Wednesday, 10 April 2013

news puttur

ಪುತ್ತೂರು- ಮಂಗಳೂರು -ಬೆಂಗಳೂರು  ರಾಷ್ಟ್ರೀಯ ಹೆದ್ದಾರಿಯ  ಪನರ್ೆ ಬಳಿ ಎಲ್ಪಿಜಿ  ತುಂಬಿಕೊಂಡಿದ್ದ ಬುಲೆಟ್ ಟ್ಯಾಂಕರ್ ಮಂಗಳವಾರದಂದು ಪಲ್ಟಿಯಾಗಿ  ಗ್ಯಾಸ್ ಸೋರಿಕೆಯಿಂದ ಬೆಂಕಿ  ಹತ್ತಿಕೊಂಡು ಟ್ಯಾಂಕರ್ ಚಾಲಕ ಸಹಿತ 6 ಮಂದಿ  ಸಜೀವ ದಹನವಾಗಿದ್ದಾರೆ.
ಮಂಗಳೂರಿನಿಂದ ಎಚ್ಪಿಸಿಎಲ್ ಅಡುಗೆ ಅನಿಲ ಹೇರಿಕೊಂಡು  ಬೆಂಗಳೂರಿನತ್ತ ತೆರಳುತ್ತಿದ್ದ ಬುಲೆಟ್ ಟ್ಯಾಂಕರ್ ಪೆನರ್ೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ  ಗ್ಯಾಸ್ ಸೋರಿಕೆಯಾಯಿತು. ಈ ಸಂದರ್ಭದಲ್ಲಿ  ಶಾಟರ್್ ಸಕ್ಯರ್ೂಟ್ನಿಂದ ಬೆಂಕಿ ಹತ್ತಿಕೊಂಡು  ಸುಮಾರು  500 ಮೀಟರ್ ವ್ಯಾಪ್ತಿಯ  ಮನೆಗಳು , ಅಂಗಡಿಗಳು  ಏಕ್ಧಂ ಬೆಂಕಿಹತ್ತಿಕೊಂಡಿತು. ಈ ಸಂದರ್ಭದಲ್ಲಿ  ಅಂಗಡಿ  ಬಳಿ ಹಾಗೂ ಮನೆಯೊಳಗಿದ್ದ ವರೆಲ್ಲಾ ಸಜೀವ ದಹನವಾದರು. ಟ್ಯಾಂಕರ್ ಚಾಲಕ ಲಾರಿಯೊಳಗೇ ದಹನವಾದ. ಘಟನೆಯಿಂದಾಗಿ  ಹೆದ್ದಾರಿ  ಸಂಚಾರ್ ಬಂದ್ ಮಾಡಲಾಗಿದ್ದು  ಗ್ಯಾಸ್ ಸೋರಿಕೆಯಾಗುತ್ತಿರುವುದರಿಮದ ಅಗ್ನಿ ಶಾಮಕ ದಳದ ಸಿಬಂದಿಗಳು  ನಿರಂತರವಾಗಿ ಟ್ಯಾಂಕರ್ಗೆ ನೀರು  ಸಿಂಚನ ಮಾಡುತ್ತಿದ್ದಾರೆ.
ಘಟನೆಯ ವಿವರ :
ಮಂಗಳೂರಿನ ಸುರತ್ಕಲ್ನಿಂದ ಬೆಳಗ್ಗೆ 16 ಸಾವಿರ ಲೀಟರ್ ಅಡುಗೆ ಅನಿಲ ತುಂಬಿಕೊಂಡು  ಹೊರಟ್ಟಿದ್ದ ಬುಲೆಟ್ ಟ್ಯಾಂಕರ್ ಬೆಳಗ್ಗೆ ಸುಮಾರು  9.45 ರ ಹೊತ್ತಿಗೆ ಪೆನರ್ೆ ಬಳಿಯ ತಿರುವಿನಲ್ಲಿ  ಚಾಲಕನ  ನಿಯಂತ್ರಣ ತಪ್ಪಿ  ಪಲ್ಟಿಯಾಯಿತು. ಈ ಸಂದರ್ಭದಲ್ಲಿ  ರಸ್ತೆ ಬದಿ ಇದ್ದ  ವಿದ್ಯುತ್ ಕಂಬಗಳಿಗೆ ಕೂಡಾ ಡಿಕ್ಕಿಯಾದ್ದರಿಂದ ಶಾಟರ್್ ಸಕ್ಯರ್ೂಟ್ ಆಗಿ ಟ್ಯಾಂಕರ್ ಪಲ್ಟಿಯಾಗುವ ವೇಳೆ  ಟ್ಯಾಂಕರ್ನಿಂದ ಚಿಮ್ಮಿದ ಗ್ಯಾಸ್ಗೆ ಬೆಂಕಿ ಹತ್ತಿಕೊಂಡು  ಇಡೀ ವ್ಯಾಪಿಸಿತು. ಈ ಸಂದರ್ಭದಲ್ಲಿ  ರಸ್ತೆಯಿಂದ ಸುಮಾರು  50  ಮೀಟರ್ ದೂರದಲ್ಲಿದ್ದ 3 ಮನೆಗಳಿಗೆ , ಒಂದು ಗ್ಯಾರೇಜ್ಗೆ  ,ಬೇಕರಿ  ಅಂಗಡಿ ಸಂಪೂರ್ಣ ಭಸ್ಮವಾಗಿ  ಆಸುಪಾಸಿನ ಮನೆಗಳಿಗೆ ಬೆಂಕಿ ತಗುಲಿತು. ಈ ಸಂದರ್ಭದಲ್ಲಿ  ಮನೆಯೊಳಗಿದ್ದ ಮಗು ಸಹಿತ ಮಹಿಳೆ , ಅಂಗಡಿಯದ್ದಲಿದ್ದ ಮಗು ಹಾಗೂ  ಸ್ಥಳೀಯರು ಹಾಗೂ  ಟ್ಯಾಂಕರ್ ಚಾಲಕ ಸಜೀವವಾಗಿ ದಹನವಾದರು.ಆಸುಪಾಸಿನಲ್ಲಿದ್ದ  ಕೆಲವರು  ಓಡಿ ಹೋದರು.
 ಕೋಳಿಗಳು , ಸಾಕುಪ್ರಾಣಿಗಳು  ಸುಟ್ಟು ಕರಕಲಾಗಿ  ಬಿದ್ದುಕೊಂಡಿದ್ದವು. ಸ್ಥಳದಲ್ಲಿದ್ದ  ಮಾಂಸದ ಮುದ್ದೆಯಂತಾಗಿದ್ದ ಮೃತದೇಹಗಳನ್ನು ಬಟ್ಟೆಯಲ್ಲಿ  ಸುತ್ತಿಕೊಂಡೊಯ್ಯುವ ದೃಶ್ಯ ಮನಕಲಕುವಂತಿತ್ತು. ಮೃತರಲ್ಲಿ ಶೋಭಾ (35) , ಕರೀಂ (17) , ವನಿತಾ  ಎಂಬವರು  ಗುರುತು  ಪತ್ತೆಯಾಗಿದೆ.
ಬೆಂಕಿಯ ಕೆನ್ನಾಲಿಗೆ ಸುಮಾರು  500  ಮೀಟರ್ವರೆಗೆ ವ್ಯಾಸಪಿಸಿತ್ತು. ಆಸುಪಾಸಿನ 8 ತೆಂಗಿನ ಮರ ಸಂಪೂರ್ಣ ಭಸ್ಮವಾಗಿದೆ. ಟ್ಯಾಂಕರ್ ಹಿಂಬದಿಯಿಂದ ಬರುತ್ತಿದ್ದ ಓಮ್ನಿ , ಅಂಗಡಿಗೆ ಬೇಕರಿ ವಸ್ತುಗಳನ್ನು  ನೀಡಲು  ನಿಲ್ಲಿಸಿದ್ದ ಮಂಗಳೂರಿನ ಕಂಪನಿಯೊಂದರ ಮಿನಿ ಲಾರಿ,  ಗ್ಯಾರೇಜ್ನಲ್ಲಿದ್ದ 2 ಬೈಕ್ ಸೇರಿದಂತೆ ಒಟ್ಟು  7 ವಾಹನಗಳು ಭಸ್ಮವಾಗಿದೆ.
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಒಟ್ಟು  13 ವಾಹನಗಳು ಸ್ಥಳಕ್ಕೆ ಆಗಮಿಸಿ  ಬೆಂಕಿ ನಂದಿಸುವುದರ ಜೊತೆಗೆ ಯಾವುದೇ ಅನಾಹುತ ಆಗದಂತೆ ಎಚ್ಚರಿಕೆ ವಹಿಸಿದರು.ನಿರಂತರವಾಗಿ ನೀರಿನ ಸಿಂಪಡಣೆ ಮಾಡಿ ಟ್ಯಾಂಕರ್ ತಂಪಾಗಿಸಿ  ಎಚ್ಚರಿಕೆ ವಹಿಸಿದರು.
ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹಿಡಿದು ಶಂಕರ್ ರೈ , ನಾರಾಯಣ , ಅಬೂಬಕರ್   ಎಂಬವರ ಮನೆ ಚಂದ್ರ  ಎಂಬವರ ಗ್ಯಾರೇಜ್ ಭಸ್ಮವಾಗಿದೆ.
