Tuesday, 29 March 2016



ಮಹಾಲಿಂಗೇಶ್ವರ ದೇವಸ್ಥಾನ ಆಮಂತ್ರಣ ಪತ್ರಿಕೆ ವಿವಾದ ; ಪುತ್ತೂರಿನಲ್ಲಿ ಧರ್ಮಜಾಗೃತಿ ಸಭೆ

ಪುತ್ತೂರು:ಸಹಿಷ್ಣುತೆ ಎಂಬುದು ಈ ದೇಶದ ಹೃದಯ.ಇದು ದೇಶದ ಧರ್ಮ.ಇದನ್ನು ಅಲುಗಾಡಿಸಬೇಡಿ.ಒಂದು ವೇಳೆ ಅಲುಗಾಡಿಸಿದ್ದೇ ಆದರೆ ಸುನಾಮಿಯೇ ಏಳಬಹುದು.ದೇಶದ ಧರ್ಮ ಸಹಿದೇ ಇರುವವರು ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ.ಹೀಗಾಗಿ ಈಗ ಮೊದಲು ಆಗಬೇಕಿರುವುದು ಸಾತ್ವಿಕ ಹೋರಾಟ, ಇದರಲ್ಲಿ ಜಯ ನಿಶ್ಚಿತ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


      ಅವರು  ಪುತ್ತೂರುಶ್ರೀಮಹಾಲಿಂಗೇಶ್ವರದೇವಸ್ಥಾನದ ವಠಾರದಲ್ಲಿ ಮಂಗಳವಾದ ನಡೆದ ಧರ್ಮಜಾಗೃತಿ ಸಭೆಯಲ್ಲಿ ಆಶೀರ್ವಚನ ನೀಡಿದರು.ಈಗಿನ ಹೋರಾಟದಲ್ಲಿ ಸಾಧು-ಸಂತರು, ಹಿಂದೂ ಮುಖಂಡರು ಭಾಗವಹಿಸಿದ್ದಾರೆ.ಇಲ್ಲಿ ಸಮರ್ಥನೆಗಿಂತ ಬೇಕಿರುವುದು ಸಾಮರಸ್ಯ.ಇದು ಅಧಿಕಾರಿಗಳಿಗೆ ಮನವರಿಕೆಯಾಗಬೇಕು.ಹಾಗಿದ್ದರೂ ಹಿಂದೂಗಳ ಭಾವನೆಗೆ ಗೌರವ ಸಿಕ್ಕಿಲ್ಲವಾದರೆ ಹೋರಾಟದ ಕಿಚ್ಚು ಹೆಚ್ಚಾಗಬೇಕು.ಹೀಗಾಗಿ ಈಗಲೂ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ಪತ್ರಿಕೆಯ ವಿಚಾರದಲ್ಲಿ ಸಾಮರಸ್ಯ ಕಾಪಾಡಲು ಅಧಿಕಾರಿಗಳಿಗೆ ಅವಕಾಶ ಇದೆ.ಎಲ್ಲವೂ ತಪ್ಪಾಗಿದೆ, ಸರಿಮಾಡೋಣ ಎಂಬ ಒಂದು ವಾಕ್ಯ ಎಲ್ಲಾ ವಿವಾದವನ್ನೂ ತಣಿಸಲಿದೆ.ಇದಕ್ಕೆ ಹಿಂದೂಗಳ ಸಹಕಾರವೂ ಇದೆ ಎಂದರು.ಪುತ್ತೂರು ದೇಸ್ಥಾನದ ವಿವಿಧ ಕಾರ್ಯಗಳು ಕರಸೇವೆಯ ಮೂಲಕವೇ ಆಗಿದೆ ಎಂದಾದರೆ, ಭಕ್ತರ ಭಾವನೆಗಳಿಗೆ ಗೌರವ ನೀಡುವ ಕೆಲಸವಾಗಬೇಕು ಎಂದರು.



ಮುಖ್ಯ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಕಾರ್ಯವಾಹ ನ.ಸೀತಾರಾಮ, ಹಿಂದೂ ದೇವಸ್ಥಾನಗಳಲ್ಲಿ ಧರ್ಮವೇ ಸಂವಿಧಾನ, ಇದು ಪುರಾಣ ಇತಿಹಾಸಗಳಿಂದ ತಿಳಿಯುತ್ತದೆ. ಈಗಾಗಲೇ ದೇವಸ್ಥಾನಗಳಲ್ಲಿ ತಂತ್ರಿಗಳು ಪ್ರೋಟೋಕಾಲ್ ಮಾಡಿದ್ದಾರೆ.ಅರ್ಚಕರು ಸೇರಿದಂತೆ ಇತರರು ನೀತಿ ನಿರ್ಣಯ ಮಾಡಿದ್ದಾರೆ, ಇದು ಸರಿ ಇಲ್ಲದೇ ಇದ್ದರೆ ನಾವು ಸರಿ ಮಾಡಿಕೊಳ್ಳುತ್ತೇವೆ. ಇದಕ್ಕೆ ಬೇರೆಯವರ ಪ್ರವೇಶ ಬೇಡ.ಹೀಗಾಗಿ ದೇವಸ್ಥಾನದಲ್ಲಿ ಪ್ರೋಟೋಕಾಲ್ ವಿಚಾರವೇ ಅಗತ್ಯವಿಲ್ಲ, ಮುಂದಿನ ದಿನಗಳಲ್ಲಿ  ದೇವಸ್ಥಾನಗಳಲ್ಲಿ  ಈ ಸಕರ್ಾರಿ ಪ್ರೋಟೋಕಾಲ್ ಜಾರಿಗೆ ತರದಂತೆ ಹೋರಟ ಮಾಡಲಾಗುತ್ತದೆ.ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಅನ್ಯಮತೀಯ ಅಧಿಕಾರಿ ಆಹ್ವಾನ ಮಾಡುವುದಕ್ಕೆ ಇಲ್ಲಿ ಭಕ್ತರ ವಿರೋಧ ಇದೆ.ಸಾವಿರಾರು ಭಕ್ತರು ಈ ಬಗ್ಗೆ ಹೇಳಿದರೂ ಅಧಿಕಾರುಗಳು ಸಮರ್ಥನೆ ಮಾಡುತ್ತಾರೆ ಎಂದರೆ ಏನು ಅರ್ಥ ಎಂದು  ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ  ಮಾತನಾಡಿದ ಜಿಲ್ಲಾ ವಿಶ್ವಹಿಂದೂ ಪರಿಷದ್ ಅಧ್ಯಕ್ಷ ಜಗದೀಶ್ ಶೇಣವ, ಹಿಂದೂಗಳ ದೇವಸ್ಥಾನದ ಜಾತ್ರೆಯ ಕಾರ್ಯಕ್ರಮಕ್ಕೆ ಮುಸ್ಲಿಂ ಅಧಿಕಾರಿ ಭಕ್ತಾದಿಗಳನ್ನು ಆಹ್ವಾನಿಸಬೇಕೇ, ಇಂತಹ ಕಾನೂನು ಹಿಂದೂ ಧಾಮರ್ಿಕ ದತ್ತಿ ಇಲಾಖೆಯಲ್ಲಿ ಇಲ್ಲ.ಈ ಇಲಾಖೆಯಲ್ಲಿ  ವಾಹನ ಚಾಲಕನಿಂದ ತೊಡಗಿ ಅಧಿಕಾರಿಯವರೆಗೆ ಯಾವುದೇ ಅಹಿಂದು ಇರಕೂಡದು, ಹಾಗಿದ್ದರೂ ಜಾತ್ರೆಗೆ ಆಹ್ವಾನ ಹೇಗೆ ಸಾಧ್ಯ.ಈ ಬಗ್ಗೆ ಮಾತನಾಡಲು ವಾಹಿನಿಯೊಂದರ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳ ಜೊತೆ ಮುಖಾಮುಖಿಗೆ ಅವಾಕಾಶ ಕೇಳಿದಾಗ ಜಿಲ್ಲಾಧಿಕಾರಿಗಳೇ ನಿರಾಕರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಣಿಯೂರು ಚಾಮುಂಡೇಶ್ವರಿಯ ಶ್ರೀ ಮಹಾಬಲ ಸ್ವಾಮೀಜಿ,ದೇವಸ್ಥಾನಗಳು ಹಿಂದೂಗಳ ಶ್ರದ್ದಾ ಕೇಂದ್ರ. ಇಲ್ಲಿನ ಧಾಮರ್ಿಕ ಭಾವನೆಗೆ ಧಕ್ಕೆ ತರುವ
ಆಗಲೇಬಾರದು.ಕಾನೂನು ಮೀರಿ ಕೆಲಸ ಮಾಡಿದಾಗ ಹೋರಾಟ ನಿವಾರ್ಯವಾಗಿದೆ ಎಂದರು.ನ್ಯಾಯಾಲಯದಲ್ಲೂ ಹಿಂದೂಗಳ ಪರವೇ ತೀಪರ್ು ಬರಲಿ ಎಂದು ಪ್ರಾಥರ್ಿಸೋಣ ಎಂದರು.
ಧಾಮರ್ಿಕ ಜಾಗೃತಿ ಸಭಾಕಾರ್ಯಕ್ರಮಕ್ಕೆ ಮುನ್ನ ದೇವಸ್ಥಾನದ ಎದರು ಗದ್ದೆಯಲ್ಲಿ ಭಜನೆ, ದೇವರ ನಾಮ ಸಂಕೀರ್ತನೆ, ದೇವಸ್ಥಾನದಲ್ಲಿ  ಮಹಾಪೂಜೆ ನಡೆಯಿತು.
ಬಜರಂಗದಳ ಜಿಲ್ಲಾ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಸ್ವಾಗತಿಸಿ ವಿಹಿಂಪ ಅಧ್ಯಕ್ಷ ಡೀಕಯ್ಯ ಪೆರುವೋಡಿ ವಂದಿಸಿದರು.ರಾಜೇಶ್ ಬನ್ನೂರು ಹಾಗೂ ಚಂದ್ರಶೇಖರ ರಾವ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...