ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದ ಬಳಿಕ ಎರಡು ಗುಂಪುಗಳ ಮಧ್ಯೆ ಗುಂಪು ಘರ್ಷಣೆ ನಡೆದಿದ್ದು,ಓರ್ವ ವ್ಯಕ್ತಿಗೆ ಚೂರಿ ಇರಿತ ಸಂಭವಿಸಿದೆ.ಇರ್ವರಿಗೆ ಗಾಯಗಾಳಾಗಿದ್ದು ಪೋಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು.ಹಿಂದೂ ಸಮಾವೇಶವನ್ನು ಮುಗಿಸಿಕೊಂಡು ಬರುತ್ತಿದ್ದ ಸಂದರ್ಭ ಸ್ಥಳಿಯ ಮಸಿದಿಯಿಂದ ಬಂದ ಗುಂಪುಂದು ಧಿಕ್ಕಾರ ಕೂಗಿದರ ಪರಿಣಾಮ ಎರಡು ಗುಂಪುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡ ಪರಿಣಾಮ ಪೋಲೀಸರು ಲಾಠೀಚಾರ್ಜ್ ನಡೆಸಿ ಎರಡೂ ಗುಂಪುಗಳನ್ನು ಚದುರಿಸಿದರು.ಉದ್ವಿಗ್ನಗೊಂಡ ಗುಂಪುಗಳು ಅಂಗಡಿಮುಂಗಟ್ಟುಗಳಿಗೆ ಕಲ್ಲು ತೂರಾಟವನ್ನೂ ನಡೆಸಿ ಹಾನಿಗೊಳಿಸಿದೆ.ಬಳಿಕ ನಡೆದ ಘಟನೆಯಲ್ಲಿ ಸಮಾಜೋತ್ಸವವನ್ನು ಮುಗಿಸಿ ಹೊರಡುತ್ತಿದ್ದವರ ಮೇಲೆ ಕಿಡಿಗೇಡಿಗಳು ಹಲ್ಲಿ ನಡೆಸಿದ್ದು,ಓರ್ವನಿಗೆ ತಲವಾರಿನಿಂದ ತಲೆಗೆ ಕಡಿಯಲಾಗಿದ್ದು,ಮತ್ತೀರ್ವರಿಗೆ ಹಲ್ಲೆ ನಡೆಸಲಾಗಿದೆ.ಸ್ಥಳದಲ್ಲಿ ದಕ್ಷಿಣಕನ್ನಡ ಪೋಲೀಸ್ ವರಿಷ್ಟಾಧಿಕಾರಿ ಅಭಿಷೇಕ್ ಗೋಯಲ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿದೆ.
Sunday, 22 January 2012
Hindu samajotsava
ಪುತ್ತೂರಿನ ಉಪ್ಪಿನಂಗಡಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಿತು.ಸಾವಿರಾರು ಸಂಖ್ಯೆಯಲ್ಲಿ ಜನರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.ಸಮಾವೇಶಕ್ಕೂ ಮೊದಲು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆಯು ನಡೆಯಿತು.ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣಪ್ರಾಂತ್ಯ ಕಾರ್ಯವಾಹಕ ಪ್ರಭಾಕರ್ ಭಟ್ ಕಲ್ಲಡ್ಕ ಹಿಂದೂ ಧರ್ಮದ ಎಲ್ಲಾ ಜಾತಿಗಳು ಒಂದಾಗುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸುವ ಕಾರ್ಯನಡೆಯಬೇಕಿದೆ ಎಂದರು. ಸಮಾರಂಭದಲ್ಲಿ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ,ಕನ್ಯಾಡಿಯ ಬ್ರಹ್ಮಾನಂದ ಸ್ವಾಮೀಜಿಗಳು ಆಶೀರ್ವಚನವನ್ನು ನೀಡಿದರು.
Saturday, 21 January 2012
DV.Daiva ardhane _1
ರಾಜ್ಯಾಡಳಿತದಲ್ಲಿ ಭಯ ಬೇಡ'
`ತರವಾಡು ದೈವಗಳ ಆಶೀರ್ವಾದದಿಂದ, ಹಿರಿಯರ ಪ್ರಯತ್ನದಿಂದ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿ ರಾಜ್ಯದ ದೊರೆಯಾಗಿದ್ದು, ರಾಜ್ಯಾಡಳಿತದಲ್ಲಿ ಯಾವುದೇ ಭಯವಿಲ್ಲದೆ ರಾಜ್ಯಭಾರ ಮಾಡು ದೇವರ ಎಲ್ಲಾ ಆಶೀರ್ವಾದವೂ ಇದೆ' ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೆ ತರವಾಡು ದೈವಗಳು ಅನುಗ್ರಹಿಸಿ, ಹರಸಿದವು. ಮಂಗಳವಾರ ತನ್ನ ಹುಟ್ಟೂರಾದ ಸುಳ್ಯದ ದೇವರಗುಂಡದ ಮನೆಯ ತರವಾಡು ದೈವಸ್ಥಾನದಲ್ಲಿ ನಡೆದ ವಾರ್ಷಿಕ ಭೂತಕೋಲ ಕಾರ್ಯಕ್ರಮಮದಲ್ಲಿ ಭಾಗವಹಿಸಿದ ಅವರು ದೈವಗಳ ಆಶೀರ್ವಾದ ಪಡೆದರು. ಮಂಗಳವಾರ ಬೆಳಿಗ್ಗ ಮನೆಗೆ ಆಗಮಿಸಿದ ಮುಖ್ಯಮಂತ್ರಿಗಳು ಮನೆಯ ಯಜಮಾನನಾಗಿ ನಿಂತು ಎಲ್ಲಾ ದೈವಿಕ ಕಾರ್ಯಕ್ರಮಗಳಿಗೂ ನೇತೃತ್ವ ವಹಿಸಿದರು. ವಿಷ್ಣುಮುರ್ತಿ, ರಕೇಶ್ವರಿ ದೈವಗಳು ಮುಖ್ಯಮಂತ್ರಿಗೆ ಯಶಸ್ಸು ಹಾರೈಸಿ ಹರಸಿದರು. ಮುಖ್ಯಮಂತ್ರಿಯಾಗಿ `ರಾಜ್ಯಾಡಳಿತ ನಡೆಸಲು ಯಾವುದೇ ಭಯ ಬೇಡ, ದೈವಗಳ ಅನುಗ್ರಹ ಇರುವಾಗ ಭಯ ಯಾಕೆ ಧೈರ್ಯವಾಗಿ ರಾಜ್ಯಭಾರ ಮಾಡು ತರವಾಡು ದೈವಗಳು ಬೆಂಗಾವಲಾಗಿ ಇದೆ' ಎಂದು ವಿಷ್ಣುಮುರ್ತಿ ದೈವ ಮುಖ್ಯಮಂತ್ರಿಯವರನ್ನು ಹರಸಿತು. ದೇವರಗುಂಡ ತರವಾಡು ಮತ್ತು ಭಗವಂತನ ಮದ್ಯೆ, ಶ್ರೀಕೃಷ್ಣನಿಗೂ ಕುಚೇಲನಿಗೂ ಇರುವಂತಹಾ ಸಂಬಂಧವಿದೆ. ಶ್ರೀಕೃಷ್ಣನು ಕುಚೇಲನಿಗೆ ಅಗಾಧವಾದ ಸಂಪತ್ತು ನೀಡಿದಂತೆ ದೇವರಗುಂಡದ ಕುಡಿಯಾದ ಸದಾನಂದ ಗೌಡರಿಗೂ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರುವಂತೆ ಅನುಗ್ರಹಿಸಿದೆ. ತಾಯಿ ಮತ್ತು ಇತರ ಹಿರಿಯರ ಪ್ರಯತ್ನ, ದೈವಗಳ ಅನುಗ್ರಹದಿಂದ ನಾಡಿನ ಮುಖ್ಯಮಂತ್ರಿಯಾಗಿ ಯಾವುದೇ ಸಮಸ್ಯೆ, ಸಹಾಯ ಬೆಕಿದ್ದರೆ ದೇವರಲ್ಲಿ ಪ್ರಾರ್ಥಿಸು ಖಂಡಿತಾ ಅನುಗ್ರಹಿಸುತ್ತಾನೆ' ಎಂದು ವಿಷ್ಣುಮುರ್ತಿ ದೈವ ನುಡಿದು ಸದಾನಂದ ಗೌಡರನ್ನು ಹರಸಿದರು.ರಕ್ತೇಶ್ವರಿ ದೈವವೂ ಮುಖ್ಯಮಂತ್ರಿಯವರಿಗೆ ಆಶೀರ್ವಾದವಿತ್ತು ಹರಸಿದರು. ತಾಯಿ ರಕ್ತೇಶ್ವರಿಯ ಅನುಗ್ರಹ ಯಾವತ್ತೂ ಇರುತ್ತದೆ. ಮುಂದೆಯೂ ಅದೇ ರೀತಿಯ ಯಶಸ್ಸು, ಸಾಧನೆ ಸಾಧ್ಯವಾಗಲಿ, ದೈವಗಳ ಶ್ರೀರಕ್ಷೆ ಸದಾ ಇರುತ್ತದೆ ಎಂದು ಹರಸಿದರು. ಬೆಳಿಗ್ಗಿನಿಂದ ಸಂಜೆಯವರೆಗೂ ದೇವರಗುಂಡದ ಮನೆಯಲ್ಲಿ ಕಳೆದ ಮುಖ್ಯಮಂತ್ರಿ, ಅತಿಥಿಗಳನ್ನು ಸ್ವಾಗತಿಸಿ, ಎಲ್ಲರನ್ನೂ ನಗುಮೊಗದಿಂದ ಮಾತನಾಡಿಸಿದರು. ಭೂತ ಕೋಲ ಕಟ್ಟುವ ಕಲಾವಿದರನ್ನೂ ಮಾತನಾಡಿಸಿ ಅವರಿಗೆ ದಕ್ಷಿಣೆ ನೀಡಿದರು. ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಯಶಸ್ವಿಯಾಗಿ ಅಧಿಕಾರ ನಡೆಸುತ್ತಿರುವುದಕ್ಕೆ ಸದಾನಂದ ಗೌಡರ ಸಹೋದರರು ವಿಷ್ಣುಮುರ್ತಿ ದೈವಕ್ಕೆ ಬೆಳ್ಳಿಯ ದ್ವೀಪವನ್ನು ಹರಕೆಯಾಗಿ ಸಮರ್ಪಿಸಿದರು. ಪತ್ನಿ ಡಾಟಿ ಸದಾನಂದ ಗೌಡ, ಪುತ್ರ ಕಾರ್ತಿಕ್, ಸಹೋದರರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು. ಗಡಿ ಗ್ರಾಮದ ಅಭಿವೃದ್ದಿಗೆ ಆಗ್ರಹಿಸಿ ನಾಗರಿಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.`
ಮುಖ್ಯಮಂತ್ರಿಗಳಿಗೆ ತರವಾಡು ದೈವಗಳ ಅಭಯ
ರಾಜ್ಯದ ಸುಭಿಕ್ಷೆಗಾಗಿ ಪ್ರಾರ್ಥನೆ'-ಡಿವಿಎಸ್
