ಇಬ್ಬರು ವಶಕ್ಕೆ, ಪ್ರಕರಣ ತಿರುಚುವ ಪ್ರಯತ್ನ, ಪತ್ರಕರ್ತ ಸಂಘದಿಂದ ಖಂಡನೆ, ಗುರುವಾರ ಬೆಳಗ್ಗೆ ಠಾಣೆ ಮುಂದೆ ಪ್ರತಿಭಟನೆ
ವಿಟ್ಲ ಅನ್ಯ ಮತದ ಬಡ ಮಹಿಳೆಯೊಬ್ಬರಿಗೆ ಮನೆ ನಿಮರ್ಾಣ ಕೊಡುವ ವಿಚಾರವಾಗಿ ವಿಟ್ಲ ಪತ್ರಕರ್ತ ವಿ.ಟಿ.ಪ್ರಸಾದ್ ಮೇಲೆ ಸುಮಾರು 40ಕ್ಕೂ ಅಧಿಕ ಮಂದಿ ತಂಡ ಯದ್ವಾ ತದ್ವಾ ಬಡಿದು, ತುಳಿದು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದ್ದು, ಸಂಜೆಯಾಗುತ್ತಿದ್ದಂತೆ ಪ್ರಕರಣ ತಿರುಚುವ ಪ್ರಯತ್ನ ನಡೆದಿದೆ.
ಬೆಳಗ್ಗೆ ಸುಮಾರು ಗಂಟೆ 11.45ರ ಸಮಯ ಇವರು ಮನೆ ಪಕ್ಕದಲ್ಲೇ ಇದ್ದ ಶಾಲೆಗೆ ಭೇಟಿ ನೀಡಿ, ಅಲ್ಲಿನ ಸಿಬಂದಿಗಳ ಜತೆ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಎರಡು ರಿಕ್ಷಾಗಳಲ್ಲಿ ಒಂದೇ ಕೋಮಿಗೆ ಸೇರಿದ ತಂಡವೊಂದು (ಸಂಘಟನೆಯ ಹೆಸರಲ್ಲಿ) ಪ್ರಸಾದ್ ಅವರನ್ನು ಹೊರಗೆ ಕರೆದಿದ್ದರು. ಇವರು ಧೈರ್ಯದಿಂದ ಮುನ್ನುಗ್ಗಿದಾಗ ಸುಮಾರು 40ಕ್ಕೂ ಅಧಿಕ ಮಂದಿ ಪ್ರಸಾದ್ ಅವರ ಮೈಮೇಲೆ ಕೈಮಾಡಿದ್ದಾರೆ. ಬಡಿದು ಉರುಳಿಸಿದ ತಂಡ ಅವರನ್ನು ರಿಕ್ಷಾದಲ್ಲಿ ಹಾಕಿ, ಅಲ್ಲೇ ಪಕ್ಕದಲ್ಲಿದ್ದ ಅಲೀಮ ಎಂಬವರ ಮನೆಗೆೆ ಕರೆದುಕೊಂಡು ಸಾಗಿದ್ದಲ್ಲದೆ ಅಲ್ಲಿ ಒಟ್ಟಾಗಿ ಏಕಮಾತ್ರ ವ್ಯಕ್ತಿಯ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ. ಪಕ್ಕಾಸು ತುಂಡುಗಳಿಂದ, ಕೈಯಿಂದ ಹೊಡೆದಿದ್ದು, ಶೂ ಹಾಕಿ ತುಳಿದಿದ್ದಾರೆ. ಇದರಿಂದ ತಲೆ, ಮುಖ, ಸೊಂಟಕ್ಕೆ ಗಂಭೀರ ಗಾಯವಾಗಿದೆ. ವಿ.ಟಿ.ಪ್ರಸಾದ್ ಅವರನ್ನು ಮಲಗಿಸಿ, ಮೈಮೇಲೆ ಅನೇಕ ಮಂದಿ ನಿಂತು, ಕುಣಿದು ಅಮಾನವೀಯವಾಗಿ ವತರ್ಿಸಿದ್ದಾರೆ. ಪ್ರಸಾದ್ ತಲೆ ಮೇಲೆ ಶೂವಿನ ಅಚ್ಚೊತ್ತಿರುವುದು ಕಂಡುಬರುತ್ತದೆ.
