Monday, 28 July 2014

ರಾಜ್ಯದ ಮೂಲೆಮೂಲೆಯನ್ನು ಸಂಪಕರ್ಿಸುವ ಕೇಂದ್ರದ ಯೋಜನೆಗೆ ರಾಜ್ಯ ಸಕರ್ಾರ ಸಹಕರಿಸಬೇಕಿದೆ. ರಾಜ್ಯ ಸಕರ್ಾರದಿಂದ ಹೆಚ್ಚಿನ ನೆರವನ್ನು ಬಯಸದೇ, ಮೊದಲು ನೀಡುತ್ತಿದ್ದ ಅನುದಾನವನ್ನೇ ಮುಂದುವರಿಸುವಂತೆ ಕೇಳಿಕೊಂಡಿದ್ದೇವೆ ಎಂದು ಕೇಂದ್ರ ರೈಲ್ವೇ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಪುತ್ತೂರು ತೆಂಕಿಲ ಗೌಡ ಸಮುದಾಯ ಭವನದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ.ಪತ್ರಕರ್ತರೊಂದಿಗೆ ಮಾತನಾಡಿದರು. ಹಿಂದಿನ ಸಕರ್ಾರದಂತೆ ಹೊಸ ಆಶ್ವಾಸನೆ ನೀಡುವ ಬದಲು, ಇರುವ ಯೋಜನೆಯನ್ನೇ ಸುಧಾರಿಸುವ ಕಾರ್ಯಕ್ಕೆ ಕೇಂದ್ರ ಸಕರ್ಾರ ಮುಂದಾಗಿದೆ. ಅದರಂತೆ ರೈಲ್ವೇ ಸುಧಾರಣೆಗೆ ರಾಜ್ಯ ಸಕರ್ಾರ ಶೇ.50ರಷ್ಟು ಅನುದಾನ ನೀಡಬೇಕು. ಹಾಗೂ ಅವಶ್ಯಕ ಜಾಗವನ್ನು ಮಂಜೂರು ಮಾಡಬೇಕು ಎಂಬ ನಿಯಮ ಮೊದಲೇ ರೂಪಿಸಲಾಗಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು, ಶೇ.50ರಷ್ಟು ಅನುದಾನ ನೀಡಲು ಕಷ್ಟಸಾಧ್ಯ ಎಂದು ತಿಳಿಸಿದ್ದಾರೆ. ಈ ವಿಚಾರವನ್ನು ರಾಜಕೀಯ ಮಾಡಲು ಇಚ್ಚೆ ಪಡುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿಚಾರ ತಿಳಿಸಿದ್ದೇನೆ. ಕೇಂದ್ರ ರೈಲ್ವೇ ಖಾತೆ, ಹೊಸ ಅನುದಾನಗಳನ್ನು ನಿರೀಕ್ಷಿಸುವುದಿಲ್ಲ. ಇರುವ ಅನುದಾನವನ್ನೇ ಮುಂದುವರಿಸುವಂತೆ ಕೇಳಿಕೊಂಡಿದೆ ಎಂದು ತಿಳಿಸಿದರು.
2014-15ನೇ ಸಾಲಿನಲ್ಲಿ ಮಂಡಿಸಿದ ಬಜೆಟ್ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅಂಗೀಕಾರ ಪಡೆದಿವೆ. ಆದ್ದರಿಂದ ಅತೀ ಶೀಘ್ರದಲ್ಲಿ ಬಜೆಟ್ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಬಜೆಟ್ ಮಂಡಿಸುವ ಸಂದರ್ಭದಲ್ಲಿಯೂ ಹೊಸ ಯೋಜನೆಗಳಿಗೆ ಆಸ್ಪದ ನೀಡದೇ, ಇದ್ದ ಯೋಜನೆಗಳ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡಲಾಯಿತು. ದೇಶದ ಪ್ರಮುಖ ಸಂಪರ್ಕ ಸಾಧನವಾದ ರೈಲ್ವೇಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಧನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ದಾರಿ ಕಂಡುಕೊಂಡಿದ್ದು, ಖಾಸಗಿ ಸಹಭಾಗಿತ್ವ, ವಿದೇಶ ನೇರ ಬಂಡವಾಳವನ್ನು ಪ್ರೋತ್ಸಾಹಿಸಲಾಗಿದೆ. ಆದರೆ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ಮಾತ್ರ ಎಫ್ಡಿಐ ಹಾಗೂ ಖಾಸಗಿ ಸಹಭಾಗಿತ್ವಕ್ಕೆ ನೀಡಲಾಗಿದೆ. ಕೆಲಸ ಕಾರ್ಯಗಳ ಬಗ್ಗೆ ನೇರವಾಗಿ ಕೇಂದ್ರ ಸಕರ್ಾರವೇ ಮುತುವಜರ್ಿ ವಹಿಸಲಿದೆ. ಈ ಬಗ್ಗೆ ಯಾವುದೇ ಗೊಂದಲಗಳು ಬೇಡ. ಸ್ವಚ್ಚತೆ, ರಕ್ಷಣೆ, ಸುರಕ್ಷಿತ ಹಾಗೂ ಹೊಸ ಆವಿಷ್ಕಾರಕ್ಕೂ ಗಮನ ಹರಿಸಲಾಗಿದೆ. ರಾಜ್ಯದ ಹಿತಾಸಕ್ತಿಗೂ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ ಇವುಗಳ ಕಾರ್ಯರೂಪಕ್ಕೆ ಸ್ವಲ್ಪ ಸಮಯ ತಗುಲಬಹುದು ಎಂದು ಸ್ಪಷ್ಟಪಡಿಸಿದರು.
ತೆಲಂಗಾಣದಲ್ಲಿ ನಡೆದ ರೈಲು ದುರಂತದ ಬಗ್ಗೆ ವಿಷಾದವಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು. ದೇಶದಲ್ಲಿ ಸಾವಿರಕ್ಕೂ ಹೆಚ್ಚು ಮಾನವರಹಿತ ಲೆವೆಲ್ ಕ್ರಾಸಿಂಗ್ ಇರುವುದನ್ನು ಪತ್ತೆ ಹಚ್ಚಲಾಗಿದೆ. ಅಧಿಕಾರಿಗಳ ಬಳಿ ಚಚರ್ಿಸಿ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಎಲ್ಲಾ ಸಂಸದರ ಸಲಹೆಯನ್ನು ಪಡೆದುಕೊಳ್ಳಲಾಗುವುದು. ಹಾಗೂ ಈ ವಾರದಲ್ಲಿ ನಡೆಯುವ ಸಭೆಯಲ್ಲಿ, ಸಂಸದರ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಳಿಕೊಳ್ಳಲಾಗುವುದು ಎಂದರು.




