Wednesday, 30 March 2016

ಆಮಂತ್ರಣ ಮರುಮುದ್ರಿಸಲು ಹೈಕೋಟರ್್ ಆದೇಶ
 *ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಆಮಂತ್ರಣದಲ್ಲಿದ್ದ ಎ.ಬಿ.ಇಬ್ರಾಹಿಂ ಹೆಸರಿನ ವಿವಾದ
 ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾಷರ್ಿಕ ಜಾತ್ರಾ ಉತ್ಸವದ ಆಮಂತ್ರಣ ಪತ್ರಿಕೆ ವಿವಾದ ಅಂತ್ಯ ಕಂಡಿದೆ. ಆಮಂತ್ರಣ ಪತ್ರಿಕೆಯಿಂದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರನ್ನು ತೆಗೆದು ಮರುಮುದ್ರಿಸುವಂತೆ ಹಾಗೂ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ರಾಜ್ಯ ಹೈಕೋಟರ್್ ಬುಧವಾರ ಆದೇಶ ಮಹತ್ವದ ಆದೇಶ ನೀಡಿದೆ.
 ಧಾಮರ್ಿಕ ದತ್ತಿ ಇಲಾಖೆಯ ಕಲಂ 7ರ ಪ್ರಕಾರ ದೇವಸ್ಥಾನಗಳಲ್ಲಿ ಹಿಂದುಯೇತರರು ಮತ್ತು ಧಾಮರ್ಿಕ ನಂಬಿಕೆ ಇಲ್ಲದವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡ ಭಕ್ತವೃಂದ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಹೆಸರಿಗೆ ವಿರೋಧವಿಲ್ಲ; ಎ.ಬಿ.ಇಬ್ರಾಹಿಂ ಹೆಸರಿಗೆ ವಿರೋಧ ಎಂದು ಸ್ಪಷ್ಟವಾಗಿ ತಿಳಿಸಲಾಯಿತು. ಹಿಂದುಯೇತರ ಅಧಿಕಾರಿ ಹಿಂದು ಭಕ್ತರನ್ನು ದೇವಳಕ್ಕೆ ಆಮಂತ್ರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿ ಸಮರ್ಥನೆ, ಕಾಂಗ್ರೆಸ್ ನಾಯಕರ ಬೆಂಬಲ ಒಂದಾಗುತ್ತಿದ್ದಂತೆ ವಿಹಿಂಪ ಮುಖಂಡ ನವೀನ್ ಕುಲಾಲ್ ಹೈಕೋಟರ್್ ಮೆಟ್ಟಿಲೇರಿದರು. ಭಕ್ತವೃಂದದ ವಾದವನ್ನು ಇದೀಗ ಹೈಕೋಟರ್್ ಎತ್ತಿ ಹಿಡಿದಂತಾಗಿದೆ.
 ಪ್ರತಿಭಟನೆ, ರಾಸ್ತಾರೋಕೋ, ಬಂದ್ ಹೀಗೆ ವಿವಿಧ ಹಂತದಲ್ಲಿ ವಿರೋಧ ವ್ಯಕ್ತಪಡಿಸುವ ಇಂಗಿತ ಭಕ್ತರದ್ದಾಗಿತ್ತು. ಆದರೆ ಮಹಾಲಿಂಗೇಶ್ವರ ದೇವರ ವಿಚಾರದಲ್ಲಿ ಇದರ ಅಗತ್ಯವಿಲ್ಲ ಎಂದು ಮುಖಂಡರು ಮನವೊಲಿಸಿದರು. ಹೈಕೋಟರ್್ ನೀಡಿದ ತೀಪರ್ು ಭಕ್ತವೃಂದದ ಪರವಾಗಿಯೇ ಬಂದ ಕಾರಣ ವಿವಾದ ಅಂತ್ಯವಾಗಿದೆ. ಆಮಂತ್ರಣ ಮರುಮುದ್ರಿಸಬೇಕು ಎಂಬ ಭಕ್ತರ ಬೇಡಿಕೆಗೆ ಜಯ ಸಿಕ್ಕಿದೆ.


 ಅಸಹಿಷ್ಣುತೆ ಎಂದಿದ್ದ ಡಿಸಿ:
 ಜಿಲ್ಲೆಯ ಎಲ್ಲಾ ವಿಚಾರಗಳಲ್ಲೂ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಬಹುದು. ದೇವಳಕ್ಕೆ ಅನುದಾನ ನೀಡಿದ್ದೇನೆ, ಕಾರು ನೀಡಿದ್ದೇನೆ, ಕ್ಯಾಟಲಾಗ್ನಲ್ಲಿ ಹೆಸರು ಸೇರಿಸುವಾಗಿ ತಾನು ಬೇಕಿತ್ತು. ಈಗ ತಾನು ಬೇಡವಾದೆನೇ ಎಂದಿದ್ದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ವಿವಾದವನ್ನು ಅಸಹಿಷ್ಣುತೆ ಎಂದು ಬಣ್ಣಿಸಿದ್ದರು. ಸುಬ್ರಹ್ಮಣ್ಯ, ಮೈಸೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಹೆಸರನ್ನು ಆಮಂತ್ರಣದಲ್ಲಿ ಮುದ್ರಿಸುವ ಶಿಷ್ಟಚಾರ ಇದೆ ಎಂದು ತಿಳಿಸಿದ್ದರು.
 

 ಚಪ್ಪರ ವಿವಾದ:
 ಇದರ ನಡುವೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ವಿವಾದದ ನಡುವೆ ಚಪ್ಪರ ವಿವಾದ ತಾರಕಕ್ಕೇರಿತು. ಶೇಡ್ ನೆಟ್ ಹಾಕಿದ್ದ ಅಧಿಕಾರಿಗಳ ಕ್ರಮ ಆಕ್ರೋಶಕ್ಕೆ ಕಾರಣವಾಯಿತು. ಮಾಂಸಾಹಾರಿ ಕಾರ್ಯಕ್ರಮಗಳಲ್ಲಿ ಬಳಕೆಯಾದ ಶೇಡ್ನೆಟ್ ದೇವಳಗಳಲ್ಲಿ ಬಳಕೆಯಾಗುವುದು ಎಷ್ಟು ಸರಿ? ಇದನ್ನು ಪ್ರತಿಭಟಿಸಿ ದಿನೇಶ್ ಜೈನ್ ಮನವಿ ಸಲ್ಲಿಸಿದ್ದರು. ಶ್ರೀಧರ್ ಹೆಗ್ಡೆ ಎಂಬವರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಸಾಂಪ್ರದಾಯಿಕ ತಟ್ಟಿ ಚಪ್ಪರ ನಿಮರ್ಿಸಿ ಕೊಡುವ ಭರವಸೆ ನೀಡಿದ್ದರು. ಅದರಂತೆ ಒಪ್ಪಿಗೆ ಸಿಕ್ಕಿದ್ದು ಏ.1ರಂದು ಚಪ್ಪರ ಮುಹೂರ್ತ ನಡೆಯಲಿದೆ.

ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿಗೂ ತನಗೆ ಸಿಕ್ಕಿರುವ ಮಾಹಿತಿಗೂ ಹೊಂದಾಣಿಕೆ ಆಗುತ್ತಿಲ್ಲ. ಹೈಕೋಟರ್್ ಆದೇಶದ ಪ್ರತಿ ಸಿಕ್ಕಿದ ಬಳಿಕವಷ್ಟೇ ಹೇಳಿಕೆ ನೀಡಲು ಸಾಧ್ಯ.
 ಎ.ಬಿ.ಇಬ್ರಾಹಿಂ, ಜಿಲ್ಲಾಧಿಕಾರಿ

 ಹೀಗಿತ್ತು ವಿವಾದದ ಹಾದಿ
 -10ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಆಮಂತ್ರಣದಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರಿನ ವಿವಾದ ಆರಂಭ
 -11ರಂದು ಭಕ್ತವೃಂದದ ಜತೆಗೂಡಿದ ಸಂಘಟನೆಗಳು
 -14ರಂದು ಆಮಂತ್ರಣ ಮರುಮುದ್ರಿಸಿಯೇ ಸಿದ್ಧ ಎಂಬ ಶಾಸಕಿ ಶಕುಂತಳಾ ಶೆಟ್ಟಿ
 -15ರಂದು ಜಿಲ್ಲಾಧಿಕಾರಿ ಸಮರ್ಥನೆ. ಅಸಹಿಷ್ಣುತೆ ಎಂದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಬಣ್ಣನೆ
 -16ರಂದು ಜನಾರ್ದನ ಪೂಜಾರಿ, ರಮಾನಾಥ ರೈ ಜಿಲ್ಲಾಧಿಕಾರಿ ಬೆಂಬಲಕ್ಕೆ
 -16ರಂದು ಪ್ರಕರಣ ಹೈಕೋಟರ್್ ಅಂಗಳಕ್ಕೆ
 -17ರಂದು ಪ್ರತಿಭಟನೆ- ಜಿಲ್ಲಾ ಬಂದ್ಗೆ ಕರೆ ಎಚ್ಚರಿಕೆ
 -19ರಂದು ನಟರಾಜ ವೇದಿಕೆಯಲ್ಲಿ ಭಕ್ತರ ಸಭೆ
 -21ರಂದು ವಜ್ರದೇಹಿ ಹಾಗೂ ಬಾಳೆಕೋಡಿ ಶ್ರೀಗಳ ಉಪಸ್ಥಿತಿಯಲ್ಲಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ- ರಥಬೀದಿಯಲ್ಲಿ ಸಭೆ- ನ್ಯಾಯಾಲಯ ವಿಚಾರಣೆ 24ಕ್ಕೆ ಮುಂದೂಡಿಕೆ
 -24ರಂದು ವಿಚಾರಣೆಯನ್ನು ಮುಂದೂಡಿದ ಹೈಕೋಟರ್್ -ಆಮಂತ್ರಣದಲ್ಲಿ ಹೆಸರು ಶಿಷ್ಟಾಚಾರವೆಂದ ಜಿಲ್ಲಾಧಿಕಾರಿ
 -26ರಂದು ಜಿಲ್ಲಾಧಿಕಾರಿ ಜತೆ ಆರ್ಎಸ್ಎಸ್ ಮಾತುಕತೆ
 -29ರಂದು ಧರ್ಮ ಜಾಗೃತಿ ಸಭೆ- ಒಡಿಯೂರು ಶ್ರೀ, ಮಹಾಬಲ ಶ್ರೀಗಳ ಉಪಸ್ಥಿತಿ -ಹೈಕೋಟರ್್ ವಿಚಾರಣೆ 30ಕ್ಕೆ ಮುಂದೂಡಿಕೆ
 -30ರಂದು ಭಕ್ತವೃಂದದ ಪರವಾಗಿ ಹೈಕೋಟರ್್ ತೀಪರ್ು





 

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...