ಸಂಪೂರ್ಣ ಪ್ರಜ್ಞೆ ತಪ್ಪಿ ಬಿದ್ದಿದ್ದ ಪ್ರಸಾದ್ ಅವರನ್ನು ಪೊಲೀಸರು ಮತ್ತು ಫ್ರೆಂಡ್ಸ್ ವಿಟ್ಲ ತಂಡದ ಆ್ಯಂಬುಲೆನ್ಸ್ ಮೂಲಕ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಹೆಚ್ಚಿನ ಮಾಹಿತಿಗಾಗಿ ತಲೆ, ಸೊಂಟ ಮೊದಲಾದ ಅಂಗಾಂಗಗಳನ್ನು ಸ್ಕ್ಯಾನಿಂಗ್ ನಡೆಸಲಾಗಿದೆ. ಇದೇ ಸಂದರ್ಭ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ತಿಳಿಸಿದ ಪ್ರಕಾರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆ್ಯಂಬುಲೆನ್ಸ್ಗೆ ಅಡ್ಡ ನಿಂತ ವ್ಯಕ್ತಿ :
ಆ್ಯಂಬುಲೆನ್ಸ್ಗೆ ಅಡ್ಡ ನಿಂತು ಓರ್ವ ಅಪರಿಚಿತ ವ್ಯಕ್ತಿ ಈತನನ್ನು ಬದುಕಿಸುವುದು ಯಾಕೆ ? ಅವನನ್ನು ಆಸ್ಪತ್ರೆಗೆ ಒಯ್ಯಬೇಡಿ. ಅವ ಇಲ್ಲೇ ಸಾಯಲಿ ಎಂದನಂತೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗುವುದೆಂದು ಚಾಲಕ ತಿಳಿಸಿದ್ದಾರೆ.
ಪ್ರಕರಣ ತಿರುಚಲು ಯತ್ನ :
ಈ ನಡುವೆ ಈ ಪ್ರಕರಣವನ್ನು ತಿರುಚಲು ಯತ್ನ ನಡೆಯುತ್ತಿದೆಯೆನ್ನಲಾಗಿದೆ. ಓರ್ವ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ವಿ.ಟಿ.ಪ್ರಸಾದ್ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆಯೆನ್ನಲಾಗಿದೆ. ದೂರಿನ ವಿರುದ್ಧ ಪ್ರತಿದೂರು ದಾಖಲಿಸುವ ನಿಟ್ಟಿನಲ್ಲಿ ಕಾಣದ ಶಕ್ತಿಗಳ ಕೈವಾಡ ನಡೆಯುತ್ತಿದೆಯೆಂದು ತಿಳಿದುಬಂದಿದೆ.
ಅಧ್ಯಕ್ಷರಿಂದ ಖಂಡನೆ:
ಕಾರ್ಯನಿರತ ಪತ್ರಕರ್ತನಿಂದ ತೊಂದರೆಯಾಗಿದ್ದರೆ ದೂ ನೀಡುವುದು ಬಿಟ್ಟು, ಬೇರೆಡೆಯಿಂದ ಎಳೆದೊಯ್ದು ಅಮಾನವಿಯವಾಗಿ ಹಲ್ಲೆ ನಡೆಸಿರುವುದು ಖಂಡನೀಯ ಹಾಗೂ ಹಲ್ಲೆ ನಡೆಸಿದ ಎಲ್ಲಾ ಆರೋಪಿಗಳನ್ನು ಬಂಧಿಸಿ ಸರಿಯಾದ ಶಿಕ್ಷೆ ನೀಡಬೇಕು ಎಂದು ಬಂಟ್ವಾಳ ತಾಲೂಕು ಕಾರ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಹೇಳಿದ್ದಾರೆ.
