ಕೃಷಿಕರಿಗೆ ಆದಾಯಕ್ಕಿಂತ ಹೆಚ್ಚಿನ ವೆಚ್ಚಗಳಾಗುತ್ತಿರುವುದರಿಂದ ಸಮಸ್ಯೆಯಾಗಿದ್ದು, ಇದ್ದ ಭೂಮಿಯಲ್ಲಿ ಹೆಚ್ಚಿನ ಫಸಲು ಮತ್ತು ಉತ್ಪಾದನೆ ಪಡೆಯುವ
ನಿಟ್ಟಿನಲ್ಲಿ ಪ್ರಯತ್ನಿಸುವುದೇ ಈ ಸಮಸ್ಯೆಗೆ ಪರಿಹಾರ ಮಾರ್ಗ ಎಂದು ಧರ್ಮಸ್ಥಳದ ಧಮರ್ಾಧಿಕಾರಿ ಡಾ| ಡಿ ವಿರೇಂದ್ರ ಹೆಗ್ಗಡೆ ತಿಳಿಸಿದರು.
ಅವರು ಕ್ಯಾಂಪ್ಕೋ ನಿಯಮಿತ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಇದರ ಆಶ್ರಯದಲ್ಲಿ
ಪುತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ "ಕೃಷಿ ಯಂತ್ರ ಮೇಳ-2012" ಶುಕ್ರವಾರ
ಉದ್ಘಾಟಿಸಿ ಮಾತನಾಡಿದರು.
ಕೃಷಿಕರ ಸಾಂಸಾರಿಕ ವೆಚ್ಚ ಮತ್ತು ನಗರ ಮಾದರಿಯ ವೈಭವೀಕರಣದಿಂದಾಗಿ ಕೃಷಿಕರ ಖಚರ್ು ವೆಚ್ಚಗಳು ಜಾಸ್ತಿಯಾಗುತ್ತಿದ್ದು, ಈ ಹಿನ್ನಲೆಯಲ್ಲಿ
ಸಮಸ್ಯೆಯಿಂದ ಬಳಲುತ್ತಿದ್ದ ಕೃಷಿಕರು ತಮ್ಮ ಕೃಷಿಕಾರ್ಯದಲ್ಲಿ ಆಧುನೀಕರಣ , ಯಂತ್ರೋಪಕರಣ ಮತ್ತು ತಂತ್ರಜ್ಙಾನವನ್ನು ಬಳಕೆ ಮಾಡಿಕೊಳ್ಳುವ ಮೂಲಕ
ಕೃಷಿ ಆಧಾಯವನ್ನು ಹೆಚ್ಚಿಸುವ ಮುತುವಜರ್ಿ ನಡೆಯಬೇಕು ಎಂದರು.
ಪ್ರಸ್ತುತ ಕೃಷಿಕರಲ್ಲಿ ಆಸೆ ನಿರಾಸೆಗಳೊಂದಿಗೆ ಸಾಕಷ್ಟು ಬದಲಾವಣೆಗಳಾಗಿದೆ ಎಂದ ಅವರು ಕೃಷಿಕರಾದರೆ ಭವಿಷ್ಯವಿಲ್ಲವೆಂದು ಕೃಷಿಕರು ನಗರದ ಕಡೆ
ಸಾಗುತ್ತಿದ್ದಾರೆ. ಇದರಿಂದಾಗಿ ಕೃಷಿ ಮೂಲ ನಾಶವಾಗುತ್ತಿದ್ದು, ಕೃಷಿಕರನ್ನು ಹುಡುಕುವ ಸ್ಥಿತಿ ನಿಮರ್ಾಣಗೊಂಡಿದೆ. ಕೃಷಿಕರ ಸಮಸ್ಯೆಗೆ ಬೆನ್ನು ಹಾಕಿ
ಹೋಗುವ ಬದಲು ಎದುರಿಸುವ ಮನೋಸಾಮಥ್ರ್ಯ ಬೆಳೆಸಿಕೊಳ್ಳಬೇಕು. ಇದರೊಂದಿಗೆ ಕೃಷಿಯಲ್ಲಿ ನೂತನ ಪ್ರಯೋಗಗಳನ್ನು ಅಳವಡಿಸಿಕೊಳ್ಳಬೇಕು
ಎಂದರು. ಧಮರ್ಾಧಿಕಾರಿ ಡಾ| ಡಿ ವಿರೇಂದ್ರ ಹೆಗ್ಗಡೆ ಅವರು ರಿಮೋಟ್ ಒತ್ತುವ ಮೂಲಕ ರಿಮೋಟ್ ಚಾಲಿತ ಪವರ್ ಟಿಲ್ಲರ್ ಉದ್ಘಾಟಿಸಿದರು. ಬಳಿಕ 25ನೇ ವರ್ಷದ
ಅಡಿಕೆ ಪತ್ರಿಕೆ ವಿಶೇಷಾಂಕ ಬಿಡುಗಡೆ ಮಾಡಿದರು. ವಿವೇಕಾನಂದ ಕಾನೂನು ಕಾಲೇಜು ವಿದ್ಯಾಥರ್ಿಗಳ ಕೃಷಿ ಮಿತ್ರ ಮಾಹಿತಿ ಪುಸ್ತಕ ಬಿಡುಗಡೆ
ಮಾಡಿದರು.
ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ , ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಎಂ ಎನ್
ರಾಜೇಂದ್ರ ಕುಮಾರ್, ಭಾರತ ಸರಕಾರದ ಬಾಹ್ಯಾಕಾಶ ಮತ್ತು ಅಣು ಶಕ್ತಿ ಆಯೋಗದ ಕಾರ್ಯದಶರ್ಿ ವಿವಿ. ಭಟ್ ಶುಭಹಾರೈಸಿದರು. ಕೃಷಿ ಮೇಳ
ಸಂಯೋಜನಾ ಸಮಿತಿಯ ಪದಾಧಿಕಾರಿಗಳಾದ ಶಿವ ಪ್ರಸಾದ್, ರಾಧಾಕೃಷ್ಣ ಭಕ್ತ, ಸುರೇಶ್ ಭಂಡಾರಿ, ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು.
ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಬಲರಾಮ ಆಚಾರ್ಯ ಸ್ವಾಗತಿಸಿದರು. ಕ್ಯಾಂಪ್ಕೋ ನಿದರ್ೇಶಕ ಸಂಜೀವ ಮಠಂದೂರು ವಂದಿಸಿದರು.
ಕೃಷ್ಣ ಮೂತರ್ಿ ಮತ್ತು ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment