Saturday, 25 August 2012

Mahaligeshwar Temple Puttur


ನಾಡಿನ ಇತಿಹಾಸ ಪ್ರಸಿದ್ದ ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ fÃuÉÆÃðzÁÞgÀ  ಕಾರ್ಯಗಳು ಭರದಿಂದ ನಡೆಯುತ್ತಿದ್ದು , ಭಕ್ತಾದಿಗಳು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ , ಮತ್ತಷ್ಟು ಉತ್ಸಾಹದಿಂದ ಕರಸೇವೆಯಲ್ಲಿ ಭಾಗವಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯು ದೇವಾಲಯಗಳ ತವರು.ಇಲ್ಲಿನ ಪ್ರತಿಯೊಂದು  ಊರಿನಲ್ಲೂ ದೇವಾಲಯಗಳು ಇವೆ. ಎಲ್ಲಾ ದೇವಾಸ್ತಾನಗಳಿಗೂ ಸುದೀರ್ಘ ಇತಿಹಾಸ ಇದೆ. ಕೆಲವು ರೋಚಕ ಸಂಗತಿಗಳು ಇವೆ. ಅವುಗಳಲ್ಲಿ  ಕೆಲವು ತೀರಾ ಪ್ರಾಚೀನ ದೇವಸ್ಥಾನಗಳೂ ಇವೆ. ಅಂತಹ ದೆಗುಲಗಳ ಸಾಲಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರುತ್ತದೆ. ಸುಮಾರು  300 ವರ್ಷಗಳ ಇತಿಹಾಸ ಮೇಲ್ನೋಟಕ್ಕೆ ಕಂಡುಬರುವ ಈ ದೇವಸ್ಥಾನದ ಇತಿಹಾಸ ಕೆದುತ್ತಾ ಹೋದರೆ 12 ನೆಯ ಶತಮಾನಕ್ಕೆ ಬಂದು ನಿಲ್ಲುತ್ತದೆ. ಇಂತಹ ಪ್ರಸಿದ್ದ ಹಾಗೂ ಪೌರಾಣಿಕ ದೇವಸ್ಥಾನದ ಸಾನಿದ್ಯ ವೃದ್ಧಿಗಾಗಿ  ಪುನರ್ನವೀಕರಣ ಮಾಡಬೇಕಾದ್ದು  ಭಕ್ತಾದಿಗಳ ಕೆಲಸ. ದೇವಸ್ಥಾನದ ಪ್ರಾಕಾರದಲ್ಲಿ , ಕಟ್ಟಡದಲ್ಲಿ  2 ಅಥವಾ ಹೆಚ್ಚಿನ ದೋಷಗಳು ಬಂದಾಗ ಅದು ಜೀರ್ಣತೆಯ ಸಂಕೇತ. ಈ ಸಂದರ್ಭದಲ್ಲಿ  ಭಕ್ತಾದಿಗಳ ಪರವಾಗಿ ಆಡಳಿತವು  ಸಾನಿಧ್ಯ ಪರಿಪೂಣಗೊಳಿಸುವುದು  ಕರ್ತವ್ಯ. ಹೀಗಾಗಿ  ಶಾಸ್ತ್ರಗಳ ಪ್ರಕಾರ ದೇವರ ಹಿತವನ್ನು ಅಷ್ಟಮಂಗಲದ ಮೂಲಕ ತಿಳಿದುಕೊಂಡು  fÃuÉÆÃðzÁÞgÀ ಮಾಡುವುದು  ನಿಯಮ. ಅದೇ ಪ್ರಕಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಈ ಎಲ್ಲಾ ಪ್ರಕ್ರಿಯೆ ನಡೆಸಿ  ಬಾಲಾಲಯ ¤«Äð¹ ದೇವರ ಪ್ರತಿಷ್ಟೆ ಮಾಡಿ  ಹಳೆ ಕಟ್ಟಡ ತೆರವುಗೊಳಿಸಿ , ಹೊಸಕಟ್ಟಡ ¤ªÀiÁðt   ಮಾಡುವ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ  ಕಳೆದ ಒಂದು ವರ್ಷದಿಂದ ಮರ ಹಾಗೂ ಶಿಲಾ ಕೆತ್ತನೆಗಳು ನಡೆಯುತ್ತಿದೆ. ಭಕ್ತರು  ಕರ ಸೇವಕರಾಗಿ ತಂಡೋಪ ತಂಡವಾಗಿ ಮುನ್ನುಗ್ಗಿ ಬರುತ್ತಿದ್ದಾರೆ. ಜಿಲ್ಲೆಯ ಬೇರೆ ಯಾವುದೇ ದೇವಸ್ಥಾನದಲ್ಲಿ  ಇಂತಹ ಸ್ಪಂದನೆ ಸಿಕ್ಕಿರಲಿಲ್ಲ.
ಬೈಟ್  - ಎಸ್.ಎಂ.ಪ್ರಸಾದ್, ಮುನಿಯಂಗಳ
          ವಾಸ್ತು ಶಾಸ್ತ್ರಜ್ಞ

