Thursday, 17 March 2016

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ಪತ್ರಿಕೆ ಮರುಮುದ್ರಣಕ್ಕೆ ಆಗ್ರಹಿಸಿ ಮಿನಿವಿಧಾನಸೌಧ ಮುಂಭಾಗ ಗುರುವಾರ ನಡೆದ ಪ್ರತಿಭಟನೆ

ಪುತ್ತೂರು: ಬಹುಸಂಖ್ಯಾತರಿಗೆ- ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಕಾನೂನು ಅನುಸರಿಸಲಾಗುತ್ತಿದೆ. ಜಾತ್ರಾ ಆಮಂತ್ರಣ ಪತ್ರಿಕೆಯಿಂದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರು ತೆಗೆಯುವವರೆಗೂ ಹೋರಾಟ ಮುಂದುವರಿಯಲಿದೆ. ಪುತ್ತೂರು ಮಾತ್ರವಲ್ಲ ಪುತ್ತೂರು: ಬಹುಸಂಖ್ಯಾತರಿಗೆ- ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಕಾನೂನು ಅನುಸರಿಸಲಾಗುತ್ತಿದೆ. ಜಾತ್ರಾ ಆಮಂತ್ರಣ ಪತ್ರಿಕೆಯಿಂದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರು ತೆಗೆಯುವವರೆಗೂ ಹೋರಾಟ ಮುಂದುವರಿಯಲಿದೆ. ಪುತ್ತೂರು ಮಾತ್ರವಲ್ಲ ಜಿಲ್ಲಾ ಬಂದ್ಗೂ ಕರೆ ನೀಡಲಾಗುವುದು. ಇದರಿಂದಾಗುವ ಸಮಸ್ಯೆಗೆ ಜಿಲ್ಲಾಡಳಿತವೇ ಹೊಣೆ ಎಂದು ಹಿಂದು ಜಾಗರಣಾ ವೇದಿಕೆ ಪ್ರಾಂತ ಸಂಚಾಲಕ ಸತ್ಯಜಿತ್ ಸುರತ್ಕಲ್ ಹೇಳಿದರು.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ಪತ್ರಿಕೆ ಮರುಮುದ್ರಣಕ್ಕೆ ಆಗ್ರಹಿಸಿ ಮಿನಿವಿಧಾನಸೌಧ ಮುಂಭಾಗ ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಹಿಂದುಯೇತರರ ಹೆಸರು ದೇವಸ್ಥಾನದಲ್ಲಿ ಬಳಕೆ ಆಗಬಾರದೆಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಒಂದು ವೇಳೆ ದೇವಳದ ವಿಚಾರದಲ್ಲಿ ಜಿಲ್ಲಾಧಿಕಾರಿ ಹೆಸರು ಹಾಕುವ ಪ್ರಮೇಯ ಎದುರಾದ ಸಂದರ್ಭ ಜಿಲ್ಲಾಧಿಕಾರಿ ಹಿಂದುಯೇತರ ಆದರೆ ಅಪರ ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರ ಹೆಸರು ಹಾಕಬೇಕು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸುದ್ದಿಗೋಷ್ಠಿ ಕರೆದು ಎಲ್ಲಾ ಧರ್ಮದ ಆಚರಣೆಯನ್ನು ಪಾಲಿಸುತ್ತೇನೆ ಎಂದು ಹೇಳಿಕೆ ನೀಡಲಿ. ಹೀಗೆ ಮಾಡಿದರೆ ಮುಸ್ಲಿಂ ಸಂಪ್ರದಾಯದಂತೆ ಕಾಫರ್ ಆಗುತ್ತಾರೆ. ಮುಂದೆ ಬರುವ ಹಿಂದು ಜಿಲ್ಲಾಧಿಕಾರಿ ಹೆಸರನ್ನು ಉಳ್ಳಾಲ ಉರೂಸ್ನಲ್ಲಿ, ಕ್ರಿಶ್ಚಿಯನ್ ಕಾರ್ಯಕ್ರಮಗಳ ಆಮಂತ್ರಣದಲ್ಲಿ ಬಳಸಿಕೊಳ್ಳಲಿ ಎಂದು ಸವಾಲೆಸೆದರು.
ಇಬ್ರಾಹಿಂ ಸಾಹೇಬರು ನೀಡಿದರೆನ್ನಲಾದ ಅನುದಾನ ಯಾರ ದುಡ್ಡು. ಕಿಸೆಯಿಂದ ಹಣ ನೀಡಿದಂತೆ ಮಾತನಾಡುತ್ತಾರೆ. ತಕ್ಷಣ ಈ ಮಾತನ್ನು ಹಿಂಪಡೆಯಬೇಕು. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿ ಬಹುಸಂಖ್ಯಾತರನ್ನು ತುಳಿತಕ್ಕೆ ಒಳಪಡಿಸುವ ಉದ್ದೇಶವಿದು. ಆಮಂತ್ರಣ ಪತ್ರಿಕೆಯಿಂದ ಹೆಸರು ತೆಗೆಯಲೇಬೇಕು. ಅಲ್ಲಿವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು.



ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಮಾತನಾಡಿ, ಶ್ರದ್ಧಾ, ಭಕ್ತಿಯ ಜಾತ್ರೆ ಸಾಂಸ್ಕೃತಿಕ ಕಾರ್ಯಕ್ರಮವಲ್ಲ. ಧಾಮರ್ಿಕ ಕಾರ್ಯಕ್ರಮವಾದ ಪುತ್ತೂರು ಜಾತ್ರೆ ಯಾವಾಗ ಆರಂಭವಾಗಿದೆ ಎಂಬ ಬಗ್ಗೆ ಸಕರ್ಾರದ ಬಳಿಯೂ ದಾಖಲೆಗಳಿಲ್ಲ. ಸಕರ್ಾರದಿಂದ ದೊಡ್ಡ ಲೋಪವಾಗಿದೆ. ಇದನ್ನು ಮುಜರಾಯಿ ಇಲಾಖೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪುತ್ತೂರು ದೇವಳದ ಸಂಪ್ರದಾಯ, ಆಚರಣೆ ವಿಶಿಷ್ಟವಾದದ್ದು. ಉಳ್ಳಾಲ್ತಿ ಆಗಮನಕ್ಕೆ ಮೊದಲು ಬಲ್ನಾಡಿಗೆ ತೆರಳಿ ಹೂ ನೀಡಿ ಆಮಂತ್ರಿಸಬೇಕು, ಉಳ್ಳಾಲ್ತಿ ಮಾಣಿಗೆ ಹೂ ಹಾಕಬೇಕು, ದರ್ಶನ ಬಲಿ ಸಂದರ್ಭ ಗಂಧ ಸ್ವೀಕರಿಸಬೇಕು, ಅಪ್ಪಂಗಾಯಿ ಆಚರಿಸಬೇಕು, ಅವಭೃತಕ್ಕೆ ಹೋಗುವ ಸಂದರ್ಭ ದೈವಕ್ಕೆ ದೇವಳದ ಅಧಿಕಾರ ವಹಿಸುವ ಅನೇಕ ಆಚರಣೆ ಇಲ್ಲಿದೆ. ಇದನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆಚರಿಸಲು ಸಿದ್ಧರಿದ್ದಾರೆಯೇ? ಪ್ರಸಾದ ತೆಗೆದುಕೊಳ್ಳಿ ಎಂದು ಹೇಳುವವರಿಗೆ ಭಕ್ತಿ, ಶ್ರದ್ಧೆ ಇರಬೇಕು. ಭಕ್ತರಿಗೆ ನೋವುಂಟು ಮಾಡುವ ಕೆಲಸ ಜಿಲ್ಲಾಡಳಿತದಿಂದ ನಡೆದಿದೆ. ಇದನ್ನು ಸರಿಪಡಿಸಿ ಪೂರ್ವಶಿಷ್ಟ ಸಂಪ್ರದಾಯದಂತೆ ಆಮಂತ್ರಣ ಮರುಮುದ್ರಿಸಬೇಕು ಎಂದು ಆಗ್ರಹಿಸಿದರು.





ಬಜರಂಗದಳ ಕನರ್ಾಟಕ ದಕ್ಷಿಣ ಪ್ರಾಂತ ಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಮಾತನಾಡಿ, ಅನ್ಯಮತೀಯ ಅಧಿಕಾರಿ ಜಾತ್ರೆ ನಡೆಸುವ ಮೂಲಕ ದಬ್ಬಾಳಿಕೆ ಮಾಡಲು ಹೊರಟಿದ್ದಾರೆ. ಜಿಲ್ಲಾಧಿಕಾರಿ, ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಶಾಸಕಿ ಮಾತಿಗೂ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಹಿಂದು ಸಮಾಜದ ನಂಬಿಕೆ, ಮಠ-ಮಂದಿರವನ್ನು ನಾಶ ಮಾಡುವ ಮೂಲಕ `ನಾವು ಆಡಳಿತ ನಡೆಸುತ್ತೇವೆ, ನೀವು ಆಚರಿಸಿ' ಎಂಬ ಸಂದೇಶ ನೀಡುತ್ತಿದ್ದಾರೆ. ಮೂತರ್ಿ ಪೂಜೆ ನಂಬದ ಅಧಿಕಾರಿ ಮೂಲಕ ಜಾತ್ರೆ ನಡೆಸುತ್ತೀರಿ ಎಂದಾದರೆ ಆಮಂತ್ರಣ ಹಂಚಲು ಬಿಡುವುದಿಲ್ಲ ಎಂದರು.




ಮುಖಂಡರಾದ ರಾಜೇಶ್ ಬನ್ನೂರು, ಪೂವಪ್ಪ, ಕೇಶವ ಬಜತ್ತೂರು, ಮನೋಹರ್, ಅಪ್ಪಯ್ಯ ಮಣಿಯಾಣಿ, ಸಂಜೀವ ಮಠಂದೂರು, ಚನಿಲ ತಿಮ್ಮಪ್ಪ ಶೆಟ್ಟಿ, ಡೀಕಯ್ಯ ಪೆರ್ವೋಡಿ ಮೊದಲಾದವರು ಉಪಸ್ಥಿತರಿದ್ದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮನವಿ ಪತ್ರವನ್ನು ಓದಿದರು.
ಪ್ರತಿಭಟನೆಗೆ ಮೊದಲು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ನಡೆಯಿತು. ಮುಖ್ಯರಸ್ತೆಯಾಗಿ ಪುತ್ತೂರು ಮಿನಿವಿಧಾನಸೌಧ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಬಳಿಕ ಸಹಾಯಕ ಆಯುಕ್ತರ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಲಾಯಿತು.












No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...