`ತರವಾಡು ದೈವದ ಉತ್ಸವದಲ್ಲಿ ಭಾಗಿಯಾಗಿ ದೈವಗಳ ಅನುಗ್ರಹ ಪಡೆದ ಕಾರಣ ಇನ್ನಷ್ಟು ಆತ್ಮ ವಿಶ್ವಾಸ ಮತ್ತು ಶಕ್ತಿ ಹೆಚ್ಚಿದೆ. ಕರ್ನಾಟಕದ ಒಳಿತಿಗಾಗಿ ಮತ್ತು ರಾಜ್ಯ ಸುಭಿಕ್ಷವಾಗಲೆಂದು ದೇವರಲ್ಲಿ ಪ್ರಾರ್ಥನೆ ನಡೆಸಿರುವುದಾಗಿ ಮುಖ್ಯಮಂತ್ರಿ ಸದಾನಂದ ಗೌಡರು ಹೇಳಿದರು. ದೇವರ ಆಶೀರ್ವಾದ ಮತ್ತು ಅನುಗ್ರಹದಿಂದ ಉತ್ತಮ ಆಡಳಿತ ನಡೆಸಲು ಮತ್ತು ರಾಜ್ಯ ಸುಭಿಕ್ಷವಾಗುವ ವಿಶ್ವಾಸವಿದೆ. ಎಲ್ಲಾ ಸಮಸ್ಯೆಗಳನ್ನೂ ಗೊಂದಲಗಳನ್ನೂ ಆ ದೇವರೇ ನಿವಾರಿಸಿ ಜನರಿಗೆ ಉತ್ತಮ ಆಡಳಿತ ನೀಡುವಂತೆ ಕರುಣಿಸುತ್ತಾನೆ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.ತನ್ನ ಮನೆ ದೇವರಗುಂಡದಲ್ಲಿ ನಡೆಯುವ ಭೂತಕೋಲು ಉತ್ಸವಕ್ಕೆ ಪ್ರತಿವರ್ಷವೂ ತಪ್ಪದೇ ಹಾಜರಾಗುತ್ತೇನೆ. ಎಷ್ಟೇ ಒತ್ತಡವಿದ್ದರೂ ಈ ಕಾರ್ಯಕ್ರಮವನ್ನು ತಪ್ಪಿಸುವುದಿಲ್ಲ. ಪ್ರತಿ ವರ್ಷವೂ ಎರಡು ದಿನ ಪೂರ್ತಿ ಇರುತ್ತಿದ್ದೆ. ಈ ಬಾರಿ ಒಂದು ದಿನ ಪೂರ್ತಿಯಾಗಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ಮುಖ್ಯಮಂತ್ರಿ ಸದಾನಂದ ಗೌಡರು ಹೇಳಿದರು. ಬಾಲ್ಯದಿಂದಲೂ ತನ್ನ ತರವಾಡು ದೈವದ ಆಶೀರ್ವಾದ ಅನುಗ್ರಹಗಳು ತನಗೆ ಪ್ರೇರಣೆ ಮತ್ತು ಶಕ್ತಿಯಾಗಿತ್ತು ಎಂದು ಹೇಳಿದರು. ಕರ್ನಾಟಕದ ಮತ್ತು ಕೇರಳ ರಾಜ್ಯದ ನೂರಾರು ಮಂದಿ ಉತ್ಸವದಲ್ಲಿ ಭಾಗವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ , ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ರಜ್ಯ ಅರಣದ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್.ಮನ್ಮಥ, ಬಿಜೆಪಿ ನೇತಾರರಾದ ವೆಂಕಟ್ ದಂಬೆಕೋಡಿ, ಗೋಪಾಲಕೃಷ ಹೇರಳೆ, ಸಂಜೀವ ಮಠಂದೂರು, ಎ.ವಿ.ತೀರ್ಥರಾಮ, ಜಯರಾಮ ರೈ ಜಾಲ್ಸೂರು ಮತ್ತಿತರರು ಉಪಸ್ಥಿತರಿದ್ದರು.
