ್ಥಿತಿ ನಿಮರ್ಾಣಗೊಂಡಿದೆ. ಕೃಷಿಕರ ಸಮಸ್ಯೆಗೆ ಬೆನ್ನು ಹಾಕಿ
ಹೋಗುವ ಬದಲು ಎದುರಿಸುವ ಮನೋಸಾಮಥ್ರ್ಯ ಬೆಳೆಸಿಕೊಳ್ಳಬೇಕು. ಇದರೊಂದಿಗೆ ಕೃಷಿಯಲ್ಲಿ ನೂತನ ಪ್ರಯೋಗಗಳನ್ನು ಅಳವಡಿಸಿಕೊಳ್ಳಬೇಕು
ಎಂದರು. ಧಮರ್ಾಧಿಕಾರಿ ಡಾ| ಡಿ ವಿರೇಂದ್ರ ಹೆಗ್ಗಡೆ ಅವರು ರಿಮೋಟ್ ಒತ್ತುವ ಮೂಲಕ ರಿಮೋಟ್ ಚಾಲಿತ ಪವರ್ ಟಿಲ್ಲರ್  ಉದ್ಘಾಟಿಸಿದರು. ಬಳಿಕ 25ನೇ ವರ್ಷದ
ಅಡಿಕೆ ಪತ್ರಿಕೆ ವಿಶೇಷಾಂಕ ಬಿಡುಗಡೆ ಮಾಡಿದರು. ವಿವೇಕಾನಂದ ಕಾನೂನು ಕಾಲೇಜು ವಿದ್ಯಾಥರ್ಿಗಳ ಕೃಷಿ ಮಿತ್ರ ಮಾಹಿತಿ ಪುಸ್ತಕ ಬಿಡುಗಡೆ 
ಮಾಡಿದರು.
ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ , ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಎಂ ಎನ್

ರಾಜೇಂದ್ರ ಕುಮಾರ್, ಭಾರತ ಸರಕಾರದ ಬಾಹ್ಯಾಕಾಶ ಮತ್ತು ಅಣು ಶಕ್ತಿ ಆಯೋಗದ ಕಾರ್ಯದಶರ್ಿ ವಿವಿ. ಭಟ್ ಶುಭಹಾರೈಸಿದರು.  ಕೃಷಿ ಮೇಳ
ಸಂಯೋಜನಾ ಸಮಿತಿಯ ಪದಾಧಿಕಾರಿಗಳಾದ ಶಿವ ಪ್ರಸಾದ್, ರಾಧಾಕೃಷ್ಣ ಭಕ್ತ, ಸುರೇಶ್ ಭಂಡಾರಿ, ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು.
ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಬಲರಾಮ ಆಚಾರ್ಯ ಸ್ವಾಗತಿಸಿದರು. ಕ್ಯಾಂಪ್ಕೋ ನಿದರ್ೇಶಕ ಸಂಜೀವ ಮಠಂದೂರು ವಂದಿಸಿದರು.

ಕೃಷ್ಣ ಮೂತರ್ಿ ಮತ್ತು ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ರೈತರಿಗೆ ಆಶಾದಾಯಕವಾದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ  ಆಯೋಜಿಸಲಾದ ಕೃಷಿ ಯಂತ್ರ ಮೇಳ-2012 ಇದರ ಉದ್ಘಾಟನಾ ಸಮಾರಂಭ ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಿತು.
 ಸಮಾರಂಬವನ್ನು ಧರ್ಮಸ್ಥಳ ಧಮರ್ಾಧಿಕಾರಿ ಪದ್ಮಭೂಷಣ ರಾಜಷರ್ಿ ಡಾ.ಡಿ.  ವೀರೇಂದ್ರ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮೊಬೈಲ್  ಮುಖಂತರ ಟಿಲ್ಲರ್ ಮತ್ತು ನೀರಿನ ಯಂತ್ರಕ್ಕ ಚಾಲನೆ ನೀಡಿ ,ಮಾತನಾಡಿ ನಮ್ಮ ದೇಶ ಕೃಷಿ ಪ್ರಧಾನ ದೇಶ ,ಜಿಲ್ಲೆ ಮಲೆನಾಡಿನ ಮಳೆಯ ಆಶ್ರಯದಲ್ಲಿದೆ,ಆದ್ದರಿಂದ ಪ್ರಮುಖವಾಗಿ ಕೃಷಿ ಆಧಾರಿತ ದೇಶ ಎಂದರು.ಈಗಾಗಲೇ ಕೃಷಿ ಲಾಭದಾಯಕವಾಗಿದ್ದು ,ಗ್ರಾಮೀಣ ಕೃಷಿಕರು ಇಂತಹ ಕೃಷಿ ಮೇಳದಲ್ಲಿ ಭಾಗವಹಿಸಿ ಕೃಷಿಯಂತ್ರದ ಉಪಯೋಗವನ್ನು ಪಡೆದುಕೊಳ್ಳಬೇಕು, ಈ ಮೂಲಕ ಕ್ರಷಿಕರು ಉತ್ತಮಮಟ್ಟಕ್ಕೇರಬೇಕು ಎಂದು ಆಶೀಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಂಕೋಡಿ ಪದ್ಮನಾಭ ಭಟ್ ವಹಿಸಿದ್ದರು.ವೇದಿಕೆಯಲ್ಲಿ ಯೋಗೀಶ್ ಭಟ್,ಸಂಸದ ನಳಿನ್ ಕುಮಾರ್ ಕಟೀಲ್ ,ಶಾಸಕಿ ಮಲ್ಲಿಕಾಪ್ರಸಾದ್,ಎಂ.ಎನ್ ರಾಜೇಂದ್ರ ಕುಮಾರ್ .ವಿವಿಭಟ್ ,ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...