ಪ್ರತ್ಯಕ್ಷದಶರ್ಿಗಳ ಮಾತು :
ಬೆಂಕಿ  ಜೊತೆಗೇ ಬಂತು :
ಮನೆಯೊಳಗಿದ್ದ  ಉಮ್ಮರ್ ಅವರಿಗೆ ಲಾರಿ ಬಿದ್ದ ಸದ್ದು  ಕೇಳಿತು  ಜೊತೆಗೆ ಹೊಗೆಯೂ ಬಂತು , ಬೆಂಕಿಯೂ ಜೊತೆ ಜೊತೆಗೇ ಬಂತು , ಮನೆಯ ಹೊರಗಿದ್ದ  ಚಪ್ಪಲ್ , ಬಟ್ಟೆ ಹೊತ್ತಿ ಉರಿಯುತ್ತಿತ್ತು  ಕೂಡಲೇ ಮನೆಯವರನ್ನೆಲ್ಲಾ ಓಡಲು ಹೇಳಿ , ಮನೆ ಹೊರಗಡೆ ಉರಿಯುತ್ತಿದ್ದ ಚಪ್ಪಲ್ , ಬಟ್ಟೆಗಳನ್ನು  ಎಸೆದು  ಓಡಿದೆ ಎಂದು  ಹೇಳುತ್ತಾರೆ. ನೋಡುತ್ತಿದ್ದಂತೆಯೇ ತೆಂಗಿನಮರಗಳೆಲ್ಲಾ ಉರಿಯುತ್ತಲೇ ಇತ್ತು  ಎಂದು  ಭಯದಿಂದ ಹೇಳುತ್ತಾರೆ. ಆ ಸಂದರ್ಭದಲ್ಲಿ  ಕೆಳಗಿನ ಮನೆಯ ಹೆಂಗಸು  ನಮ್ಮ ಮನೆ ಕಡೆಗೆ ಬರುತ್ತಿದ್ದರು , ಅವರ ಕೂದಲಿಗೆ ಬೆಂಕಿ ಹಿಡಿದಿತ್ತು  ಅದನ್ನು  ನಂದಿಸಲು ಪ್ರಯತ್ನ ಪಟ್ಟು  ಓಡಿ  ಎಂದು  ಹೇಳಿದೆ , ಆದರೆ ಅವರಿಗೆ ಬರಲು  ಆಗಲಿಲ್ಲ , ತೀವ್ರ ಗಾಯವಾಗಿದೆ ಎಂದು ಉಮ್ಮರ್ ಹೇಳುತ್ತಾರೆ.
ಹೊಗೆ ಬಂತು  ಓಡಿದೆ . . 
ಮಂಗಳೂರಿನಿಂದ ಬೇಕರಿ  ತಿಂಡಿಗಳನ್ನು  ಹೇರಿಕೊಂಡು  ಹಾಸನದ ಕಡೆಗೆ ತೆರಳುತ್ತಿದ್ದೆವು. ಈ ಸಂದರ್ಭದಲ್ಲೆ ಪೆನರ್ೆಯ  ಈ ಪ್ರದೇಶದಲ್ಲಿ  ಅಂಗಡಿಗೆ ಯಾವಾಗಲೂ  ತಿಂಡಿ  ಖಾಲಿ ಮಾಡಿ ತೆರಳುವುದು. ಇಂದು  ಕೂಡಾ ಇಲ್ಲಿ  ನಿಲ್ಲಿಸಿದ್ದಾಗ  ಟ್ಯಾಂಕರ್ ಬಿದ್ದ  ಸದ್ದು  ಕೇಳಿತು , ಜೊತೆಗೆ ದಟ್ಟವಾದ ಹೊಗೆಯೂ  ಬಂತು. ನಮ್ಮ  ಜೊತೆಗೆ ಇದ್ದ  ಕೃಷ್ಣ ಓಡಿ  ಓಡಿ ಎಂದಾಗ  ದಾರಿ ಸಿಕ್ಕ ಕಡೆ ಓಡುತ್ತಾ ಸಮೀಪದ ಮನೆಯವರಿಗೂ  ತಿಳಿಸುತ್ತಾ ಓಡಿದೆವು. ನೋಡುತ್ತಿದ್ದಂತೆಯೇ ನಮ್ಮ  ಲಾರಿಯೂ ಉರಿಯಿತು  ಎಂದು  ಮಿನಿ ಲಾರಿ  ಚಾಲಕ  ಶಿವಪ್ಪ  ದೃಶ್ಯವನ್ನು  ವಿವರಿಸಿದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...