ಪುತ್ತೂರು; ಬಹು ನಿರೀಕ್ಷಿತ ದೃಶ್ಯ ಮೂವೀಸ್ನ ದಯಾನಂದ ಎಸ್.ರೈ ನಿಮರ್ಾಣದ ಮಕ್ಕಳ ಚಿತ್ರ `ಪೆನ್ಸಿಲ್ ಬಾಕ್ಸ್' ಟ್ರೈಲರ್ ಬಿಡುಗಡೆ ಗುರುವಾರ ಪುತ್ತೂರು ಸುದಾನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಮಾಜಿ ಶಾಸಕಿ ಹಾಗೂ ಚಲನಚಿತ್ರ ನಟಿ ಶಕುಂತಳಾ ಶೆಟ್ಟಿ ಟ್ರೈಲರ್ ಬಿಡುಗಡೆ ಮಾಡಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಚಲನಚಿತ್ರ ರಂಗ ಉತ್ತಮವಾದ ಮಾರ್ಗವಾಗಿದೆ. ಪುತ್ತೂರಿನ ಕಲಾವಿದರು ನಟಿಸಿದ ಪೆನ್ಸಿಲ್ ಬಾಕ್ಸ್ ಚಿತ್ರ ಶತದಿನೋತ್ಸವ ಆಚರಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಾಣಲಿ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಪೆನ್ಸಿಲ್ ಬಾಕ್ಸ್ ನಿಮರ್ಾಪಕ ದಯಾನಂದ ಎಸ್ ರೈ ಬೆಟ್ಟಂಪಾಡಿ, ವಿದ್ಯಾಮಾತಾ ಪೌಂಡೇಶನ್ ಪ್ರವರ್ತಕ ಭಾಗ್ಯೇಶ್ ರೈ, ನಗರಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಮಾಮಚ್ಚನ್, ರಂಗಕಮರ್ಿ ಐ.ಕೆ.ಬೊಳುವಾರು, ವಕೀಲ ದುಗರ್ಾಪ್ರಸಾದ್ ರೈ ಕುಂಬ್ರ, ಸುದಾನ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್, ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸಿನಿಮಾ ನಿದರ್ೇಶಕ ಜಯಪ್ರಕಾಶ್, ಉದ್ಯಮಿ ಜಯಂತ ನಡುಬೈಲು, ಪೆನ್ಸಿಲ್ ಬಾಕ್ಸ್ ಚಿತ್ರದ ನಾಯಕಿ ದೀಕ್ಷಾ ರೈ, ಚಲನಚಿತ್ರ ಹಾಡುಗಾತರ್ಿಯರಾದ ಕ್ಷಿತಿ ರೈ ಧರ್ಮಸ್ಥಳ, ಅಪೇಕ್ಷಾ, ಶ್ರೇಷ್ಟಾ ಮತ್ತಿತರರು ಹಾಜರಿದ್ದರು.
ಶಿಕ್ಷಕ ದಯಾನಂದ ರೈ ಕೋರ್ಮಂಡ ಸ್ವಾಗತಿಸಿದರು. ಪೆನ್ಸಿಲ್ ಬಾಕ್ಸ್ ಚಿತ್ರದ ಪ್ರಚಾರಾರ್ಥವಾಗಿ `ಪೆನ್ಸಿಲ್ ಬಾಕ್ಸ್' ರಥಕ್ಕೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಪೆನ್ಸಿಲ್ ಬಾಕ್ಸ್ನ 'ವಂದೇ ಮಾತರಂ' ಹಾಗೂ 'ಸಂಡೇ ನಮ್ದೇ' ಯಶಸ್ವೀ ಹಾಡುಗಳು ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಸುದಾನ ವಿದ್ಯಾಸಂಸ್ಥೆಯಲ್ಲಿ ಪೆನ್ಸಿಲ್ ಬಾಕ್ಸ್ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನವೆಂಬರ್ 29ಕ್ಕೆ ಪೆನ್ಸಿಲ್ ಬಾಕ್ಸ್ ಕನ್ನಡ ಚಲನಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
No comments:
Post a Comment