ಪುತ್ತೂರು ರೈಲ್ವೇ ನಿಲ್ದಾಣವನ್ನು ಮಾದರಿ ರೈಲ್ವೇ ನಿಲ್ದಾಣವನ್ನಾಗಿ ರೂಪಿಸುವ ಯೋಜನೆ ಇದೆ. ಮುಂದಿನ ಒಂದೂವರೆ ವರ್ಷಗಳಲ್ಲಿ ಪುತ್ತೂರು ರೈಲ್ವೇ ನಿಲ್ದಾಣವನ್ನು ನಂ.1 ನಿಲ್ದಾಣವನ್ನಾಗಿ ಪರಿವತರ್ಿಸಲಾಗುವುದು. ಇದಕ್ಕೆ ಸಂಬಂಧಪಟ್ಟ ಡಿಆರ್ಎಂಓಗಳ ಸಭೆ ಕರೆದು ಚಚರ್ೆ ನಡೆಸಿದ್ದೇನೆ. ಅಲ್ಲದೇ, ಪುತ್ತೂರು ರೈಲ್ವೇ ನಿಲ್ದಾಣ ಸಂಪಕರ್ಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಡಿ.ವಿ.ಸದಾನಂದ ಗೌಡ ಹೇಳಿದರು.

ಹಸ್ತಕ್ಷೇಪ ಇಲ್ಲ:

ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂಜೂರು ಮಾಡಿದ್ದ ಕೊಲ ಪಶುವೈದ್ಯಕೀಯ ಕಾಲೇಜು ಹಾಗೂ ಕಾವು ರಬ್ಬರ್ ಕಾಖರ್ಾನೆಗೆ ಸಂಬಂಧಪಟ್ಟಂತೆ ಮುಂದಿನ ಕೆಲಸವನ್ನು ರಾಜ್ಯ ಸಕರ್ಾರ ಮಾಡಬೇಕಿದೆ. ಪಶುವೈದ್ಯಕೀಯ ಕಾಲೇಜಿಗೆ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಎಲ್ಲಾ ಕೆಲಸಗಳು ಪ್ರಗತಿಯಲ್ಲಿತ್ತು. ರಬ್ಬರ್ ಕಾಖರ್ಾನೆಗೆ ಪ್ರಾಥಮಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಅಷ್ಟರಲ್ಲಿ ರಾಜ್ಯ ಸಕರ್ಾರ ಬದಲಾದದ್ದರಿಂದ, ಮುಂದಿನ ಕೆಲಸವನ್ನು ನಡೆಸಲು ಸಾಧ್ಯವಾಗಿಲ್ಲ. ಅಧಿಕಾರದಿಂದ ಕೆಳಗಿಳಿದ ಮೇಲೆ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಪೊಲೀಸ್, ಸೈನ್ಯ ಇಲ್ಲದ ವ್ಯವಸ್ಥೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಆಂತರಿಕ ಭದ್ರತೆ ಕಾಯುವ ಪೊಲೀಸರ ಮೇಲೆ ಯಾವುದೇ ಒತ್ತಡ ಹಾಕದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಸಹಾಯಕ ಆಯುಕ್ತ ಎಚ್.ಕೆ.ಕೃಷ್ಣಮೂತರ್ಿ ಹೇಳಿದರು.
ರೋಟರಿ ಕ್ಲಬ್, ರೋಟರಿ ಕ್ಲಬ್ ಪೂರ್ವ, ರೋಟರಿ ಕ್ಲಬ್ ಸಿಟಿ ಹಾಗೂ ಮಾಜಿ ಸೈನಿಕರ ಸಂಘ ಆಶ್ರಯದಲ್ಲಿ ಪುತ್ತೂರು ಮನೀಷಾ ಸಭಾಂಗಣದಲ್ಲಿ ನಡೆದ ಕಾಗರ್ಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುದ್ಧವನ್ನು ಕಲ್ಪಿಸಿಕೊಂಡಾಗ, ಹಾನಿ ಹಾಗೂ ದೇಶದ ಸಮಗ್ರತೆಯ ಚಿತ್ರಣ ಸಿಗುತ್ತದೆ. ಹಾನಿ ಉಂಟು ಮಾಡುವ ಯುದ್ಧದ ಅಗತ್ಯತೆ ನಮಗಿಲ್ಲ. ಆದರೆ ದೇಶದ ಸಮಗ್ರತೆ, ಸಾರ್ವಭೌಮತ್ವದ ಪ್ರಶ್ನೆ ಎದುರಾದಾಗ, ಸೈನಿಕರ ಅಗತ್ಯ ನಮಗರಿವಾಗುತ್ತದೆ. ಆಫ್ರಿಕಾದ ಕೆಲ ದೇಶಗಳ ಪರಿಸ್ಥಿತಿ ತೀರಾ ಕೆಟ್ಟುಹೋಗಿದೆ. ಇದಕ್ಕೆ ಕಾರಣ ಕುಸಿದು ಹೋದ ಸೈನ್ಯ ವ್ಯವಸ್ಥೆ. ಆದ್ದರಿಂದ ಮನುಷ್ಯ ಮನುಷ್ಯರನ್ನೇ ಜೀವಂತ ಕೊಲ್ಲುವ ಸನ್ನಿವೇಶ ಎದುರಾಗಿದೆ. ಆದ್ದರಿಂದ ದೇಶದ ಆಂತರಿಕ ಹಾಗೂ ಬಾಹ್ಯ ರಕ್ಷಣೆಗೆ ಸೈನ್ಯ ಹಾಗೂ ಇನ್ನೊಂದು ರೂಪವಾದ ಪೊಲೀಸರ ಪಾತ್ರ ಅಗತ್ಯ ಎಂದರು. ಜನರಲ್ಲಿ ಭಯ ತುಂಬಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಉಂಟು ಮಾಡುವ ಹಿಂದೆ ಸೈನಿಕರ ಶಕ್ತಿಯಿದೆ ಎಂದರು.