ಪ್ರತಿಭಟನೆ:
ಪ್ರಕರಣ ತಿರುಚುವ ಪ್ರಯತ್ನ ಮಾಡುವುದು ಸರಿಯಲ್ಲ ಒಬ್ಬ ಪತ್ರಕರ್ತನ ಮೇಲೆ ನೈತಿಕ ಪೊಲೀಸ್ ಗಿರಿ ನಡೆದರೆ ಸಾಮಾನ್ಯನ ಗತಿಯೇನು ಎಂಬ ಪ್ರಶ್ನೆಯನ್ನಿಟ್ಟು, 40 ಆರೋಪಿಗಳನ್ನು ತಕ್ಷಣ ಬಂಧಿಸಿ ಸತ್ಯ ಪ್ರಕರಣವನ್ನು ಎತ್ತಿ ಹಿಡಿಸು ನ್ಯಾಯವೊದಗಿಸುವ ಜೊತೆಗೆ ಪತ್ರಕರ್ತರಿಗೆ ಭದ್ರತೆ ನೀಡಬೇಕೆಂದು ಹೇಳಿ ಗುರುವಾರ ಬೆಳಗ್ಗೆ 10ಕ್ಕೆ ಠಾಣೆಯ ಮುಂದೆ ಪ್ರತಿಭಟನೆ .
ಬಂಟ್ವಾಳ, ಪುತ್ತೂರು, ವಿಟ್ಲ ಕಾರ್ಯನಿರತ ಪತ್ರಕರ್ತರು ಮತ್ತು ಸ್ಥಳೀಯ ನಾಗರಿಕರ ಆಶ್ರಯದಲ್ಲಿ ವಿಟ್ಲ ಪೊಲೀಸ್ ಠಾಣೆಯ ಮುಂದೆ ಪತ್ರಕರ್ತ ವಿ.ಟಿ.ಪ್ರಸಾದ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಅವರು ಮಾತನಾಡಿ ಸಮಾಜದ ದುಃಖ, ಸುಖಗಳಿಗೆ ಸ್ಪಂದಿಸುವ, ಯಾವುದೇ ಜಾತಿ-ಮತ-ಧರ್ಮಗಳ ಬಗ್ಗೆ ಚಿಂತಿಸದೇ ದೇಶ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಎಂಬ ವಿಚಾರವನ್ನೇ ಗಣನೆಗೆ ತೆಗೆದುಕೊಳ್ಳುವ ಪತ್ರಕರ್ತರಿಗೇ ಜಾತಿಯ ನೆಪದಲ್ಲಿ ಸಂಘಟನೆ ಹಲ್ಲೆ ನಡೆಸಿದ್ದು ಖಂಡನೀಯ.ಬಡ ಮಹಿಳೆಗೆ ಮನೆ ಕಟ್ಟಿಸಿ ಕೊಡಿಸುವುದಕ್ಕೆ ಪ್ರಯತ್ನಿಸಿದ ಮತ್ತು ಅದಕ್ಕಾಗಿ ಪತ್ರಿಕೆಗಳ ಮೂಲಕ ಲೇಖನ ಬರೆದು ಸಹಾಯ ಯಾಚಿಸಿದ ವಿ.ಟಿ.ಪ್ರಸಾದ್ ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸ್ ಇಲಾಖೆ ಇನ್ನೂ ಬಂಧಿಸಿಲ್ಲ. ತತ್ಕ್ಷಣ ಆರೋಪಿಗಳನ್ನು ಬಂಸಲೇಬೇಕು. ಮತ್ತು ಪ್ರಕರಣವನ್ನು ತಿರುಚುವ ಪ್ರಯತ್ನ ನಡೆಸಿದಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು.