ದೇವಸ್ಥಾನದ ಕೆಲಸ ಕಾರ್ಯಗಳು ಈಗಾಗಲೇ ಭರದಿಂದ ನಡೆಯುತ್ತಿದ್ದು , ಸುತ್ತುಪೌಳಿ ಕೆಲಸವೂ ನಡೆಯುತ್ತಿದೆ. ಅ.24 ರಂದು ದೇಗುಲದ ಗರ್ಭಗುಡಿಗೆ ಪಾದುಕಾನ್ಯಾಸ ನಡೆಯಲಿದೆ.ಇದುವರೆಗೆ ಯಾವುದೇ ವಿಘ್ನಗಳು ಇಲ್ಲದೆ ನಡೆದುಕೊಂಡು ಬಂದಿದೆ ಎಂದು  ದೇವಸ್ಥಾನದ ತಂತ್ರಿ ರವೀಶ್ ತಂತ್ರಿ ಹೇಳುತ್ತಾರೆ.
ಬೈಟ್ - ರವೀಶ್ ತಂತ್ರಿ
         ತಂತ್ರಿಗಳು

ಮಹಾಲಿಂಗೇಶ್ವರ ದೇವಸ್ಥಾನದ ಕೆಲಸಗಳು ಅತ್ಯಂತ ಸಾಂಗವಾಗಿ ನಡೆಯುತ್ತಿದೆ. ಜೂ.13 ರಂದು  ಅನುಜ್ಞಾ ಕಲಶದೊಂದಿಗೆ ಆರಂಭಗೊಂಡ fÃuÉÆÃðzÁÞgÀ   ಕಾರ್ಯದಲ್ಲಿ  ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದಾರೆ. ಇದುವರೆಗೆ ಸುಮಾರು 14 ಸಾವಿರ ಭಕ್ತಾದಿಗಳು ಕರಸೇವಕರಾಗಿ ಭಾಗವಹಿಸಿದ್ದಾರೆ. 300 ಕ್ಕೂ ಹೆಚ್ಚು ಸಂಸ್ಥೆಗಳು ಕರಸೇವೆಯಲ್ಲಿ  ಭಾಗವಹಿಸಿವೆ.ಕರಸೇವೆಗೆ ಬರುವ ಭಕ್ತಾದಿಗಳಿಗೆ ದೇವಸ್ಥಾನದಿಂದ ವಸ್ತುಗಳು ನೀಡಿ ಭಕ್ತಾದಿಗಳು ತಮ್ಮ ಶ್ರಮದ ಮೂಲಕ ಕೆಲಸ ಮಾಡುತ್ತಾರೆ. ನವೆಂಬರ್ವರೆಗೆ ಕರಸೇವಕರಾಗಿ ಆಗಮಿಸಲು  ಭಕ್ತಾದಿಗಳು ಈಗಾಘಲೇ ಹೆಸರು ನೋಂದಾಯಿಸಿರುವುದು  ವಿಶೇಷ.ಆದರೆ ಇತ್ತೀಚೆಗೆ ಕೆಲ ದುಷ್ಟಶಕ್ತಿಗಳು  ಅಪಪ್ರಚಾರ ಮಾಡುತ್ತಾರೆ. ವಾಸ್ತವವಾಗಿ ದೇವಸ್ಥಾನದಲ್ಲಿ  ಯಾವುದೇ ಅಹಿತರ ಘಟನೆ ನಡೆಯಲಿಲ್ಲ. ಇದೆಲ್ಲಾ ಕೇವಲಕಟ್ಟು ಕತೆಯಾಗಿದೆ , ಭಕ್ತಾದಿಗಳು ಯಾವುದೇ ಕಾರಣಕ್ಕೂ ಭಯಕ್ಕೆ ಒಳಗಾಗಬೇಕಾಗಿಲ್ಲ ಎಂದು  ಕರಸೇವಕರ ಪ್ರಮುಖ್ ರಾಜೇಶ್ ಬನ್ನೂರು ಹೇಳುತ್ತಾರೆ.
ಬೈಟ್ - ರಾಜೇಶ್ ಬನ್ನೂರು
         ಕರಸೇವಕರ ಪ್ರಮುಖ್


ಒಟ್ಟಿನಲ್ಲಿ  ನಾಡಿನ ಅತ್ಯಂತ ಪ್ರಸಿದ್ಧ ದೇವಸ್ಥಾನದಲ್ಲಿ  fÃuÉÆÃðzÁÞgÀ  ಕಾರ್ಯಗಳು ಭರದಿಂದ ನಡೆಯುತ್ತಿದೆ.ಈ ಮೂಲಕ ದೇವಸಾನಿಧ್ಯ ಬೆಳಗುವಂತೆ ಮಾಡಿ ನಾಡಿನ ಸಮಸ್ತ ಭಕ್ತಾದಿಗಳಿಗೂ ಒಳಿತನ್ನು  ಮಾಡುವ ಕೆಲಸ ಮಾಡಲಾಗುತ್ತಿದೆ.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...