Monday, 23 June 2014

ದಲಿತ ಶಾಸಕ ಎಸ್ ಅಂಗಾರ ಅವರನ್ನು ಸರ್ಕರ ಕಡೆಗಣಿಸಿದೆ,

ಕಳೆದ ಚಉನಾವಣೆಯ ಬಳಿಕ ಜಿಲ್ಲೆಯಲ್ಲಿ  ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ.ಆದರೆ ಬಿಜೆಪಿಯ ಏಕಮಾತ್ರ ಶಾಸಕ ಹೊಂದಿದ್ದ ಸುಳ್ಯ ಕ್ಷೇತರ ದಲಿತ ಶಾಸಕ ಎಸ್ ಅಂಗಾರ ಅವರನ್ನು  ಸರ್ಕರ ಕಡೆಗಣಿಸಿದೆ, ಅವರ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಆರೋಪ ಇದೀಗ ವ್ಯಕ್ತವಾಗುತ್ತಿದೆ.ಕಾಣಿಯೂರು ಪದವಿ ಕಾಲೇಜು ಸ್ಥಳಾಂತರ ವಿಚಾರದಲ್ಲಿ  ಇದು  ಸತ್ಯವಾಗಿದೆ.ಕಾಣಿಯೂರು ಕಾಲೆಜು ಬೆಂಳದೂರಿಗೆ ಸ್ಥಳಾಂತರವಾಗಬೇಕು ಎಂದು  ಸ್ಥಳೀಯರು ಹಾಗೂ ಕಾಂಗ್ರೆಸ್ ಪ್ರಮುಖರು ,ಬೋಗಸ್ ಸಮಿತಿಮಾಡಿ  ಉಸ್ತುವಾರಿ ಸಚಿವರನ್ನು  ಒತ್ತಾಯಿಸಿದರೆ, ಸುಳ್ಯ ಶಾಸಕ ಈ ಕಾಲೆಜು ಕಾಣಿಯೂರಿ
ನಲ್ಲಿಯೇ ಆಗಬೇಕು ಎಂದು ಹೇಳಿದ್ದರು. ಆದರೆ ಈ ಬಗ್ಗೆ ಶಾಸಕ ಅಂಗಾರ ಅವರ ಯಾವುದೇ ಮಾತಿಗೂ ಸಕರ್ಾರ, ಜಿಲ್ಲಾಡಳಿ, ಉಸ್ತುವಾರಿ ಸಚಿವರು ಬೆಲೆ ಕೊಡದೆ ದಲಿತ ಎಂ ಕಾರಣದಿಂದ ಅವಮಾನಿಸುತ್ತದ್ದಾರೆ ಎಂಬುದು ಬಿಜೆಪಿ ಆರೋಪ
ಈ ಎಲ್ಲಾ ಬೆಳವಣಿಗೆಗೂ ಜಿಲ್ಲಾ ಪದವಿ ಕಾಲೆಜು ಉಪನಿದರ್ೇಶಕರೇ ಹೊಣೆಯಾಗಿದ್ದಾರೆ. ಇಲ್ಲಿ  ಸ್ಥಳೀಯರ ಮಾತುಗಳಿಗೆ ಬೆಲೆನೀಡದೆ ರಾಜಕೀಯ ನಾಯಕರ ಮಾರ್ಗದರ್ಶನದಂತೆಯೇ ಕೆಲಸ ಮಾಡಿರುವುದು  ಇಷ್ಟು ದೊಡ್ಡ ವಿವಾದಕ್ಕೆಕಾರಣವಾಗಿದೆ.


ಶಾಸಕರ ಮಾತಿಗೂ ಬೆಲೆ ಕೊಡದೆ ಕಾಣಿಯೂರಿನಲ್ಲಿ ಅಧಿಕಾರಿಗಳ ದಬರ್ಾರ್ ; ಸಾರ್ವಜನಿಕರಿಂದ ಪ್ರತಿಭಟನೆ


ಕಾಣಿಯೂರು ಪದವಿ ಕಾಲೇಜು ಸ್ಥಳಾಂತರ ಈಗ ಮತ್ತಷ್ಟು ಕಗ್ಗಂಟಾಗಿದೆ.ಸುಳ್ಯ ಶಾಸಕ ಎಸ್.ಅಂಗಾರ ಅವರನ್ನು  ಸಕರ್ಾರ ಹಾಗೂ ಜಿಲ್ಲಾಡಳಿತ ಕಡೆಗಣಿಸಿದೆ ಎಂಬ ಆರೋಪ ಇದೀಗ ವ್ಯಕ್ತವಾಗಿದ್ದು, ಜಿಲ್ಲೆಯಾದ್ಯಂತ ಬಿಜೆಪಿ ಆಕೋಶ ವ್ಯಕ್ತಪಡಿಸಿದೆ.