ಪತ್ರಕರ್ತ ಸಂತೋಷ್ ಅವರು ಮಾತನಾಡಿ ಎಲ್ಲ ಅಕ್ರಮ ಚಟುವಟಿಕೆ, ಭೂಗತ ಜಗತ್ತಿನ ಅವ್ಯವಹಾರಗಳನ್ನು ಬಯಲಿಗೆಳೆದು ಅವನ್ನು ನಿಭರ್ೀತಿಯಿಂದ ಬರೆಯುತ್ತಿದ್ದ ಪತ್ರಕರ್ತ ವಿ.ಟಿ.ಪ್ರಸಾದ್ ಮೇಲೆ ಹಗೆತನವನ್ನಿಟ್ಟುಕೊಂಡು ಈ ಕುಕೃತ್ಯ ನಡೆಸಲಾಗಿದೆ. ಯಾವುದೇ ಕಾರಣವಿಲ್ಲದೇ ಸಹಾಯ ಮಾಡಲು ಹೊರಟ ವ್ಯಕ್ತಿಗೇ ಜೀವಕ್ಕೆ ಕುಂದು ತರುವಂತಹ ತಪ್ಪು ಏನು ? ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆಯನ್ನು ಮಾಡಬೇಡವೇ ? ಯಾವುದೇ ಆರೋಪಿಯನ್ನು ಬಂಧಿಸದೇ ನಿಷ್ಕ್ರಿಯರಾಗಿರುವ ಇಲಾಖೆಗೆ ಏನಾಗಿದೆ ? ಸಾಮಾಜಿಕ ಜೀವನದಲ್ಲೇ ಜಂಜಾಟಗಳಲ್ಲೇ ಇರುವ ಪತ್ರಕರ್ತರನ್ನು ರಕ್ಷಿಸಲಾಗದ ಮತ್ತು ಆರೋಪಿಗಳನ್ನು ರಕ್ಷಿಸುವ ಕಾಣದ ಕೈಗಳ ಬೆಂಬಲ ನೀಡುವ ಜಾಲವನ್ನು ಬೇದಿಸಲಾಗುವುದು ಎಂದು ಎಚ್ಚರಿಸಿದರು.
ಸಿಐಟಿಯು ಮುಖಂಡ ರಾಮಣ್ಣ ವಿಟ್ಲ ,ಪತ್ರಕರ್ತರಾದ ವಿಷ್ಣು ಗುಪ್ತ ಪುಣಚ, ಹಮೀದ್ ಕಂದಕ್, ವಿಶ್ವನಾಥ ಬಂಟ್ವಾಳ, ಸಾಮಾಜಿಕ ಮುಖಂಡರಾದ ರಾಜೇಂದ್ರ ರೈ ಬೈಲುಗುತ್ತು ಪುತ್ತೂರು ಪತ್ರಕರ್ತ ಸಂಘದ ಅಧ್ಯಕ್ಷ ಜೈನುದ್ದೀನ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದಶರ್ಿ ರತ್ನದೇವ್ ಪುಂಜಾಲಕಟ್ಟೆ, ಕೋಶಾಧಿಕಾರಿ ಸಂದೀಪ್ ಸಾಲ್ಯಾನ್, ಅಜಿತ್ ಕುಮಾರ್, ಸಿದ್ದಿಕ್ ಕುಂಬ್ರ, ಕಿಶೋರ್ ಪೆರಾಜೆ, ಜ್ಯೋತಿಪ್ರಕಾಶ್ ಪುಣಚ, ನಿಶಾಂತ್ ಬಿಲ್ಲಂಪದವು, ಹಮೀದ್ ವಿಟ್ಲ, ಲತೀಫ್ ನೇರಳಕಟ್ಟೆ, ಅರುಣ ವಿಟ್ಲ, ಸಿಎಚ್.ಜಯಂತ್ ವಿಟ್ಲ, ನಾಗೇಶ್ ಬಸವನಗುಡಿ, ದೇವಿದಾಸ ಶೆಟ್ಟಿ ಪಾಲ್ತಾಜೆ ಮೊದಲಾದವರು ಉಪಸ್ಥಿತರಿದ್ದರು.










No comments:
Post a Comment