Thursday, 12 January 2012
Darmashree Prashasti_Dr.KJ.YeshuDas_2
ಈಶ್ವರಮಂಗಲದಲ್ಲಿ ಡಾ.ಕೆ.ಜೆ.ಜೇಸುದಾಸ್ಗೆ ಧರ್ಮಶ್ರೀ ಪ್ರಶಸ್ತಿ ಪ್ರಧಾನ
ನಾನಿನ್ನೂ ಸಂಗೀತದ ವಿದ್ಯಾಥರ್ಿ - ಜೇಸುದಾಸ್
ನಾನಿನ್ನೂ ಸಂಗೀತದ ವಿದ್ಯಾಥರ್ಿ - ಜೇಸುದಾಸ್
ಕನರ್ಾಟಕ್ ಸಂಗೀತ ಎಂಬ ಸಮುದ್ರದ ಮುಂದೆ ನಾನೇನು ಅಲ್ಲ , ನಾನು ಇನ್ನೂ ಸಂಗೀತದ ವಿದ್ಯಾಥರ್ಿಯಷ್ಟೇ.ನನ್ನ ಸಂಗೀತದ ವಿದ್ವತ್ ಇನ್ನೂ ಮುಗಿದಿಲ್ಲ ಹೀಗೆಂದು ಖ್ಯಾತ ಗಾಯಕ ಡಾ.ಕೆ.ಜೆ.ಜೇಸುದಾಸ್ ಹೇಳಿದರು.
ಪುತ್ತೂರಿನ ಈಶ್ವರಮಂಗಲದ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಧರ್ಮಶ್ರೀ ಪ್ರತಿಷ್ಟಾನದ ವತಿಯಿಂದ ಧರ್ಮಶ್ರೀ ಪ್ರಶಸ್ತಿಯ ಗಾಯಕ ಡಾ.ಕೆ.ಜೆ.ಜೇಸುದಾಸ್ ಅವರಿಗೆ ಪ್ರದಾನ ಮಾಡಲಾಯಿತು. ಹೊಸನಗರದ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಗಳು ಪ್ರಶಸ್ತಯನ್ನು ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಡಾ.ಕೆ.ಜೆ.ಜೇಸುದಾಸ್ , . ಕನರ್ಾಟಿಕ್ ಸಂಗೀತದಲ್ಲಿ ಸಿಗುವ ಶಾಂತಿ , ನೆಮ್ಮದಿ ಬೇರೆಲ್ಲೂ ಸಿಗಲು ಸಾಧ್ಯುವಿಲ್ಲ, ಇದು ನಮಗೆ ದೊರೆತ ಅಪೂರ್ವ ನಿಧಿ ಎಂದು ಅವರು ಬಣ್ಣಿಸಿದರು.ಯುವ ಜನಾಂಗ ಸಂಗೀತ ಪರಂಪರೆಯನ್ನು ನಿರಂತರ ಅಭ್ಯಾಸದ ಮೂಲಕ ಮುಂದುವರೆಸಬೇಕು.
ಹಿಂದೂಸ್ತಾನಿ ಸಂಗೀತ ಒಂದು ನದಿ ಇದ್ದಂತೆ, ಆದರೆ ಕನರ್ಾಟಿಕ್ ಸಂಗೀತವು ಸಮುದ್ರವಿದ್ದಂತೆ ಎಂದು ಹೇಳಿದರು.
ಗಾಯಕ ಡಾ.ಕೆ.ಜೆ.ಜೇಸುದಾಸ್ ಅವರಿಗೆ ಧರ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಿದ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಗಳು ,ಕಳೆದ 50 ವರ್ಷಗಳಿಂದ ಜೇಸುದಾಸ್ ನಡೆಸಿದ ಸಂಗೀತಾರ್ಚನೆಯೇ ನಿಜವಾದ ಈಶ್ವರಾರ್ಚನೆ ಎಂದರು. ಭಾರತದ ಇಡೀ ಶಕ್ತಿಯೇ ಸಂಗೀತ ಎಂದ ಶ್ರೀಗಳು, ಸುಖ ಎಂಬುದು ಉಪಕರಣದಲ್ಲಿ ಇಲ್ಲ ಅಂತ:ಕರಣದಲ್ಲಿದೆ, ಉಪಕರಣಗಳು ಹೆಚ್ಚಾದರೂ ಇಂದು ಮನುಷ್ಯನಿಗೆ ನೆಮ್ಮದಿ ಸಿಕ್ಕಿಲ್ಲ ಎಂದರು.