ಕಳೆದ ಚಉನಾವಣೆಯ ಬಳಿಕ ಜಿಲ್ಲೆಯಲ್ಲಿ  ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ.ಆದರೆ ಬಿಜೆಪಿಯ ಏಕಮಾತ್ರ ಶಾಸಕ ಹೊಂದಿದ್ದ ಸುಳ್ಯ ಕ್ಷೇತರ ದಲಿತ ಶಾಸಕ ಎಸ್ ಅಂಗಾರ ಅವರನ್ನು  ಸರ್ಕರ ಕಡೆಗಣಿಸಿದೆ, ಅವರ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಆರೋಪ ಇದೀಗ ವ್ಯಕ್ತವಾಗುತ್ತಿದೆ.ಕಾಣಿಯೂರು ಪದವಿ ಕಾಲೇಜು ಸ್ಥಳಾಂತರ ವಿಚಾರದಲ್ಲಿ  ಇದು  ಸತ್ಯವಾಗಿದೆ.ಕಾಣಿಯೂರು ಕಾಲೆಜು ಬೆಂಳದೂರಿಗೆ ಸ್ಥಳಾಂತರವಾಗಬೇಕು ಎಂದು  ಸ್ಥಳೀಯರು ಹಾಗೂ ಕಾಂಗ್ರೆಸ್ ಪ್ರಮುಖರು , ಉಸ್ತುವಾರಿ ಸಚಿವರು  ಒತ್ತಾಯಿಸಿದರೆ, ಸುಳ್ಯ ಶಾಸಕ ಈ ಕಾಳೇಜು ಕಾಣಿಯೂರಿನಲ್ಕಲಿಯೇ ಆಗಬೇಕು ಎಂದು ಹೇಳಿದ್ದರು. ಆದರೆ ಈ ಬಗ್ಗೆ ಶಾಸಕ ಅಂಗಾರ ಅವರ ಯಾವುದೇ ಮಾತಿಗೂ ಸಕರ್ಾರ, ಜಿಲ್ಲಾಡಳಿ, ಉಸ್ತುವಾರಿ ಸಚಿವರು ಬೆಲೆ ಕೊಡದೆ ದಲಿತ ಎಂ ಕಾರಣದಿಂದ ಅವಮಾನಿಸುತ್ತದ್ದಾರೆ ಎಂಬುದು ಬಿಜೆಪಿ ಆರೋಪ


ಈ ಎಲ್ಲಾ ಬೆಳವಣಿಗೆಗೂ ಜಿಲ್ಲಾ ಪದವಿ ಕಾಲೆಜು ಉಪನಿದರ್ೇಶಕರೇ ಹೊಣೆಯಾಗಿದ್ದಾರೆ. ಇಲ್ಲಿ  ಸ್ಥಳೀಯರ ಮಾತುಗಳಿಗೆ ಬೆಲೆನೀಡದೆ ರಾಜಕೀಯ ನಾಯಕರ ಮಾರ್ಗದರ್ಶನದಂತೆಯೇ ಕೆಲಸ ಮಾಡಿರುವುದು  ಇಷ್ಟು ದೊಡ್ಡ ವಿವಾದಕ್ಕೆ ಕಾರಣವಾಗಿದೆ.ಈ ನಡುವೆ ಕಾಣಿಯೂರು ಪದವಿ ಕಾಲೇಜು ನಾಳೆಯಿಂದಲೇ ಬೆಳಂದೂರು ಪದವಿ ಕಾಲೇಜು ಆಗಿ ಆರಂಭಗೊಳ್ಳಲಿದೆ.ಈ ಬಗ್ಗೆ ಕಾಲೇಜು ಪ್ರಾಂಶುಪಾಲರಿಗೆ , ಪೋಷಕರಿಗೆ ತಿಳಿಸಲಾಗುವುದು  ಎಂದು  ಪದವಿ ಕಾಲೇಜು ಜಂಟಿ ನಿದರ್ೇಶಕ ಸಿದ್ದರಾಮು ತಿಳಿಸಿದ್ದಾರೆ. 

