Monday, 15 April 2013

Vasudeva (SMT) Puttur



ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ  ಧ್ವಜ ಏರಿಸುವ ಪ್ರಕ್ರಿಯೆಗೆ ಗರುಡ ಬೇಕಾಗುತ್ತದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜೀಣರ್ೋದ್ದಾರ ಕಾರ್ಯದ ಈ ಸಂದರ್ಭದಲ್ಲಿ  ಗರುಡ ಕೂಡಾ ಸಿದ್ದವಾಗುತ್ತಿದೆ.

ಪುತ್ತೂರು  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಈ ಸಂದರ್ಭದಲ್ಲಿ  ಗರುಡ ಕೂಡಾ ಅಲಂಕಾರಗೊಳ್ಳುತ್ತಿದೆ. ಬೆಟ್ಟಂಪಾಡಿಯ ವಾಸುದೇವ ಅವರು  ಗರುಡ ಚಿತ್ರ ನಿಮರ್ಾಣದಲ್ಲಿ  ತೊಡಗಿದ್ದಾರೆ.ಮೂಲತ: ಕಾಸರಗೋಡು ಜಿಲ್ಲೆಯ  ಕೂಡ್ಲುಬಳಿಯ ಕಾವುಗುಳಿಯ ಇವರು  ಕಳೆದ 10 ದಿನಗಳಿಂದ ಈ ಕೆಲಸವನ್ನು  ದೇವಸ್ಥಾನದ ವಠಾರದಲ್ಲಿ  ಮಾಡುತ್ತಿದ್ದಾರೆ.  ದೇವಸ್ಥಾನಗಳಲ್ಲಿ  ಜಾತ್ರೆ ವೇಳೆ ಗ್ರಾಮ್ಯ ಭಾಷೆಯಲ್ಲಿ  ಕೊಡಿ  ಏರುವುದು  ಎಂಬ ಸಂಪ್ರದಾಯ ಇದೆ. ಈ ಸಂದರ್ಭದಲ್ಲಿ  ಕೊಡಿಮರದಲ್ಲಿ (ಧ್ವಜಸ್ಥಂಭದಲ್ಲಿ) ಗರುಡ ನೇತಾಡುತ್ತದೆ. ಮನುಷ್ಯನ ಅಥವಾ ಬೇತಾಳದ ಮಾದರಿಯಲ್ಲಿ  ಇರುವ ಈ ಆಕೃತಿಯು ಕೆಲವು  ಪ್ರಮುಖ 
ದೇವಸ್ಥಾನಗಳಲ್ಲಿ   ಇರುತ್ತದೆ. ಈ ಗರುಡ ಆಕೃತಿಯನ್ನು  ಕೆಲವೇ ಕೆಲವು  ಜನ ಮಾತ್ರಾ ತಯಾರಿಸುತ್ತಾರೆ. ಅಂತಹವರಲ್ಲಿ  ವಾಸುದೇವ ಒಬ್ಬರು. 
ಒಂದು  ನೂತನ ಗರುಡ ನಿಮರ್ಾಣಕ್ಕೆ ಕನಿಷ್ಠ 6 ತಿಂಗಳ ಕೆಲಸ ಇದೆ ಎನ್ನುವ ವಾಸುದೇವ್ ಇದರಲ್ಲಿ  ಕೆಂಪು , ಕಪ್ಪು , ಬಿಳಿ  ಹಾಗೂ ಹಳದಿ ಬಣ್ಣ ಉಪಯೋಗಿಸಲಾಗುತ್ತದೆ. ಒಮ್ಮೆ ತಯಾರು  ಮಾಡಿದರೆ ಸುಮಾರು  20  ರಿಂದ 30  ವರ್ಷದವರೆಗೂ ಬಾಳ್ವಿಗೆ ಬರುತ್ತದೆ. ಆದರೆ 5 ವರ್ಷಗಳಿಗೊಮ್ಮೆ ದುರಸ್ತಿ ಮಾಡಿದರೆ ಸೈ. ಸುಮಾರು  73 ವರ್ಷದ ಇವರು ಇದುವರೆಗೆ 15 ರಷ್ಟು  ನೂತನ ಗರುಡ ರಚನೆ ಮಾಡಿದ್ದಾರೆ. 

ಪುತ್ತೂರಿನಲ್ಲಿ  ಇರುವ ಗರುಡವು  ಅನೇಕ ವರ್ಷಗಳ ಹಿಂದೆ ಮಾಡಲಾಗಿದೆ. ಈಗಲೂ ಸುಸಜ್ಜಿತವಾಗಿದೆ. ಆದರೆ ಗ ದೇವಸ್ಥಾನ ಜೀಣರ್ೋಧ್ದಾರಗೊಂಡು  ಬ್ರಹ್ಮಕಲಶ ಆಗುವ ವೇಳೆ ಮತ್ತೆ ಸುಂದರವಾಗಿ ರೂಪುಗೊಳಿಸಬೇಕಿದೆ. ಇನ್ನು  15 ದಿನಗಳ ಒಳಗಾಗಿ ಆಕರ್ಷಕ ಗರುಡ ರಚನೆ ಆಗಲಿದೆ ಎನ್ನುತ್ತಾರೆ ವಾಸುದೇವ.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...