ಹಿಂದೂಸ್ತಾನಿ ಸಂಗೀತ ಒಂದು ನದಿ ಇದ್ದಂತೆ, ಆದರೆ ಕನರ್ಾಟಿಕ್ ಸಂಗೀತವು ಸಮುದ್ರವಿದ್ದಂತೆ ಎಂದು ಹೇಳಿದರು.
ಗಾಯಕ ಡಾ.ಕೆ.ಜೆ.ಜೇಸುದಾಸ್ ಅವರಿಗೆ ಧರ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಿದ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಗಳು ,ಕಳೆದ 50 ವರ್ಷಗಳಿಂದ ಜೇಸುದಾಸ್ ನಡೆಸಿದ ಸಂಗೀತಾರ್ಚನೆಯೇ ನಿಜವಾದ ಈಶ್ವರಾರ್ಚನೆ ಎಂದರು. ಭಾರತದ ಇಡೀ ಶಕ್ತಿಯೇ ಸಂಗೀತ ಎಂದ ಶ್ರೀಗಳು, ಸುಖ ಎಂಬುದು ಉಪಕರಣದಲ್ಲಿ ಇಲ್ಲ ಅಂತ:ಕರಣದಲ್ಲಿದೆ, ಉಪಕರಣಗಳು ಹೆಚ್ಚಾದರೂ ಇಂದು ಮನುಷ್ಯನಿಗೆ ನೆಮ್ಮದಿ ಸಿಕ್ಕಿಲ್ಲ ಎಂದರು.
ಅಭಿನಂದನಾ ಭಾಷಣ ಮಾಡಿದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಜೇಸುದಾಸ್ ಕಳೆದ 50 ವರ್ಷಗಳಿಂದ ಮಾಡಿದ ಸಾಧನ ನಿಜಕ್ಕೂ ಅಪೂರ್ವವಾದ್ದು, ಜೇಸುದಾಸ್ ಬಗ್ಗೆ ಮಾತನಾಡುವುದು ಸೂರ್ಯ ಚಂದ್ರರನ್ನು ಬಣ್ಣಿಸಿದಂತೆ ಎಂದು ಹೇಳಿದರು.
ಇದೇ ವೇಳೆ ಜೇಸುದಾಸ್ ತಮ್ಮ ಗಾನ ಕಂಠದ ಮೂಲಕ ಸೇರಿದ್ದ ಜನರಿಗೆ ಸಂಗೀತದ ತಂಪೆರದರು.
ಇದೇ ವೇಳೆ ಜೇಸುದಾಸ್ ತಮ್ಮ ಗಾನ ಕಂಠದ ಮೂಲಕ ಸೇರಿದ್ದ ಜನರಿಗೆ ಸಂಗೀತದ ತಂಪೆರದರು.
Friday, 6 January 2012
Monday, 2 January 2012
Subscribe to:
Posts (Atom)
Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...
ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...
-
ಕೇರಳ ರಾಜ್ಯದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಲ್ಲಿನ ಸರಕಾರ ನೀಡಿದ ಪರಿಹಾರದ ಮಾದರಿಕ್ಕಿಂತಲೂ ಕನರ್ಾಟಕ ಅತ್ಯಂತ ಹಚ್ಚಿನ ರೀತಿಯ ಪರಿಹಾರವನ್ನು ನೀಡುವ ಮೂಲಕ ದೇಶಕ್ಕೆ...