ಒಟ್ಟಿನಲ್ಲಿ  ಕಳೆದ ಕೆಲವು ಸಮಯಗಳಿಂದ ಕಾಣಿಯೂರು ಕಾಲೇಜು ಸ್ಥಳಾಂತರ ವಿಚಾರ ವಿವಾದವಾಗುತ್ತಲೇ ಇದೆ.ಸಕರ್ಾರ ಕೂಡಾ ಯಾವುದೇ ಸರಿಯಾದ ನಿಧರ್ಾರ ಪ್ರಕಟ ಮಾಡುತ್ತಿಲ್ಲ.ಇದರಿಂದಾಗಿ  ಕಾಲೇಜು ವಿದ್ಯಾಥರ್ಿಗಳು ಮಾತ್ರಾ ಅತಂತ್ರರಾಗಿದ್ದಾರೆ.ಇದಕ್ಕೆ ಯಾರು ಹೊಣೆ ಎಂಬುದೇ ಈಗಿರುವ ಪ್ರಶ್ನೆ.

ಇದೇ ಸಂದರ್ಭದಲ್ಲಿ  ಮಾತನಾಡಿದ ಪದವಿ ಕಾಲೇಜು ಜಂಟಿ ನಿದರ್ೇಶಕರಾಗಿದ್ದ ಯೋಗಾನಂದ ಮಾತನಾಡಿ, ಈಗ ನ್ಯೂ ಮಾಡೆಲ್ ಕಾಲೇಜು ಸ್ಥಳಾಂತರವಾಗುತ್ತಿಲ್ಲ , ಕಾಣಿಯೂರು ಪದವಿ ಕಾಲೇಜು ಸ್ಥಳಾಂತರವಾಗುತ್ತಿದೆ.ಈ ಸಂದರ್ಭದಲ್ಲಿ  ಕಾಲೇಜು ಪ್ರಾಂಶುಪಾಲರು ಸಂಪರ್ಕಕ್ಕೆ ಲಭ್ಯರಾಗುತ್ತಿಲ್ಲ. ಹೀಗಾಗಿ ಅವರನ್ನು  ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನಿಡಲಾಗುತ್ತದೆ.ಒಂದು ವೇಳೆ ಸಕರ್ಾರಿ ಆದೇಶ ಪಾಲನೆಯಾಗದೇ ಇದ್ದರೆ ಪ್ರಾಂಶುಪಾಲರ ಸಹಿತ ಉಪನ್ಯಾಸಕರ ವಿರುದ್ದ ಮೇಲಾಧಿಕಾರಿಗಳಿಗೆ ದೂರು ನೀಡಲಾಗುತ್ತದೆ ಎಂದು  ಹೇಳಿದರು.
 

