ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಧ್ವಜ ಏರಿಸುವ ಪ್ರಕ್ರಿಯೆಗೆ ಗರುಡ ಬೇಕಾಗುತ್ತದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜೀಣರ್ೋದ್ದಾರ ಕಾರ್ಯದ ಈ ಸಂದರ್ಭದಲ್ಲಿ ಗರುಡ ಕೂಡಾ ಸಿದ್ದವಾಗುತ್ತಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಈ ಸಂದರ್ಭದಲ್ಲಿ ಗರುಡ ಕೂಡಾ ಅಲಂಕಾರಗೊಳ್ಳುತ್ತಿದೆ. ಬೆಟ್ಟಂಪಾಡಿಯ ವಾಸುದೇವ ಅವರು ಗರುಡ ಚಿತ್ರ ನಿಮರ್ಾಣದಲ್ಲಿ ತೊಡಗಿದ್ದಾರೆ.ಮೂಲತ: ಕಾಸರಗೋಡು ಜಿಲ್ಲೆಯ ಕೂಡ್ಲುಬಳಿಯ ಕಾವುಗುಳಿಯ ಇವರು ಕಳೆದ 10 ದಿನಗಳಿಂದ ಈ ಕೆಲಸವನ್ನು ದೇವಸ್ಥಾನದ ವಠಾರದಲ್ಲಿ ಮಾಡುತ್ತಿದ್ದಾರೆ. ದೇವಸ್ಥಾನಗಳಲ್ಲಿ ಜಾತ್ರೆ ವೇಳೆ ಗ್ರಾಮ್ಯ ಭಾಷೆಯಲ್ಲಿ ಕೊಡಿ ಏರುವುದು ಎಂಬ ಸಂಪ್ರದಾಯ ಇದೆ. ಈ ಸಂದರ್ಭದಲ್ಲಿ ಕೊಡಿಮರದಲ್ಲಿ (ಧ್ವಜಸ್ಥಂಭದಲ್ಲಿ) ಗರುಡ ನೇತಾಡುತ್ತದೆ. ಮನುಷ್ಯನ ಅಥವಾ ಬೇತಾಳದ ಮಾದರಿಯಲ್ಲಿ ಇರುವ ಈ ಆಕೃತಿಯು ಕೆಲವು ಪ್ರಮುಖ
ದೇವಸ್ಥಾನಗಳಲ್ಲಿ ಇರುತ್ತದೆ. ಈ ಗರುಡ ಆಕೃತಿಯನ್ನು ಕೆಲವೇ ಕೆಲವು ಜನ ಮಾತ್ರಾ ತಯಾರಿಸುತ್ತಾರೆ. ಅಂತಹವರಲ್ಲಿ ವಾಸುದೇವ ಒಬ್ಬರು.
ಒಂದು ನೂತನ ಗರುಡ ನಿಮರ್ಾಣಕ್ಕೆ ಕನಿಷ್ಠ 6 ತಿಂಗಳ ಕೆಲಸ ಇದೆ ಎನ್ನುವ ವಾಸುದೇವ್ ಇದರಲ್ಲಿ ಕೆಂಪು , ಕಪ್ಪು , ಬಿಳಿ ಹಾಗೂ ಹಳದಿ ಬಣ್ಣ ಉಪಯೋಗಿಸಲಾಗುತ್ತದೆ. ಒಮ್ಮೆ ತಯಾರು ಮಾಡಿದರೆ ಸುಮಾರು 20 ರಿಂದ 30 ವರ್ಷದವರೆಗೂ ಬಾಳ್ವಿಗೆ ಬರುತ್ತದೆ. ಆದರೆ 5 ವರ್ಷಗಳಿಗೊಮ್ಮೆ ದುರಸ್ತಿ ಮಾಡಿದರೆ ಸೈ. ಸುಮಾರು 73 ವರ್ಷದ ಇವರು ಇದುವರೆಗೆ 15 ರಷ್ಟು ನೂತನ ಗರುಡ ರಚನೆ ಮಾಡಿದ್ದಾರೆ.
ಪುತ್ತೂರಿನಲ್ಲಿ ಇರುವ ಗರುಡವು ಅನೇಕ ವರ್ಷಗಳ ಹಿಂದೆ ಮಾಡಲಾಗಿದೆ. ಈಗಲೂ ಸುಸಜ್ಜಿತವಾಗಿದೆ. ಆದರೆ ಗ ದೇವಸ್ಥಾನ ಜೀಣರ್ೋಧ್ದಾರಗೊಂಡು ಬ್ರಹ್ಮಕಲಶ ಆಗುವ ವೇಳೆ ಮತ್ತೆ ಸುಂದರವಾಗಿ ರೂಪುಗೊಳಿಸಬೇಕಿದೆ. ಇನ್ನು 15 ದಿನಗಳ ಒಳಗಾಗಿ ಆಕರ್ಷಕ ಗರುಡ ರಚನೆ ಆಗಲಿದೆ ಎನ್ನುತ್ತಾರೆ ವಾಸುದೇವ.
No comments:
Post a Comment