ಎಂಡೋಸಲ್ಫಾನ್ ಸಂತ್ರಸ್ತರಿಗೆ ಶಾಶ್ವತ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಯಾವುದೇ ಸರಕಾರದ ವಿರುದ್ದವೂ ಹೋರಾಟನಡೆಸಲು ನಾನು ಸಿದ್ದ ಎಂಧು ಮಾಜಿ ಮುಖ್ಯ ಮಂತ್ರಿ ಡಿ.ವಿ ಸದಾನಂದ ಗೌಡ ಘೋಷಿಸಿದರು.ಅವರು ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕೊಲಾದಲ್ಲಿ ನೂತನವಾಗಿ ಆರಂಭಿಸಿದ ವಿಕಲ ಚೇತನಕ್ಕೊಳಗಾದ ವಿಕಲ ಚೇತನ ಪಾಲನಕೇಂದ್ರದ ಸಭಾಕಾರ್ಯಕ್ರಮವನ್ನುದ್ದೇಶಿಸಿ ಮತನಾಡಿದರು.ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಎಂಢೋಸಲ್ಫಾನ್ ದುಷ್ಪರಿಣಾಮದಿಂಧಾಗಿ ಸಂತ್ರಸ್ತ್ತ್ತರಾದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ನಡೆಸಿದ ಹಲವು ಹೋರಾಟಗಳಿಗೆ ಕನರ್ಾಟಕ ರಾಜ್ಯ ಸರಕಾರ ಸ್ಪಂದಿಸಿದ್ದು ತಾನೂ ಮುಖ್ಯಮಂತ್ರಿಯಾದ ಸಂಧರ್ಭದಲ್ಲಿ ಈ ಸಂತ್ರಸ್ತರಿಗೆ ಶಾಶ್ವತ ಪರಿಹಾರವನ್ನು ನೀಡಲು ಯೋಜನೆಯನ್ನು ರೂಪಿಸಿರುವುದಾಗಿ ಹೇಳಿದರು.ಈ ಕುಟುಂಬಗಳ ನೋವಿಗೆ ಸ್ಪಂದಿಸಲು ಸರಕಾರ ಬದ್ದವಾಗಿದ್ದು ಯಾವುದೇ ಸರಕಾರವಾಗಲೀ ಈ ಬಗ್ಗೆ ನಿರಾಸಕ್ತಿ ವಹಿಸಿದರೆ ತಾನು ಹೋರಾಟವನ್ನು ನಡೆಸಲೂ ಸಿದ್ದವಿರುವುದಾಗಿ ಹೇಳಿದರು.
ಬೈಟ್:ಡಿ ವಿ ಸದಾನಂಧ ಗೌಡ
No comments:
Post a Comment