Saturday, 11 January 2014


ವಿವಿಧ ಕ್ಷೇತ್ರಗಳ ಸಾಧಕರಿಗೆ -ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸಂಮಾನ 
ವಿವಿಧ ಕ್ಷೇತ್ರಗಳ ಸಾಧಕರಿಗೆ ಸಂಮಾನ ಕಾರ್ಯಕ್ರಮ ಸಂಜೆ ನಡೆಯಿತು. ಜಿ. ಎಲ್.ಆಚಾರ್ಯ(ಸಾಹಿತ್ಯ ಮತ್ತು ದಾನಿಗಳು), ಪರಮೇಶ್ವರ ಭಟ್ ಚೌಕಾರು(ಶಿಕ್ಷಣ ಮತ್ತು ಸಮಾಜಸೇವೆ), ರೆ. ವಿಜಯ ಹಾವರ್ಿನ್(ಶಿಕ್ಷಣ ಮತ್ತು ಸಮಾಜ ಸೇವೆ), ಗಂಗಾಧರ ಬೆಳ್ಳಾರೆ(ಸಾಹಿತ್ಯ ಮತ್ತು ಮನೋವಿಶ್ಲೇಷಣೆ) ಗೋಪಾಲಕೃಷ್ಣ ಕುಂಟಿನಿ(ಪತ್ರಿಕೋದ್ಯಮ), ಚಿದಾನಂದ ಕಾಮತ್ ಕಾಸರಗೋಡು(ಸಾಂಸ್ಕೃತಿಕ ಸಂಘಟನೆ), ನಯನ.ವಿ.ರೈ(ಸಮಾಜ ಸೇವೆ), ಅಬೂಬಕ್ಕರ್ ಆರ್ಲಪದವು(ಗಡಿನಾಡ ಕನ್ನಡಿಗ) ಹರೀಶ್ ಪರವ(ದೈವಾರಾಧನೆ), ಕಾಂತು ಹಿರೇಬಂಡಾಡಿ(ದೈವಾರಾಧನೆ) ಪಾರ್ವತಿ ಗಣೇಶ್ ಭಟ್ ಹೊಸಮೂಲೆ(ಸಂಗೀತ), ಧನಂಜಯ ಮರ್ಕಂಜ(ಕರಕುಶಲ) ಮತ್ತು ಉದಯಗಿರಿ(ಸಾಹಿತ್ಯ)ರವರನ್ನು ಸಂಮಾನಿಸಲಾಯಿತು. ಪ್ರಶಸ್ತಿ ವಿಜೇತ ಶಿಕ್ಷಕರಾದ ಸರೋಜಿನಿ.ಕೆ, ಎಚ್. ಶ್ರೀಧರ ರೈ, ಯಶೋಧ.ಕೆ.ಎಸ್, ಗೋಪಾಲಕÙೃಣ ರಾವ್, ಲಕ್ಷ್ಮಣ ನಾಯ್ಕ್ ಮತ್ತು ಸ್ಟ್ಯಾನಿ ಪ್ರವೀಣ್ ಮಸ್ಕರೇನಸ್ರವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ಸನ್ಮಾನ ನೆರವೇರಿಸಿದರು. ಪ್ರೊ. ವತ್ಸಲಾ ರಾಜ್ಞಿ ಸ್ವಾಗತಿಸಿ, ಯು.ಎಸ್.ರಾಮಕೃಷ್ಣ ಭಟ್ ವಂದಿಸಿದರು. ಬಿ. ಐತ್ತಪ್ಪ ನಾಯ್ಕ್ ಮತ್ತು ಐ.ಕೆ. ಬೊಳುವಾರು ಕಾರ್ಯಕ್ರಮ ನಿರ್ವಹಿಸಿದರು. ಸಾಹಿತ್ಯಕ ಸ್ಪಧರ್ೆಗಳ ವಿಜೇತರ ಬಹುಮಾನ ಪಟ್ಟಿಯ ವಿವರಣೆಯನ್ನು ಎಚ್. ಶ್ರೀಧರ ರೈ ಓದಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ  ಡಾ. ಡಿ. ಸದಾಶಿವ ಭಟ್ ನಿಡ್ಪಳ್ಳಿ, ರಾಷ್ಟ್ರಧ್ವಜಾರೋಹಣ ಮಾಡಿದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಜಿ. ಕೆ. ಮಹಾಬಲೇಶ್ವರ ಭಟ್, ಪರಿಷತ್ನ ಧ್ವಜಾರೋಹಣ ಮಾಡಿದ ಪ್ರದೀಪ್ ಕುಮಾರ್ ಕಲ್ಕೂರ, ಪುಸ್ತಕ ಮಳಿಗೆ ಉದ್ಘಾಟಿಸಿದ ತಾ.ಪಂ. ಅಧ್ಯಕ್ಷೆ ಶಶಿಪ್ರಭ ಸಂಪ್ಯ, ಕನ್ನಡ ಧ್ವಜಾರೋಹಣ ಮಾಡಿದ ತಾ.ಪಂ. ಸದಸ್ಯ ಮಹಮ್ಮದ್ ಬಡಗನ್ನೂರು, ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿದ ಜಿ. ಪಂ. ಸದಸ್ಯ ಎಂ. ಪಕೀರ, ಮೆರವಣಿಗೆ ಉದ್ಘಾಟಿಸಿದ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್, ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮುಳಿಯ ಶ್ಯಾಮ ಭಟ್ ಶುಭ ಹಾರೈಸಿದರು. ಡಾ. ನರೇಂದ್ರ ರೈ ದೇರ್ಲರವರು ಸಮ್ಮೇಳನಾಧ್ಯಕ್ಷರ ಪರಿಚಯ ಭಾಷಣ ಮಾಡಿದರು.  ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಸ್ವಾಗತಿಸಿ, ಸಂಚಾಲಕ ಶಿವರಾಮ. ಪಿ. ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಕೋಶಾಧಿಕಾರಿ, ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರೂಪಿಸಿದರು.

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...