ಸದಾನಂದ ಗೌಡರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚಚರ್ೆಗೆ ಸಿದ್ದ = ಕಾಂಗ್ರೆಸ್
ಪುತ್ತೂರು:ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡರು ತವರು ಕ್ಷೇತ್ರದ ಅಭಿವೃದ್ಧಿ ಹಾಕಿಕೊಂಡಿರುವ ಯೋಜನೆ ಬಗ್ಗೆ ಬಹಿರಂಗ ಚಚರ್ೆಗೆ ಸಿದ್ದ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದಶರ್ಿ ಮಹಮ್ಮದ್ ಆಲಿ ಹೇಳಿದ್ದಾರೆ.
ಬುಧವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸದನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ ಯವುದೇ ಜನಪರವಾದ ಕೆಲಸ ಮಾಡದೇ ಈಗ ಯಾರ್ಯಾರಲ್ಲೋ ಸಮರ್ಥನೆ ಮಾಡಿಸುತ್ತಿದ್ದಾರೆ.ಇದು ಸರಿಯಲ್ಲ, ಜನರ ಹದಿ ತಪ್ಪಿಸುವ ಕೆಲಸ ಹಾಗೂ ಅನಗತ್ಯವಾಗಿ ಕಾಂಗ್ರೆಸ್ ವಿರುದ್ದ ಟೀಕೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.ಕಾಂಗ್ರೆಸ್ ಜಿಲ್ಲೆಯಿಂದ 4 ಸಚಿವರು ಇದ್ದಾರೆ ಮುಂದೆ ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿಯುತ್ತದೆ.ಆದರೆ ಅನಗತ್ಯವಾಗಿ ಟೀಕೆ ಮಾಡುವುದರ ಬದಲು ಬಹಿರಂಗ ಚಚರ್ೆಗೆ ಬಿಜೆಪಿ ಬರಲಿ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್,ಪುರಸಭಾ ಸದಸ್ಯ ಅನ್ವರ್ ಖಾಸಿಂ ಮೊದಲಾದವರು ಉಪಸ್ಥಿತರಿದ್ದರು.
-----------------------
No comments:
Post a Comment