ವಿಟ್ಲ: ವಿಟ್ಲ ಹಾಲು ಉತ್ಪಾದಕರ ಸಂಘದಲ್ಲಿ ಬರುತ್ತಿರುವ ಲಾಭಾಂಶದಲ್ಲಿ ಸದಸ್ಯರಿಗೆ ಶೇ15 ಡಿವಿಡೆಂಡ್ ನೀಡಲಾಗುವುದು ಎಂದು ವಿಟ್ಲ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮೋಹನ್ ಕಾಯರ್ಮಾರ್ ಹೇಳಿದರು.
ಅವರು ದ ಕ ಜಿ ಪಂ ಮಾ ಶಾಲೆಯಲ್ಲಿ ನಡೆದ ವಾಷರ್ಿಕ ಮಹಾ ಸಭೆಯಲ್ಲಿ ಮಾತನಾಡಿದರು. ದ ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಹೈನುಗಾರಿಕೆಗೆ ಒಕ್ಕೂಟದಿಂದ ಒದಗಿಸುತ್ತಿರುವ ಅನುದಾನ ಮತ್ತು ಅದನ್ನು ಬಳಸಿ ಹೇಗೆ ಲಾಭಗಳಿಸಬಹುದು ಎಂದು ಹೇಳಿದರು.
ಈ ಸಂದರ್ಭ ಸಂಘದ ನಿದರ್ೇಶಕರಾದ ಕೆ ಗಿರಿಯಪ್ಪ ಗೌಡ, ಬಾಲಕೃಷ್ಣ ಭಟ್ ಎ, ಕೆ ಐ ಸುಬ್ರಹ್ಮಣ್ಯ ಭಟ್, ಕೃಷ್ಣ ಭಟ್ ಸುರುಂಬಡ್ಕ, ಲೋಕನಾಥ, ಲಿಂಗಪ್ಪ ನಾಯ್ಕ ಉಪಸ್ಥಿತರಿದ್ದರು.
ಈ ಸಂದರ್ಭ ವಿಧಿವಶರಾದ ಕ್ಷೀರ ಕ್ರಾಂತಿಯ ಪಿತಾಮಹ ವಗರ್ೀಸ್ ಕುರಿಯನ್ ಅವರ ನಿಧನಕ್ಕೆ ಸಂತಾಪ ಸೂಚಕವಾಗಿ ಮೌನ ಪ್ರಾರ್ಥನೆ ಮಾಡಲಾಯಿತು. ವರದಿ ವರ್ಷದಲ್ಲಿ ಸಕ್ರೀಯವಾಗಿ ಹಾಲು ಸರಬರಾಜು ಮಾಡಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಕಾರ್ಯದಶರ್ಿ ಬಿ ಪುರುಷೋತ್ತಮ ವರದಿ ವಾಚಿಸಿದರು. ನಿದರ್ೇಶಕಿ ವಿಶಾಲಾಕ್ಷಿ ವಂದಿಸಿದರು.

No comments:
Post a Comment