Thursday, 12 January 2012

Darmashree Prashasti_Dr.KJ.YeshuDas_2

ಈಶ್ವರಮಂಗಲದಲ್ಲಿ ಡಾ.ಕೆ.ಜೆ.ಜೇಸುದಾಸ್ಗೆ ಧರ್ಮಶ್ರೀ ಪ್ರಶಸ್ತಿ ಪ್ರಧಾನ
ನಾನಿನ್ನೂ ಸಂಗೀತದ ವಿದ್ಯಾಥರ್ಿ - ಜೇಸುದಾಸ್
 ಕನರ್ಾಟಕ್ ಸಂಗೀತ ಎಂಬ ಸಮುದ್ರದ ಮುಂದೆ ನಾನೇನು ಅಲ್ಲ , ನಾನು ಇನ್ನೂ ಸಂಗೀತದ ವಿದ್ಯಾಥರ್ಿಯಷ್ಟೇ.ನನ್ನ ಸಂಗೀತದ ವಿದ್ವತ್ ಇನ್ನೂ ಮುಗಿದಿಲ್ಲ ಹೀಗೆಂದು ಖ್ಯಾತ ಗಾಯಕ ಡಾ.ಕೆ.ಜೆ.ಜೇಸುದಾಸ್ ಹೇಳಿದರು.
ಪುತ್ತೂರಿನ ಈಶ್ವರಮಂಗಲದ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ  ಧರ್ಮಶ್ರೀ ಪ್ರತಿಷ್ಟಾನದ ವತಿಯಿಂದ ಧರ್ಮಶ್ರೀ ಪ್ರಶಸ್ತಿಯ ಗಾಯಕ ಡಾ.ಕೆ.ಜೆ.ಜೇಸುದಾಸ್  ಅವರಿಗೆ ಪ್ರದಾನ ಮಾಡಲಾಯಿತು. ಹೊಸನಗರದ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಗಳು  ಪ್ರಶಸ್ತಯನ್ನು ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಡಾ.ಕೆ.ಜೆ.ಜೇಸುದಾಸ್ , .  ಕನರ್ಾಟಿಕ್ ಸಂಗೀತದಲ್ಲಿ ಸಿಗುವ ಶಾಂತಿ , ನೆಮ್ಮದಿ ಬೇರೆಲ್ಲೂ ಸಿಗಲು ಸಾಧ್ಯುವಿಲ್ಲ, ಇದು ನಮಗೆ ದೊರೆತ ಅಪೂರ್ವ ನಿಧಿ ಎಂದು ಅವರು ಬಣ್ಣಿಸಿದರು.ಯುವ ಜನಾಂಗ ಸಂಗೀತ ಪರಂಪರೆಯನ್ನು ನಿರಂತರ ಅಭ್ಯಾಸದ ಮೂಲಕ ಮುಂದುವರೆಸಬೇಕು.
ಹಿಂದೂಸ್ತಾನಿ ಸಂಗೀತ ಒಂದು ನದಿ ಇದ್ದಂತೆ, ಆದರೆ  ಕನರ್ಾಟಿಕ್ ಸಂಗೀತವು ಸಮುದ್ರವಿದ್ದಂತೆ ಎಂದು ಹೇಳಿದರು.
ಗಾಯಕ ಡಾ.ಕೆ.ಜೆ.ಜೇಸುದಾಸ್ ಅವರಿಗೆ ಧರ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಿದ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಗಳು  ,ಕಳೆದ 50 ವರ್ಷಗಳಿಂದ ಜೇಸುದಾಸ್ ನಡೆಸಿದ ಸಂಗೀತಾರ್ಚನೆಯೇ ನಿಜವಾದ ಈಶ್ವರಾರ್ಚನೆ ಎಂದರು. ಭಾರತದ ಇಡೀ ಶಕ್ತಿಯೇ ಸಂಗೀತ ಎಂದ ಶ್ರೀಗಳು, ಸುಖ ಎಂಬುದು ಉಪಕರಣದಲ್ಲಿ ಇಲ್ಲ ಅಂತ:ಕರಣದಲ್ಲಿದೆ,  ಉಪಕರಣಗಳು ಹೆಚ್ಚಾದರೂ ಇಂದು ಮನುಷ್ಯನಿಗೆ ನೆಮ್ಮದಿ ಸಿಕ್ಕಿಲ್ಲ ಎಂದರು.
ಅಭಿನಂದನಾ ಭಾಷಣ ಮಾಡಿದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಜೇಸುದಾಸ್ ಕಳೆದ 50 ವರ್ಷಗಳಿಂದ ಮಾಡಿದ ಸಾಧನ ನಿಜಕ್ಕೂ ಅಪೂರ್ವವಾದ್ದು, ಜೇಸುದಾಸ್ ಬಗ್ಗೆ ಮಾತನಾಡುವುದು ಸೂರ್ಯ ಚಂದ್ರರನ್ನು ಬಣ್ಣಿಸಿದಂತೆ ಎಂದು ಹೇಳಿದರು.
ಇದೇ ವೇಳೆ ಜೇಸುದಾಸ್ ತಮ್ಮ ಗಾನ ಕಂಠದ ಮೂಲಕ ಸೇರಿದ್ದ ಜನರಿಗೆ ಸಂಗೀತದ ತಂಪೆರದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...