ಇಬ್ರಾಹಿಂ ಸಾಹೇಬರು ನೀಡಿದರೆನ್ನಲಾದ ಅನುದಾನ ಯಾರ ದುಡ್ಡು. ಕಿಸೆಯಿಂದ ಹಣ ನೀಡಿದಂತೆ ಮಾತನಾಡುತ್ತಾರೆ. ತಕ್ಷಣ ಈ ಮಾತನ್ನು ಹಿಂಪಡೆಯಬೇಕು. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿ ಬಹುಸಂಖ್ಯಾತರನ್ನು ತುಳಿತಕ್ಕೆ ಒಳಪಡಿಸುವ ಉದ್ದೇಶವಿದು. ಆಮಂತ್ರಣ ಪತ್ರಿಕೆಯಿಂದ ಹೆಸರು ತೆಗೆಯಲೇಬೇಕು. ಅಲ್ಲಿವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಪುತ್ತೂರು ದೇವಳದ ಸಂಪ್ರದಾಯ, ಆಚರಣೆ ವಿಶಿಷ್ಟವಾದದ್ದು. ಉಳ್ಳಾಲ್ತಿ ಆಗಮನಕ್ಕೆ ಮೊದಲು ಬಲ್ನಾಡಿಗೆ ತೆರಳಿ ಹೂ ನೀಡಿ ಆಮಂತ್ರಿಸಬೇಕು, ಉಳ್ಳಾಲ್ತಿ ಮಾಣಿಗೆ ಹೂ ಹಾಕಬೇಕು, ದರ್ಶನ ಬಲಿ ಸಂದರ್ಭ ಗಂಧ ಸ್ವೀಕರಿಸಬೇಕು, ಅಪ್ಪಂಗಾಯಿ ಆಚರಿಸಬೇಕು, ಅವಭೃತಕ್ಕೆ ಹೋಗುವ ಸಂದರ್ಭ ದೈವಕ್ಕೆ ದೇವಳದ ಅಧಿಕಾರ ವಹಿಸುವ ಅನೇಕ ಆಚರಣೆ ಇಲ್ಲಿದೆ. ಇದನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆಚರಿಸಲು ಸಿದ್ಧರಿದ್ದಾರೆಯೇ? ಪ್ರಸಾದ ತೆಗೆದುಕೊಳ್ಳಿ ಎಂದು ಹೇಳುವವರಿಗೆ ಭಕ್ತಿ, ಶ್ರದ್ಧೆ ಇರಬೇಕು. ಭಕ್ತರಿಗೆ ನೋವುಂಟು ಮಾಡುವ ಕೆಲಸ ಜಿಲ್ಲಾಡಳಿತದಿಂದ ನಡೆದಿದೆ. ಇದನ್ನು ಸರಿಪಡಿಸಿ ಪೂರ್ವಶಿಷ್ಟ ಸಂಪ್ರದಾಯದಂತೆ ಆಮಂತ್ರಣ ಮರುಮುದ್ರಿಸಬೇಕು ಎಂದು ಆಗ್ರಹಿಸಿದರು.
ಬಜರಂಗದಳ ಕನರ್ಾಟಕ ದಕ್ಷಿಣ ಪ್ರಾಂತ ಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಮಾತನಾಡಿ, ಅನ್ಯಮತೀಯ ಅಧಿಕಾರಿ ಜಾತ್ರೆ ನಡೆಸುವ ಮೂಲಕ ದಬ್ಬಾಳಿಕೆ ಮಾಡಲು ಹೊರಟಿದ್ದಾರೆ. ಜಿಲ್ಲಾಧಿಕಾರಿ, ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಶಾಸಕಿ ಮಾತಿಗೂ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಹಿಂದು ಸಮಾಜದ ನಂಬಿಕೆ, ಮಠ-ಮಂದಿರವನ್ನು ನಾಶ ಮಾಡುವ ಮೂಲಕ `ನಾವು ಆಡಳಿತ ನಡೆಸುತ್ತೇವೆ, ನೀವು ಆಚರಿಸಿ' ಎಂಬ ಸಂದೇಶ ನೀಡುತ್ತಿದ್ದಾರೆ. ಮೂತರ್ಿ ಪೂಜೆ ನಂಬದ ಅಧಿಕಾರಿ ಮೂಲಕ ಜಾತ್ರೆ ನಡೆಸುತ್ತೀರಿ ಎಂದಾದರೆ ಆಮಂತ್ರಣ ಹಂಚಲು ಬಿಡುವುದಿಲ್ಲ ಎಂದರು.
ಮುಖಂಡರಾದ ರಾಜೇಶ್ ಬನ್ನೂರು, ಪೂವಪ್ಪ, ಕೇಶವ ಬಜತ್ತೂರು, ಮನೋಹರ್, ಅಪ್ಪಯ್ಯ ಮಣಿಯಾಣಿ, ಸಂಜೀವ ಮಠಂದೂರು, ಚನಿಲ ತಿಮ್ಮಪ್ಪ ಶೆಟ್ಟಿ, ಡೀಕಯ್ಯ ಪೆರ್ವೋಡಿ ಮೊದಲಾದವರು ಉಪಸ್ಥಿತರಿದ್ದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮನವಿ ಪತ್ರವನ್ನು ಓದಿದರು.
ಪ್ರತಿಭಟನೆಗೆ ಮೊದಲು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ನಡೆಯಿತು. ಮುಖ್ಯರಸ್ತೆಯಾಗಿ ಪುತ್ತೂರು ಮಿನಿವಿಧಾನಸೌಧ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಬಳಿಕ ಸಹಾಯಕ ಆಯುಕ್ತರ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಲಾಯಿತು.
No comments:
Post a Comment